ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.19ರಂದು ಹರಿಹರಪುರ ಸಚ್ಚಿದಾನಂದ ಸ್ವಾಮೀಜಿಗೆ ಗುರುವಂದನೆ

By Staff
|
Google Oneindia Kannada News

ಅ.19ರಂದು ಹರಿಹರಪುರ ಸಚ್ಚಿದಾನಂದ ಸ್ವಾಮೀಜಿಗೆ ಗುರುವಂದನೆ
ಸುಬ್ರಹ್ಮಣ್ಯ ದೇವಸ್ಥಾನದಿಂದ ಶಂಕರ ಮಠದವರೆಗೆ ಶ್ರೀಗಳ ಮೆರವಣಿಗೆ

ಬೆಂಗಳೂರು : ಚಿಕ್ಕಮಗಳೂರು ಜಿಲ್ಲೆಯ ಹರಿಪುರದ ಆದಿ ಶಂಕರಾಚಾರ್ಯ ಶ್ರೀ ಶಾರದಾ ಲಕ್ಷ್ಮಿ ನರಸಿಂಹ ಪೀಠಾಧೀಶ ಸಚ್ಚಿದಾನಂದ ಸ್ವಾಮೀಜಿಗೆ ಭಾನುವಾರ (ಅ. 19) ನಗರದಲ್ಲಿ ಗುರುವಂದನೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಶಂಕರಪುರದಲ್ಲಿರುವ ಶಂಕರ ಮಠದ ಶಾರದಾ ವಿಹಾರ ಸಭಾಂಗಣದಲ್ಲಿ ಮುಂಜಾನೆ 7 ಗಂಟೆಗೆ ಕಾರ್ಯಕ್ರಮ ಶುರುವಾಗಲಿದ್ದು, ಮಠದ ಶಿಷ್ಯರು ಸ್ವಾಮೀಜಿಗೆ ನಿಧಿ ಸಮರ್ಪಿಸಲಿದ್ದಾರೆ. ದಿನವಿಡೀ ಭರ್ತಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಸಂಜೆ ನಾಲ್ಕು ಗಂಟೆಗೆ ಶಂಕರಪುರಂನ ಸಜ್ಜನರಾವ್‌ ವೃತ್ತದ ಸುಬ್ರಹ್ಮಣ್ಯ ದೇವಸ್ಥಾನದಿಂದ ಶಂಕರ ಮಠದವರೆಗೆ ಸ್ವಾಮೀಜಿಯನ್ನು ಅದ್ಧೂರಿ ಮೆರವಣಿಗೆಯಲ್ಲಿ ಕರೆ ತರಲಾಗುವುದು. ನಂತರ ಸ್ವಾಮೀಜಿ ಮಠದ ಸ್ವಯಂ ಸೇವಾ ಪರಿಷತ್ತಿನ ಬೆಂಗಳೂರು ಶಾಖೆಯನ್ನು ಉದ್ಘಾಟಿಸಲಿದ್ದಾರೆ.

ಹರಿಹರಪುರವನ್ನು ದೇಶದ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಕೇಂದ್ರವನ್ನಾಗಿ ಬೆಳೆಸಲು ಮಹತ್ವಾಕಾಂಕ್ಷೆಯ ಯೋಜನೆಯಾಂದನ್ನು ಸ್ವಾಮೀಜಿ ರೂಪಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X