2010ರ ಹೊತ್ತಿಗೆ ಕರ್ನಾಟಕದಲ್ಲಿ 10 ಲಕ್ಷ ಐಟಿ ಉದ್ಯೋಗ-ಕೃಷ್ಣ
2010ರ ಹೊತ್ತಿಗೆ ಕರ್ನಾಟಕದಲ್ಲಿ 10 ಲಕ್ಷ ಐಟಿ ಉದ್ಯೋಗ-ಕೃಷ್ಣ
ಬೆಂಗಳೂರು ಐಟಿ ಡಾಟ್ ಕಾಂ- 2003 ಮೇಳಕ್ಕೆ ಚಾಲನೆ
ಬೆಂಗಳೂರು ಐಟಿ ಡಾಟ್ ಕಾಂ 2003 ಮೇಳವನ್ನು ಶನಿವಾರ (ನ. 01) ಉದ್ಘಾಟಿಸಿ ಕೃಷ್ಣ ಮಾತನಾಡಿದರು. ಈ ಮುಂಚೆ ಸಾಫ್ಟ್ವೇರ್ ಮಂತ್ರ ಪಠಿಸುತ್ತಿದ್ದ ಕೃಷ್ಣ ಅವರ ಬಾಯಿತುಂಬಾ ಈ ಸಲ ಹಾರ್ಡ್ವೇರ್ದೇ ಮಾತು. ಬೆಂಗಳೂರಿನಲ್ಲಿ ಹಾರ್ಡ್ವೇರ್ ಟೆಕ್ನಾಲಜಿ ಪಾರ್ಕ್ ಸ್ಥಾಪಿಸುವ ಹಾದಿಯಲ್ಲೂ ಕಾರ್ಯಪಡೆ ಸಾಗಿದೆ ಎಂದ ಮುಖ್ಯಮಂತ್ರಿ, 5 ಲಕ್ಷಕ್ಕೂ ಹೆಚ್ಚು ವೃತ್ತಿಪರರಿಗೆ ಹಾರ್ಡ್ವೇರ್ ಕ್ಷೇತ್ರ ಉದ್ಯೋಗ ಒದಗಿಸಲಿದೆ ಎಂದು ಭರವಸೆಯ ಮಿಂಚು ಮಿಂಚಿಸಿದರು.
ಐಟಿ ಉದ್ದಿಮೆಯ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಏಕ ಗವಾಕ್ಷಿ ಪದ್ಧತಿಯನ್ನು ಜಾರಿಗೆ ತರುವ ಹಾಗೂ ಕಾನೂನುಗಳ ಸುಧಾರಣೆ ಮಾಡುವ ಮೂಲಕ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಬೆಳೆಯಲು ಸರ್ಕಾರ ಬೆನ್ನು ತಟ್ಟುತ್ತಿದೆ. ಹೀಗಾಗಿ ಬಂಡವಾಳದಾರರು ನಮ್ಮತ್ತ ಧಾವಿಸುತ್ತಿದ್ದಾರೆ. ಹಾಗಂತ ಎಗ್ಗಿಲ್ಲದ ಉದ್ದಿಮೆ ಬೆಳೆದು, ಇತರೆ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವುದು ಸಾಧ್ಯವಿಲ್ಲ. ಇದಕ್ಕಾಗಿ ಬೆಳೆದಿರುವ ಐಟಿ ಉದ್ದಿಮೆಯ ನಿಯಂತ್ರಣಕ್ಕೆಂದೇ ಒಂದು ಕಾರಿಡಾರ್ ಸ್ಥಾಪಿಸಲು ಒಂದು ಜಾಗೆಯನ್ನು ಗೊತ್ತು ಪಡಿಸಿದ್ದೇವೆ ಎಂದರು.
ವ್ಯಾಪಾರ ಪ್ರಕ್ರಿಯೆ ಎರವಲು ಸೇವೆ (ಬಿಪಿಓ) ಕ್ಷೇತ್ರ ಈಚೆಗೆ ಸದ್ದು ಮಾಡುತ್ತಿದೆ. ಮೆಕ್ಕಿನ್ಸೆ ವರದಿ ಪ್ರಕಾರ 2010ನೇ ಇಸವಿ ಹೊತ್ತಿಗೆ ರಾಜ್ಯದಲ್ಲಿ 10 ಲಕ್ಷ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ಈ ಪೈಕಿ 40 ಪ್ರತಿಶತ ಬಿಪಿಓಗೆ ಸಂಬಂಧಪಟ್ಟಿರುತ್ತವೆ ಎಂದು ಹೇಳಿದರು.
ಕರ್ನಾಟಕ ಇವತ್ತು ಕೇವಲ ಐಟಿ ಉದ್ದಿಮೆ ಕೇಂದ್ರವಾಗಿ ಅಷ್ಟೇ ಅಲ್ಲದೆ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಅಂಡ್ ಡಿ) ಕೇಂದ್ರಗಳ ತಾಣವಾಗಿಯೂ ಬೆಳೆದಿದೆ. 77 ಜಾಗತಿಕ ಕಂಪನಿಗಳು ಬೆಂಗಳೂರಲ್ಲಿ ಆರ್ ಅಂಡ್ ಡಿ ಕೇಂದ್ರಗಳನ್ನು ತೆರೆದಿವೆ. ಇನ್ನು ಕೆಲವು ಕಂಪನಿಗಳು ಇಲ್ಲಿನ ಖಾಸಗಿ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಆರ್ ಅಂಡ್ ಡಿ ಕೇಂದ್ರಗಳನ್ನು ನಡೆಸುತ್ತಿವೆ ಎಂದರು.
ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ತೊಂದರೆಗಳು ಬಗೆಹರಿದರೆ ಡಿಸೆಂಬರ್ನಲ್ಲಿ ಬೆಂಗಳೂರಿನ ಅಂತತರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿ ಶುರುವಾಗುತ್ತದೆ. 33 ತಿಂಗಳಲ್ಲಿ ಯೋಜನೆ ಮುಗಿದು, ಬೆಂಗಳೂರಿಗೆ ವಿದೇಶೀಯರು ಸಲೀಸಾಗಿ ಬರುವಂತಾಗುತ್ತದೆ ಎಂದು ಪುನರುಚ್ಚರಿಸಿದರು.
ಸಮಾರಂಭದಲ್ಲಿ ಮಾತನಾಡಿದ ರಾಜ್ಯಪಾಲ ಟಿ.ಎನ್.ಚತುರ್ವೇದಿ, ಸಾಮಾನ್ಯರಿಗೆ ಐಟಿ ಎಂಬ ಹಳೇ ಮಂತ್ರವನ್ನು ಮತ್ತೆ ಹೇಳಿದರು. ಡಿಜಿಟಲ್ ಕಂದರವನ್ನು ಮುಚ್ಚಿ ಹಾಕುವಂತೆ ತಂತ್ರಜ್ಞಾನ ಬೆಳೆಯಬೇಕು ಎಂದು ಕರೆ ಕೊಟ್ಟರು.
ಬೆಂಗಳೂರು ಐಟಿ ಡಾಟ್ ಕಾಂನ ಆರನೇ ವರ್ಷದ ಈ ಕಂತಿನಲ್ಲಿ ಒಟ್ಟು 285 ಕಂಪನಿಗಳು ಭಾಗವಹಿಸಿವೆ. ಇನ್ನು ಐದು ದಿನಗಳ ಕಾಲ ಮೇಳ ನಡೆಯಲಿದೆ.
(ಪಿಟಿಐ)
ಮುಖಪುಟ / ಐಟಿ - ಬಿಟಿ
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications