ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅ.19ರಂದು ಹರಿಹರಪುರ ಸಚ್ಚಿದಾನಂದ ಸ್ವಾಮೀಜಿಗೆ ಗುರುವಂದನೆ
ಅ.19ರಂದು
ಹರಿಹರಪುರ
ಸಚ್ಚಿದಾನಂದ
ಸ್ವಾಮೀಜಿಗೆ
ಗುರುವಂದನೆ
ಸುಬ್ರಹ್ಮಣ್ಯ
ದೇವಸ್ಥಾನದಿಂದ
ಶಂಕರ
ಮಠದವರೆಗೆ
ಶ್ರೀಗಳ
ಮೆರವಣಿಗೆ
ಶಂಕರಪುರದಲ್ಲಿರುವ ಶಂಕರ ಮಠದ ಶಾರದಾ ವಿಹಾರ ಸಭಾಂಗಣದಲ್ಲಿ ಮುಂಜಾನೆ 7 ಗಂಟೆಗೆ ಕಾರ್ಯಕ್ರಮ ಶುರುವಾಗಲಿದ್ದು, ಮಠದ ಶಿಷ್ಯರು ಸ್ವಾಮೀಜಿಗೆ ನಿಧಿ ಸಮರ್ಪಿಸಲಿದ್ದಾರೆ. ದಿನವಿಡೀ ಭರ್ತಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಸಂಜೆ ನಾಲ್ಕು ಗಂಟೆಗೆ ಶಂಕರಪುರಂನ ಸಜ್ಜನರಾವ್ ವೃತ್ತದ ಸುಬ್ರಹ್ಮಣ್ಯ ದೇವಸ್ಥಾನದಿಂದ ಶಂಕರ ಮಠದವರೆಗೆ ಸ್ವಾಮೀಜಿಯನ್ನು ಅದ್ಧೂರಿ ಮೆರವಣಿಗೆಯಲ್ಲಿ ಕರೆ ತರಲಾಗುವುದು. ನಂತರ ಸ್ವಾಮೀಜಿ ಮಠದ ಸ್ವಯಂ ಸೇವಾ ಪರಿಷತ್ತಿನ ಬೆಂಗಳೂರು ಶಾಖೆಯನ್ನು ಉದ್ಘಾಟಿಸಲಿದ್ದಾರೆ.
ಹರಿಹರಪುರವನ್ನು ದೇಶದ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಕೇಂದ್ರವನ್ನಾಗಿ ಬೆಳೆಸಲು ಮಹತ್ವಾಕಾಂಕ್ಷೆಯ ಯೋಜನೆಯಾಂದನ್ನು ಸ್ವಾಮೀಜಿ ರೂಪಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Friday, January 24, 2003, 5:30 [IST]