ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನ ಸ್ಪಂದನದ ಬಿಸಿ : ಸಚಿವ ರಂಗನಾಥ್‌ಗೆ ನಿವೃತ್ತಿ ಯ ಯೋಚನೆ

By Staff
|
Google Oneindia Kannada News

ಜನ ಸ್ಪಂದನದ ಬಿಸಿ : ಸಚಿವ ರಂಗನಾಥ್‌ಗೆ ನಿವೃತ್ತಿ ಯ ಯೋಚನೆ
ಮಲ್ಲೇಶ್ವರಂ ಹಿರಿಯ ನಾಗರಿಕರ ವೇದಿಕೆಗೆ ಚಾಲನೆ

ಬೆಂಗಳೂರು : ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರ ಜನ ಸ್ಪಂದನ ಬಸ್‌ ಯಾತ್ರೆ ಸಂದರ್ಭದಲ್ಲಿ , ತವರು ಚಿತ್ರದುರ್ಗದಲ್ಲಿ ಭಾರೀ ಜನ ವಿರೋಧ ಎದುರಿಸಿದ್ದ ಅರಣ್ಯ ಖಾತೆ ಸಚಿವ ಕೆ.ಎಚ್‌.ರಂಗನಾಥ್‌ ರಾಜಕಾರಣದಿಂದ ದೂರ ಸರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಜನರಿಂದ ಒತ್ತಡ ಬರುವ ಮುನ್ನವೇ ರಾಜಕೀಯದಿಂದ ದೂರ ಸರಿಯುವುದು ಒಳ್ಳೆಯದು. ನಿಮ್ಮ ಸೇವೆ ಸಾಕು ಎಂದು ಜನ ಹೇಳುವ ಮುನ್ನವೇ ನನ್ನಂತವರು ಸಕ್ರಿಯ ರಾಜಕಾರಣದಿಂದ ನಿವೃತ್ತರಾಗಬೇಕು ಎಂದು ಭಾನುವಾರ (ಅ.19) ಸಚಿವ ರಂಗನಾಥ್‌ ಹೇಳಿದರು. ಮಲ್ಲೇಶ್ವರಂ ಹಿರಿಯ ನಾಗರಿಕರ ವೇದಿಕೆ ಉದ್ಘಾಟಿಸಿ ರಂಗನಾಥ್‌ ಮಾತನಾಡುತ್ತಿದ್ದರು.

ಗ್ರಾಮೀಣ ಭಾಗದ ಹಿರಿಯ ನಾಗರಿಕರಿಗೆ ಸರ್ಕಾರದ ಎಲ್ಲ ಸವಲತ್ತುಗಳು ದೊರೆಯುವಂತೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ರಂಗನಾಥ್‌, ಹಿರಿಯ ನಾಗರಿಕರಿಗೆ ಹೆಚ್ಚಿನ ಸವಲತ್ತು ನೀಡುವ ನಿಟ್ಟಿನಲ್ಲಿ ಕಾರ್ಯಪಡೆಯಾಂದನ್ನು ರಚಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದರು.

(ಇನ್ಫೋ ವಾರ್ತೆ)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X