ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾದಗಳ ನಾಟಕ : ಈಗ ರಂಗಾಯಣದ ನಿರ್ದೇಶಕರಾರಪ್ಪ ?

By Staff
|
Google Oneindia Kannada News

ವಿವಾದಗಳ ನಾಟಕ : ಈಗ ರಂಗಾಯಣದ ನಿರ್ದೇಶಕರಾರಪ್ಪ ?
ಪ್ರಸನ್ನರಿಂದ ರಾಜೀನಾಮೆ ನಂತರದ ಕಾಗದ ಪತ್ರಗಳ ಸಲ್ಲಿಕೆ

ಮೈಸೂರು: ರಂಗ ಭೂಮಿ ಕ್ಷೇತ್ರದಲ್ಲಿ ಹೆಸರು ಮಾಡುವ ಜೊತೆ ಜೊತೆಗೆ ವಿವಾದಗಳಿಗೂ ಹೆಸರಾಗಿದ್ದ ರಾಜ್ಯದ ಪ್ರತಿಷ್ಠಿತ ರೆಪರ್ಟರಿ ರಂಗಾಯಣ ಸಂಸ್ಥೆಯ ನಿರ್ದೇಶಕರ ಹುದ್ದೆ ಖಾಲಿಯಾಗಿದೆ.

ರಂಗಾಯಣದ ನಿರ್ದೇಶಕರಾಗಿದ್ದ ಪ್ರಸನ್ನ ಅವರು ಎರಡು ತಿಂಗಳ ಹಿಂದೆಯೇ ತಮ್ಮ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಅವರ ರಾಜೀನಾಮೆ ಅಂಗೀಕೃತವಾದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿರಲಿಲ್ಲ. ಸೋಮವಾರ (ನ. 3)ದಂದು ಪ್ರಸನ್ನ ಅವರು ರಂಗಾಯಣ ಕಚೇರಿಗೆ ಆಗಮಿಸಿದ್ದು, ರಾಜೀನಾಮೆ ನಂತರ ಚುಕ್ತಾ ಮಾಡಬೇಕಿದ್ದ ಎಲ್ಲ ಕಾಗದ ಪತ್ರಗಳನ್ನು ಒಪ್ಪಿಸಿ ರಂಗಾಯಣದಿಂದ ಹೊರ ನಡೆದಿದ್ದಾರೆ.

ಆದರೆ ಪ್ರಸನ್ನ ಅವರ ಕೈಯಿಂದ ಯಾವ ಅಧಿಕಾರಿಯೂ ಈ ಹುದ್ದೆಯನ್ನು ವಹಿಸಿಕೊಂಡಿಲ್ಲ ಎಂದು ರಂಗಾಯಣದ ಅಧಿಕಾರಿಗಳು ಹೇಳಿದ್ದಾರೆ. ಪ್ರಸ್ತುತ ರಂಗಾಯಣದ ನಿರ್ದೇಶಕರ ಹುದ್ದೆ ಖಾಲಿಯಾಗಿದ್ದು, ಈ ಕುರಿತು ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X