ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾದಲ್ಲಿ ರಾಜಕೀಯ ಚಂಡಮಾರುತ; ತುರ್ತು ಪರಿಸ್ಥಿತಿ ಜಾರಿ

By Staff
|
Google Oneindia Kannada News

ಶ್ರೀಲಂಕಾದಲ್ಲಿ ರಾಜಕೀಯ ಚಂಡಮಾರುತ; ತುರ್ತು ಪರಿಸ್ಥಿತಿ ಜಾರಿ
ಶಾಂತಿ ಪ್ರಕ್ರಿಯೆಗೆ ಭಂಗ ಬಾರದಿರಲಿ -ಕೋಫಿ ಅನ್ನಾನ್‌ ಆಶಯ

ಕೊಲಂಬೊ: ಕೇಂದ್ರ ಸಂಪುಟದಲ್ಲಿನ ಅಸ್ಥಿರತೆಯ ಹಿನ್ನೆಲೆಯಲ್ಲಿ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಎದ್ದಿರುವ ರಾಜಕೀಯ ಚಂಡಮಾರುತವನ್ನು ಹತ್ತಿಕ್ಕಲು ಶ್ರೀಲಂಕಾ ಅಧ್ಯಕ್ಷೆ ಚಂದ್ರಿಕಾ ಕುಮಾರ ತುಂಗ ಅವರು ದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಹೇರಿದ್ದಾರೆ.

ಆಂತರಿಕ ವ್ಯವಸ್ಥೆ, ರಕ್ಷಣೆ, ಮಾಹಿತಿ ಇಲಾಖೆಯ ಸಚಿವರನ್ನು ಮಂಗಳವಾರ ಅಮಾನತುಗೊಳಿಸಲಾಗಿತ್ತು. ಇದರಿಂದಾಗಿ ದೇಶದಲ್ಲಿ ಎದ್ದಿರುವ ರಾಜಕೀಯ ಬಿರುಗಾಳಿಯನ್ನು ಹತ್ತಿಕ್ಕಲು ರಾಷ್ಟ್ರದಲ್ಲಿ ತುರ್ತುಪರಿಸ್ಥಿತಿಯನ್ನು ಘೋಷಿಸಿದ್ದು, ದೇಶದ ಆಂತರಿಕ ಸುವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ಮಿಲಿಟರಿ ಪಡೆಗಳಿಗೆ ವಹಿಸಿಕೊಡಲಾಗಿದೆ.

ವಿಶ್ವಸಂಸ್ಥೆ ಕಳವಳ : ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ಹೇರುವಿಕೆಯ ಬಗ್ಗೆ ವಿಶ್ವಸಂಸ್ಥೆಯ ಕಾರ್ಯದರ್ಶಿ ಕೋಫಿ ಅನ್ನಾನ್‌ ಕಳವಳ ವ್ಯಕ್ತಪಡಿಸಿದ್ದಾರೆ. ಈ ತಾತ್ಕಾಲಿಕ ಬೆಳವಣಿಗೆಯಿಂದಾಗಿ ಎಲ್‌ಟಿಟಿಈ ಜೊತೆಗೆ ಸಾಗುತ್ತಿರುವ ಶಾಂತಿ ಪ್ರಕ್ರಿಯೆಯ ಮಾತುಕತೆಗೆ ಯಾವುದೇ ಭಂಗ ಬಾರದಿರಲಿ ಎಂದು ಅನ್ನಾನ್‌ ಆಶಿಸಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X