ಎಸ್ಸೆಂ ಕೃಷ್ಣ ಮತ್ತು ಸಚಿವರ ವಿರುದ್ಧ ಜಾಫರ್ ಷರೀಫ್ ಮಾತುಕತ್ತಿ
ಎಸ್ಸೆಂ ಕೃಷ್ಣ ಮತ್ತು ಸಚಿವರ ವಿರುದ್ಧ ಜಾಫರ್ ಷರೀಫ್ ಮಾತುಕತ್ತಿ
‘ಚುನಾವಣೆ ನಾಯಕತ್ವ ತೀರ್ಮಾನಿಸುವುದು ಕೃಷ್ಣ ಅಥವಾ ಧರ್ಮಸಿಂಗ್ ಅಲ್ಲ’
ಕರ್ನಾಟಕ ಅಲ್ಪ ಸಂಖ್ಯಾತರ ಇಲಾಖೆ ಹಾಗೂ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ಜಂಟಿಯಾಗಿ ಏರ್ಪಡಿಸಿದ್ದ ಆಟೋರಿಕ್ಷಾ ಮತ್ತಿತರ ಸಾಲ ಸೌಲಭ್ಯ ವಿತರಣಾ ಸಭೆಯಲ್ಲಿ ಷರೀಫ್ ಸೋಮವಾರ (ಅ.13) ಮಾತಾಡಿದರು.
ನಿಗದಿಯಾಗಿದ್ದಂತೆ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ, ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕೋಪಯೋಗಿ ಸಚಿವ ಧರ್ಮಸಿಂಗ್ ಈ ಕಾರ್ಯಕ್ರಮಕ್ಕೆ ಬರಬೇಕಿತ್ತು. ಆದರೆ ಅವರು ‘ಜನಸ್ಪಂದನ ಯಾತ್ರೆ’ಯ ಸುಸ್ತಿನ ಕಾರಣ ಸಭೆಗೆ ಗೈರು ಹಾಜರಾದರು. ಇದನ್ನು ಕೂಡ ಷರೀಫ್ ಕಟು ಮಾತುಗಳಲ್ಲಿ ಟೀಕಿಸಿದರು. ವೋಟು ಕೊಟ್ಟು ಗೆಲ್ಲಿಸುವುದು ಇಲ್ಲಿ ನೆರೆದಿರುವ ಜನ. ಅಲ್ಪಸಂಖ್ಯಾತರ ಈ ಸಮಾರಂಭಕ್ಕೆ ಕೃಷ್ಣ ಹಾಜರಾಗಲೇಬೇಕಿತ್ತು. ಇಲ್ಲವಾದರೆ, ಮೊದಲೇ ಒಪ್ಪಿಕೊಳ್ಳಲಾಗದು ಎಂದು ಹೇಳಬೇಕಿತ್ತು. ಕೃಷ್ಣ ಅವರಷ್ಟೇ ಅಲ್ಲದೆ ಖರ್ಗೆ, ಧರ್ಮಸಿಂಗ್ ಕೂಡ ದಣಿದಿದ್ದಾರೆ ಪಾಪ ಎಂದು ಷರೀಫ್ ವ್ಯಂಗ್ಯವಾಡಿದರು.
ಮುಂದಿನ ಲೋಕಸಭಾ ಚುನಾವಣೆಯ ನಾಯಕತ್ವ ಯಾರು ವಹಿಸಬೇಕು ಎಂಬುದನ್ನು ಹೈಕಮ್ಯಾಂಡ್ ತೀರ್ಮಾನಿಸುತ್ತದೆ, ಜನ ತೀರ್ಮಾನಿಸುತ್ತಾರೆ. ಧರ್ಮಸಿಂಗ್ ಅಲ್ಲ. ಇದನ್ನು ಸಮರ್ಥಿಸುವ ಕೃಷ್ಣ ಕೂಡ ಅಲ್ಲ ಎಂದು ನೇರವಾಗಿ ಷರೀಫ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಜನಸ್ಪಂದನ ಯಾತ್ರೆಗೆ ಕೃಷ್ಣ ಜೊತೆಯಲ್ಲಿ ಸಚಿವರ ದಂಡು ತೆರಳಿದ್ದನ್ನೂ ಅವರು ವಿರೋಧಿಸಿದರು.
ವಾಜಪೇಯಿ ಕೂಡ ಸರಿಯಿಲ್ಲ : ಅಕ್ಟೋಬರ್ 17ನೇ ತಾರೀಕು ನಡೆಯಲಿರುವ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಸಮೂಹ ಜನ ಜಾಗೃತಿ ಕಾರ್ಯಕ್ರಮದ ಮೇಲೆ ಭರವಸೆ ಇಡಿ ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳಿರುವುದು ಸರಿಯಲ್ಲ. ವಿಎಚ್ಪಿ, ಭಜರಂಗದಳದಲ್ಲಿ ವಿಶ್ವಾಸವಿದೆ ಎಂದು ಹೇಳುವ ಮೂಲಕ ಅವರು ತಮ್ಮ ಹಳೆ ಚಾಳಿ ತೋರುತ್ತಿದ್ದಾರೆ. ದೇಶ ಯಾರಪ್ಪನದೂ ಅಲ್ಲ, ಅಗತ್ಯ ಬಿದ್ದರೆ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ ಹೋರಾಡಲು ಸಿದ್ಧ ಎಂದು ಷರೀಫ್ ಆವೇಶಭರಿತ ಮಾತುಗಳನ್ನಾಡಿದರು.
ಲೋಕಸಭಾ ಸದಸ್ಯೆ ಮಾರ್ಗರೇಟ್ ಆಳ್ವ, ಸಚಿವರಾದ ಸಗೀರ್ ಹ್ಮದ್, ಖಮರುಲ್ ಇಸ್ಲಾಂ, ಟಿ.ಜಾನ್, ನಫೀಸಾ ಫಜಲ್ ಮೊದಲಾದವರು ಸಮಾರಂಭದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications