ರಾಘವೇಶ್ವರ ಶ್ರೀಗಳಿಂದ ಅ.26ರಂದು ಗೋಗ್ರಾಸ ಕಾರ್ಯಕ್ರಮ

ರಾಘವೇಶ್ವರ ಶ್ರೀಗಳಿಂದ ಅ.26ರಂದು ಗೋಗ್ರಾಸ ಕಾರ್ಯಕ್ರಮ
ಮಠದ ವತಿಯಿಂದ ಹೊಸ ನಗರದಲ್ಲಿ ಗೋಮೂತ್ರ ಔಷಧ ತಯಾರಿಕಾ ಘಟಕ

ಮಂಗಳೂರು: ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾ ಸಂಸ್ಥಾನದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ರೂಪಿಸಿರುವ ‘ಕಾಮಧೇನು’ ಯೋಜನೆಯ ಗೋಗ್ರಾಸ ಕಾರ್ಯಕ್ರಮವು ಅಕ್ಟೋಬರ್‌ 26ರಂದು ಅನುಷ್ಠಾನಗೊಳ್ಳಲಿದೆ.

26ರ ಬಲಿಪಾಡ್ಯಮಿಯ ದಿನದಂದು ಗೋರಕ್ಷಣೆಯ ಉದ್ದೇಶದಿಂದ ಗೋಗ್ರಾಸ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗುವುದು. ದೇಶೀಯ ಗೋವುಗಳ ತಳಿಯ ಅಭಿವೃದ್ಧಿಯಾಗಬೇಕು. ಅಲ್ಲದೆ ಈಗಾಗಲೇ ಕ್ಷೀಣಿಸುತ್ತಿರುವ ಕೆಲವು ದೇಶೀ ಗೋತಳಿಯನ್ನು ಉಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಬಲಿಪಾಡ್ಯಮಿ ದಿನ ಗೋಗ್ರಾಸ ಹಾಗೂ ಪಾರಂಪರಿಕ ಗೋಪೂಜೆ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಸ್ವಾಮೀಜಿಯವರ ಪ್ರಕಟಣೆ ತಿಳಿಸಿದೆ.

ಗೊ-ಮೂತ್ರದಲ್ಲಿ ಹಲವಾರು ಔಷಧೀಯ ಗುಣಗಳಿವೆ. ಗೋಮೂತ್ರದಿಂದ 148 ಬಗೆಯ ರೋಗಗಳನ್ನು ಗುಣಪಡಿಸಲು ಸಾಧ್ಯವೆಂಬುದು ಸಾಬೀತಾಗಿದೆ. ಈ ನಿಟ್ಟಿನಲ್ಲಿ ಹೊಸ ನಗರದ ಮೂಲ ಮಠದಲ್ಲಿ ಗೋಮೂತ್ರ ಔಷಧ ತಯಾರಿಕಾ ಘಟಕವನ್ನು ಮಠದ ವತಿಯಿಂದ ಸ್ಥಾಪಿಸಲಾಗುವುದು. ಕಾಸರಗೋಡಿನ ಮುಜುಂಗಾವು ಮತ್ತು ಪೆರ್ಲದಲ್ಲಿಯೂ ಇಂಥದ್ದೇ ಘಟಕಗಳು ಆರಂಭಗೊಳ್ಳಲಿದೆ ಎಂದು ಪ್ರಕಟಣೆ ಹೇಳಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+