Get Updates
Get notified of breaking news, exclusive insights, and must-see stories!

ರಾಜ್ಯೋತ್ಸವ ಕೊಡುಗೆ-ಕಡುಬಡವರಿಗೆ ಪಡಿತರ ದರದ ದಿನಸಿ

ರಾಜ್ಯೋತ್ಸವ ಕೊಡುಗೆ-ಕಡುಬಡವರಿಗೆ ಪಡಿತರ ದರದ ದಿನಸಿ
ಬಡತನ ರೇಖೆಗಿಂತ ಕೆಳಗಿರುವ 63 ಲಕ್ಷ ಕುಟುಂಬಗಳ ತುತ್ತಿನಚೀಲಕ್ಕೆ ಚಿಂತಿಲ್ಲ

ಬೆಂಗಳೂರು : ಬಡತನ ರೇಖೆಗಿಂತ ಕೆಳಗಿರುವ ರಾಜ್ಯದ 63 ಲಕ್ಷ ಕುಟುಂಬಗಳು ರಾಜ್ಯೋತ್ಸವದ ದಿನದಿಂದ ಹಳದಿ ಕಾರ್ಡುಗಳ ತೋರಿಸಿ ಪಡಿತರ ದರದಲ್ಲಿ ಆಹಾರ ಧಾನ್ಯ ಪಡೆಯಲಿದ್ದಾರೆ.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾಮಲಿಂಗಾ ರೆಡ್ಡಿ ಶುಕ್ರವಾರ (ಅ. 31) ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಈಗಾಗಲೇ ಹಸಿರು ಕಾರ್ಡುಗಳ ಬದಲಿಗೆ ಹಳದಿ ಕಾರ್ಡುಗಳನ್ನು ವಿತರಿಸಲಾಗಿದೆ. ಪ್ರತಿ ಕುಟುಂಬಕ್ಕೆ ಮಾಹೆಗೊಮ್ಮೆ 28 ಕಿಲೋ ಅಕ್ಕಿ, 7 ಕಿಲೋ ಗೋಧಿ ಮತ್ತು 10 ಲೀಟರ್‌ ಸೀಮೆಎಣ್ಣೆಯನ್ನು ಪಡಿತರ ದರದಲ್ಲಿ ಕೊಡಲಾಗುವುದು. ಇನ್ನೂ 11 ಲಕ್ಷ ಬಡ ಕುಟುಂಬಗಳ ಅರ್ಜಿಗಳು ವಿಲೇವಾರಿಯಾಗಿಲ್ಲ. ಈ ಪೈಕಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಬಗ್ಗೆ ದೃಢೀಕೃತ ಮಾಹಿತಿ ಪಡೆದ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ನಗರದಲ್ಲಿ ವಾರ್ಷಿಕ 17 ಸಾವಿರ ರುಪಾಯಿ ಹಾಗೂ ಹಳ್ಳಿಗಳಲ್ಲಿ ವಾರ್ಷಿಕ 12 ಸಾವಿರ ರುಪಾಯಿ ಆದಾಯ ಇರುವ ಕುಟುಂಬಗಳು ಮಾತ್ರ ಈ ಸೌಲಭ್ಯ ಪಡೆಯಲು ಅರ್ಹವಾಗಿರುತ್ತವೆ. ಕೆಲವು ದಿನಗಳಿಂದ ನಿಲ್ಲಿಸಿರುವ ಪಡಿತರ ದರದಲ್ಲಿ ಧಾನ್ಯ ಹಂಚಿಕೆ ಈಗ ಪುನರಾರಂಭವಾಗುತ್ತಿದೆ. ಬಡ ಜನತೆಗೆ ಇದು ಸರ್ಕಾರದ ರಾಜ್ಯೋತ್ಸವದ ಕೊಡುಗೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+