ಜನಸ್ಪಂದನ ‘ಜಾಕ್ಪಾಟ್’ : ನವೆಂಬರ್ಗೆ ಆನ್ಲೈನ್ ಕಡೇ ಆಟ
ಜನಸ್ಪಂದನ ‘ಜಾಕ್ಪಾಟ್’ : ನವೆಂಬರ್ಗೆ ಆನ್ಲೈನ್ ಕಡೇ ಆಟ
ರಿkುೕ ಸಮೂಹ ಸಂಸ್ಥೆ ಜೊತೆ ಒಪ್ಪಂದ ತೊಡೆದುಕೊಳ್ಳಲು ನಿರ್ಧಾರ
ಬೆಂಗಳೂರು : ರಾಜ್ಯದಲ್ಲಿ ನವೆಂಬರ್ನಿಂದಲೇ ಆನ್ಲೈನ್ ಲಾಟರಿ ನಿಷೇಧಕ್ಕೆ ಮುಖ್ಯಮಂತ್ರಿ ಕೃಷ್ಣ ತೀರ್ಮಾನಿಸಿದ್ದಾರೆ.
ರಾಜ್ಯವನ್ನು ಕಾಡುತ್ತಿರುವ ಸತತ ಬರ, ಕೃಷಿ ಸಾಲದ ಜತೆಗೆ ಆನ್ಲೈನ್ ಲಾಟರಿ ಕೂಡ ರೈತರ ಆತ್ಮಹತ್ಯೆಗೆ ಕಾರಣ ಎಂಬ ಕೂಗಿನ ಹಿನ್ನೆಲೆಯಲ್ಲಿ ಕೃಷ್ಣ ಈ ನಿರ್ಧಾರಕ್ಕೆ ಬಂದಿದ್ದಾರೆ.
ರೈತರು ಕೃಷಿ ಸಾಲದ ಹೊರೆಯಿಂದ ಕಂಗೆಟ್ಟಿದ್ದಾರೆ. ಕೃಷಿಕರು ಸೇರಿದಂತೆ ಅನೇಕ ಜನ ಆನ್ಲೈನ್ ಲಾಟರಿ ಜೂಜಿನಿಂದ ಮನೆ- ಮಠ ಕಳೆದುಕೊಂಡು ಬೀದಿಗೆ ಬೀಳುತ್ತಿದ್ದಾರೆ ಎಂಬ ವರದಿ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ರೈತರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಮುಖ್ಯಮಂತ್ರಿ ಕೂಲಂಕಷ ವರದಿ ತರಿಸಿಕೊಂಡಾಗ, ಆನ್ಲೈನ್ ಲಾಟರಿ ಚಟಕ್ಕೆ ಬಿದ್ದು ಕೆಲವರು ಸಾಲ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಆನ್ಲೈನ್ ಮಾರಾಟ ಸಂಬಂಧ ರಿkುೕ ಸಮೂಹ ಸಂಸ್ಥೆಯ ಆಲ್ಟ್ರಾ ಎಂಟರ್ಟೇನ್ಮೆಂಟ್ ಸಲ್ಯೂಷನ್ಸ್ ಹಾಗೂ ರಾಜ್ಯ ಸರಕಾರದ ನಡುವೆ ಕಳೆದ ವರ್ಷ ಆರಂಭದಲ್ಲಿ ಒಪ್ಪಂದ ಆಗಿದೆ. ಐದು ವರ್ಷ ಅವಧಿಯ ಈ ಒಪ್ಪಂದದ ಪ್ರಕಾರ ಅಲ್ಟ್ರಾ ಸಂಸ್ಥೆ ರಾಜ್ಯ ಸರ್ಕಾರಕ್ಕೆ ಐದು ವರ್ಷದಲ್ಲಿ 1, 096 ಕೋಟಿ ರುಪಾಯಿ ಸಂದಾಯ ಮಾಡಬೇಕು. ಈವರೆಗೆ ನೂರು ಕೋಟಿ ರು.ಗೂ ಹೆಚ್ಚು ಆದಾಯ ರಾಜ್ಯ ಸರಕಾರಕ್ಕೆ ಸಲ್ಲಿಕೆಯಾಗಿದೆ.
ಬರ ಹಾಗೂ ರೈತರ ಆತ್ಮಹತ್ಯೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈಗ ಆನ್ಲೈನ್ ಲಾಟರಿ ನಿಷೇಧಕ್ಕೆ ತೀರ್ಮಾನಿಸಿರುವುದರಿಂದ ಅಲ್ಟ್ರಾ ಸಂಸ್ಥೆ ಜತೆಗಿನ ಒಪ್ಪಂದ ನವೆಂಬರ್ನಿಂದ ರದ್ದಾಗಲಿದೆ.
ಕಳೆದ ಅ. 8 ರಂದು ಹೊರವಲಯ ಅರಿಶಿನಕುಂಟೆಯಲ್ಲಿ ನಡೆದ ‘ಜನಸ್ಪಂದನ’ ಉದ್ಘಾಟನೆ ಸಮಾರಂಭದಲ್ಲಿ ಸಭಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಕೃಷ್ಣ ಆನ್ಲೈನ್ ಲಾಟರಿ ನಿಷೇಧ ಕುರಿತು ಬರುವ ಬಜೆಟ್ನಲ್ಲಿ ತೀರ್ಮಾನ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು.
ಆದರೆ ಮರುದಿನ ಚಿತ್ರದುರ್ಗದಲ್ಲಿ ಜನಸ್ಪಂದನ ಕಾರ್ಯಕ್ರಮದ ವೇಳೆ ರೈತ ಸಂಘಟನೆಯವರು ಆನ್ಲೈನ್ ಲಾಟರಿ ಅಂಗಡಿಗಳ ಮೇಲೆ ದಾಳಿ ಮಾಡಿದ್ದರು. ಇದು ಆನ್ಲೈನ್ ಬಗ್ಗೆ ಜನಸಾಮಾನ್ಯರಲ್ಲಿ ಮಡುಗಟ್ಟಿರುವ ರೋಷವನ್ನು ಬಿಂಬಿಸಿತ್ತು. ಜನಸ್ಪಂದನ ಯಾತ್ರೆ ಸಂದರ್ಭದಲ್ಲಿ ಆನ್ಲೈನ್ ಲಾಟರಿ ಬೇಡ ಎಂಬ ಮನವಿಗಳು ಮುಖ್ಯಮಂತ್ರಿಯವರಿಗೆ ಬಂದಿವೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ನವೆಂಬರ್ನಿಂದ ಆನ್ಲೈನ್ ಲಾಟರಿ ನಿಷೇಧಕ್ಕೆ ಕೃಷ್ಣ ತೀರ್ಮಾನಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ಮಧ್ಯೆ, ರಿkುೕ ಸಮೂಹ ಸಂಸ್ಥೆ ಅಧ್ಯಕ್ಷ ಸುಭಾಷ್ ಚಂದ್ರ ಮುಖ್ಯಮಂತ್ರಿಯವರಿಗೆ ಪತ್ರ ಬರೆದು, ಅನಧಿಕೃತ ಲಾಟರಿ ನಿಯಂತ್ರಣಕ್ಕೆ ಒತ್ತಾಯಿಸಿದ್ದರು. ಆನ್ಲೈನ್ ಲಾಟರಿ ವಿರುದ್ಧ ಸಾರಾಯಿ ಮತ್ತು ಅನಧಿಕೃತ ಲಾಟರಿ ಲಾಬಿ ಕೆಲಸ ಮಾಡುತ್ತಿದೆ ಎಂದು ದೂರಿದ್ದರು. ಮುಂದಿನ ಬಜೆಟ್ವರೆಗೂ ಕಾಯಿಸದೆ ಆನ್ಲೈನ್ ಲಾಟರಿ ಬಗ್ಗೆ ಸ್ಪಷ್ಟ ನಿಲುವು ತಿಳಿಸಬೇಕು ಎಂದು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದರು.
(ಸ್ನೇಹಸೇತು- ವಿಜಯ ಕರ್ನಾಟಕ)
ಮುಖಪುಟ / ಕೃಷ್ಣಗಾರುಡಿ
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications