ಅಹಿಂಸಾ ವಾದದ ಮನೇಕಾ ಗಾಂಧಿಯೂ ರೇಶ್ಮೆ ಸೀರೆಯೂ
ಅಹಿಂಸಾ ವಾದದ ಮನೇಕಾ ಗಾಂಧಿಯೂ ರೇಶ್ಮೆ ಸೀರೆಯೂ
ಸಾಂಪ್ರದಾಯಿಕವಾಗಿ ತಯಾರಿಸಲಾದ ರೇಶ್ಮೆ ಬಟ್ಟೆಗಳನ್ನು ತ್ಯಜಿಸಲು ಕರೆ
ರೇಶ್ಮೆ ಹುಳುಗಳನ್ನು ಹಿಂಸಿಸಿ ತಯಾರಿಸುವ ರೇಶಿಮೆ ವಸ್ತ್ರಕ್ಕೆ ಹೆಂಗಸರು ಮುಗಿ ಬೀಳುವುದನ್ನು ಕಂಡು ಮನೇಕಾ ಅವರ ಮನಸ್ಸು ರೋಸಿದೆ. ಈ ಪರೋಕ್ಷ ಹಿಂಸೆಯನ್ನು ವಿರೋಧಿಸಿ ಮನೇಕಾ ಗಾಂಧಿ ಸದ್ಯದಲ್ಲಿಯೇ ಅಭಿಯಾನ ಶುರು ಮಾಡಲಿದ್ದಾರೆ.
ಕಳೆದ ಹಲವು ವರ್ಷಗಳಿಂದ ನಾನು ರೇಶ್ಮೆ ಸೀರೆ ಉಟ್ಟಿಲ್ಲ. ರೇಶ್ಮೆಯ ಬಗ್ಗೆ ಜನರಲ್ಲಿ ಪವಿತ್ರ ಮನೋಭಾವವಿದೆ. ಅದನ್ನು ಬದಲಾಯಿಸಲು ನಾನು ತುಂಬಾ ಪ್ರಯತ್ನಿಸಿದೆ. ಆದರೆ ನನ್ನಿಂದ ಅದು ಸಾಧ್ಯವಾಗಲಿಲ್ಲ. ರೇಶ್ಮೆಯನ್ನು ತ್ಯಜಿಸಲು ಸಂಪ್ರದಾಯಸ್ಥ ಮನಸ್ಸುಗಳು ಒಪ್ಪುವುದಿಲ್ಲ ಎಂದು ಮನೇಕಾ ವಿಷಾದಿಸಿದರು.
ಇತ್ತೀಚಿತನ ತಂತ್ರಜ್ಞಾನದಿಂದಾಗಿ ರೇಶ್ಮೆ ಹುಳುಗಳನ್ನು ಹಿಂಸಿಸುವ ವಿಧಾನದಿಂದ ರೇಶ್ಮೆ ತಯಾರಿಸುವುದು ಅಗತ್ಯವೇನಲ್ಲ. ಬದಲಿ ರೇಶ್ಮೆ ತಯಾರಿಕಾ ವಿಧಾನಗಳು ಬಂದಿವೆ. ಆದ್ದರಿಂದ ಈಗಲಾದರೂ ಸಾಂಪ್ರದಾಯಿಕವಾಗಿ ತಯಾರಿಸಲಾದ ರೇಶ್ಮೆ ಬಟ್ಟೆಗಳನ್ನು ತ್ಯಜಿಸಬಹುದು ಎಂದು ಮನೇಕಾ ವಾದ ಮಂಡಿಸಿದರು.
ಅಂದಹಾಗೆ, ರೇಶ್ಮೆ ಸೀರೆಯನ್ನು ತ್ಯಜಿಸಿ ಪ್ರಾಣಿ ಪ್ರೀತಿಯನ್ನು ಮೆರೆಯುವ ಮನೇಕಾರ ಇತರ ಹವ್ಯಾಸಗಳೆಂದರೆ- ತೋಟಗಾರಿಕೆ, ಓದು ಮತ್ತು ವಾಕಿಂಗ್. ಶಾಪ್ಪಿಂಗ್ ಎಂದರೆ ಅವರಿಗೆ ಅಷ್ಟಕ್ಕಷ್ಟೇ. ಬೇರೆಯವರ ಬಳಿಯಿರುವ ವಸ್ತುಗಳನ್ನು ಕಂಡು ಖುಷಿ ಪಟ್ಟರೂ ಅಂತಹುದನ್ನೇ ತಾನು ಕೊಳ್ಳಬೇಕು ಅಂತ ಮನೇಕಾಗೆ ಅನಿಸುವುದಿಲ್ಲವಂತೆ. ನಾನು ತುಂಬಾ ಲಕ್ಕಿ. ಯಾಕೆಂದರೆ ನಾನು ಮಾಡುವ ಕೆಲಸವನ್ನು ನಾನು ತುಂಬಾ ಪ್ರೀತಿಸುತ್ತೇನೆ ಎನ್ನುವ ಮನೇಕಾ, ಕೊಳ್ಳುಬಾಕ ಸಂಸ್ಕೃತಿಯನ್ನು ವಿರೋಧಿಸುತ್ತಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications