ಕಾಡಿನ ಮೂಲೆಯಲ್ಲಿ ವೀರಪ್ಪನ್; ಅವನ ಸುತ್ತ ಎಸ್ಟಿಎಫ್ ಬಲೆ
ಕಾಡಿನ
ಮೂಲೆಯಲ್ಲಿ
ವೀರಪ್ಪನ್;
ಅವನ
ಸುತ್ತ
ಎಸ್ಟಿಎಫ್
ಬಲೆ
ವೀರಪ್ಪನ್
ಕಾರ್ನರ್
ಆಗಿರುವುದು
ಗ್ಯಾರಂಟಿ-
ಎಸ್ಸೆಂ
ಕೃಷ್ಣ
ತೋರಣಗಲ್ಲು ಬಳಿಯ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಅವರು ಸುದ್ದಿಗಾರರ ಜೊತೆ ಮಾತಾಡಿದರು. ವೀರಪ್ಪನ್ನನ್ನು ಸುತ್ತಿವರೆದಿರುವ ಮಾಹಿತಿ ಅಧಿಕೃತವಾಗಿ ಗೊತ್ತಾಗಿದೆ. ಮುಂದಿನ ಕಾರ್ಯಾಚರಣೆ ಬಗ್ಗೆ ಜಿಜ್ಞಾಸೆ ಇದೆ. ಅವನನ್ನು ಜೀವಂತವಾಗಿ ಹಿಡಿಯುವುದೋ, ಕಂಡಲ್ಲಿ ಗುಂಡು ಹಾರಿಸುವುದೋ ಎಂಬ ತೀರ್ಮಾನಕ್ಕೆ ಇನ್ನೂ ಬಂದಿಲ್ಲ. ಈ ಬಗ್ಗೆ ಚರ್ಚಿಸಲು ವೀರಪ್ಪನ್ನನ್ನು ಸುತ್ತುವರೆದಿರುವ ಕಾಡಿನ ಭಾಗಕ್ಕೆ ಸದ್ಯದಲ್ಲೇ ನಾನು ಹೋಗುತ್ತೇನೆ ಎಂದು ಕೃಷ್ಣ ಹೇಳಿದರು.
ಪ್ರಶ್ನೆಯಾಂದಕ್ಕೆ ಉತ್ತರಿಸುತ್ತಾ- ತಮಿಳುನಾಡು ಪೊಲೀಸ್ ಹಾಗೂ ಸರ್ಕಾರದ ಸಂಪೂರ್ಣ ಸಹಕಾರ ಇದ್ದಿದ್ದರಿಂದಲೇ ವೀರಪ್ಪನ್ನನ್ನು ಸುತ್ತುವರೆಯಲು ಸಾಧ್ಯವಾಗಿದೆ. ಈ ಹಿಂದೆ ಪೊಲೀಸರು ಕಾಡಿನೊಳಕ್ಕೆ ನುಗ್ಗುವುದು ದುಸ್ಸಾಧ್ಯವಾಗಿತ್ತು. ಆದರೀಗ ಕಾಡಿನೊಳಗೆ ನುಗ್ಗಿ, ಏಳು ದಿನಗಳವರೆಗೆ ತಂಗುವಂಥಾ ಸಾಹಸವನ್ನೂ ಅವರು ಮಾಡುತ್ತಿದ್ದಾರೆ. ವೀರಪ್ಪನ್ನನ್ನು ‘ಕಾರ್ನರ್’ ಮಾಡಿರುವುದಾಗಿದೆ. ಮುಂದೇನು ಎಂಬ ಬಗ್ಗೆ ಬೇಗ ತೀರ್ಮಾನಕ್ಕೆ ಬರುತ್ತೇವೆ ಎಂದರು.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್