Get Updates
Get notified of breaking news, exclusive insights, and must-see stories!

‘ಸಂಚಯ’ ಸಾಹಿತ್ಯ ಸ್ಪರ್ಧೆ-2003

‘ಸಂಚಯ’ ಸಾಹಿತ್ಯ ಸ್ಪರ್ಧೆ-2003
ಕಥೆ, ಕವಿತೆ, ಲೇಖನಗಳ ಆಹ್ವಾನ. ಬರಹಗಳು ತಲುಪಲು ಅ.31 ಕೊನೆ ದಿನ.

ಬೆಂಗಳೂರು : ‘ಸಂಚಯ’ ಸಾಂಸ್ಕೃತಿಕ ಪತ್ರಿಕೆ ತನ್ನ ವಾರ್ಷಿಕ ಸಂಪ್ರದಾಯದಂತೆ ಈ ಬಾರಿಯೂ ಸಾಹಿತ್ಯ ಸ್ಪರ್ಧೆಗಳನ್ನು ಏರ್ಪಡಿಸಿದ್ದು , ಆಸಕ್ತರಿಂದ ಬರಹಗಳನ್ನು ಆಹ್ವಾನಿಸಿದೆ.

ಕತೆ, ಕವಿತೆ ಹಾಗೂ ಲೇಖನ ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತಿದ್ದು , ಅಕ್ಟೋಬರ್‌ 31 ಬರಹಗಳು ತಲುಪಲು ಕೊನೆಯ ದಿನ. ಲೇಖನಗಳಿಗೆ ವಿಷಯ ನಿಗದಿಪಡಿಸಲಾಗಿದ್ದು , ಯಾವುದಾದರೂ ಒಂದು ವಿಷಯದ ಬಗ್ಗೆ ಲೇಖನ ಬರೆಯಬೇಕು. ಲೇಖನದ ವಿಷಯಗಳು :

  1. ಕುವೆಂಪು ವಿಚಾರ ಸಾಹಿತ್ಯ ನೆಲೆ ಬೆಲೆ
  2. ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ದುರಂತದ ನೆಲೆ ಹಿನ್ನೆಲೆ
  3. ಸಾಹಿತ್ಯ ಮತ್ತು ಲಿಂಗಭೇದ- ಮಹಿಳಾ ಸಾಹಿತ್ಯ ಪ್ರತ್ಯೇಕವೇ ?
ಕೆಳಗಿನ ವಿವರಗಳನ್ನು ಗಮನಿಸಿ :
  • ಎರಡು ಕವಿತೆ, 1 ಕಥೆ, 1 ಲೇಖನ.
  • ಮೂರೂ ವಿಭಾಗಗಳಲ್ಲಿ ಭಾಗವಹಿಸಲು ಅವಕಾಶವಿದೆ.
  • ವಿಜೇತರಿಗೆ ಪುಸ್ತಕ ರೂಪದಲ್ಲಿ ಬಹುಮಾನಗಳನ್ನು ನೀಡಲಾಗುವುದು. ಜನವರಿ 31 ರಂದು ವರಕವಿ ಬೇಂದ್ರೆ ಅವರ ಜಯಂತಿ ಅಂಗವಾಗಿ ಸಂಚಯ ಆಚರಿಸುವ ‘ಕವಿ ದಿನ’ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ವಿತರಿಸಲಾಗುವುದು.
  • ಬಹುಮಾನ ಪಡೆದ ಬರಹಗಳನ್ನು ಸಂಚಯದಲ್ಲಿ ಪ್ರಕಟಿಸಲಾಗುವುದು.
  • ಬರಹಗಳನ್ನು ಕಳುಹಿಸಲು ಕೊನೆಯ ದಿನಾಂಕ, ಅಕ್ಟೋಬರ್‌ 31, 2003.
  • ಯಾವುದೇ ಪ್ರವೇಶ ಶುಲ್ಕವಿಲ್ಲ .
  • ಬರಹಗಳನ್ನು ಕಳುಹಿಸಬೇಕಾದ ವಿಳಾಸ : ಸಂಚಯ, ಕೇರಾಫ್‌ ಝೆನ್‌ ಮಾರ್ಕೆಟಿಂಗ್‌, 4ಬಿ, 4 ನೇ ಕ್ರಾಸ್‌, 6 ನೇ ಮುಖ್ಯರಸ್ತೆ , ಎನ್‌ಆರ್‌ ಕಾಲೊನಿ, ಬೆಂಗಳೂರು- 560 019
    ದೂರವಾಣಿ : 080- 6614510
    ಇ-ಮೇಲ್‌ : [email protected]
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+