Get Updates
Get notified of breaking news, exclusive insights, and must-see stories!

ವಿವಾದಗಳ ನಾಟಕ : ಈಗ ರಂಗಾಯಣದ ನಿರ್ದೇಶಕರಾರಪ್ಪ ?

ವಿವಾದಗಳ ನಾಟಕ : ಈಗ ರಂಗಾಯಣದ ನಿರ್ದೇಶಕರಾರಪ್ಪ ?
ಪ್ರಸನ್ನರಿಂದ ರಾಜೀನಾಮೆ ನಂತರದ ಕಾಗದ ಪತ್ರಗಳ ಸಲ್ಲಿಕೆ

ಮೈಸೂರು: ರಂಗ ಭೂಮಿ ಕ್ಷೇತ್ರದಲ್ಲಿ ಹೆಸರು ಮಾಡುವ ಜೊತೆ ಜೊತೆಗೆ ವಿವಾದಗಳಿಗೂ ಹೆಸರಾಗಿದ್ದ ರಾಜ್ಯದ ಪ್ರತಿಷ್ಠಿತ ರೆಪರ್ಟರಿ ರಂಗಾಯಣ ಸಂಸ್ಥೆಯ ನಿರ್ದೇಶಕರ ಹುದ್ದೆ ಖಾಲಿಯಾಗಿದೆ.

ರಂಗಾಯಣದ ನಿರ್ದೇಶಕರಾಗಿದ್ದ ಪ್ರಸನ್ನ ಅವರು ಎರಡು ತಿಂಗಳ ಹಿಂದೆಯೇ ತಮ್ಮ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಅವರ ರಾಜೀನಾಮೆ ಅಂಗೀಕೃತವಾದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿರಲಿಲ್ಲ. ಸೋಮವಾರ (ನ. 3)ದಂದು ಪ್ರಸನ್ನ ಅವರು ರಂಗಾಯಣ ಕಚೇರಿಗೆ ಆಗಮಿಸಿದ್ದು, ರಾಜೀನಾಮೆ ನಂತರ ಚುಕ್ತಾ ಮಾಡಬೇಕಿದ್ದ ಎಲ್ಲ ಕಾಗದ ಪತ್ರಗಳನ್ನು ಒಪ್ಪಿಸಿ ರಂಗಾಯಣದಿಂದ ಹೊರ ನಡೆದಿದ್ದಾರೆ.

ಆದರೆ ಪ್ರಸನ್ನ ಅವರ ಕೈಯಿಂದ ಯಾವ ಅಧಿಕಾರಿಯೂ ಈ ಹುದ್ದೆಯನ್ನು ವಹಿಸಿಕೊಂಡಿಲ್ಲ ಎಂದು ರಂಗಾಯಣದ ಅಧಿಕಾರಿಗಳು ಹೇಳಿದ್ದಾರೆ. ಪ್ರಸ್ತುತ ರಂಗಾಯಣದ ನಿರ್ದೇಶಕರ ಹುದ್ದೆ ಖಾಲಿಯಾಗಿದ್ದು, ಈ ಕುರಿತು ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+