ಪೊಲೀಸರಿಗೆ ಚಳ್ಳೆ : ವೀರಪ್ಪನ್ನಿಂದ ವ್ಯಾಪಾರಿ ಹಾಗೂ ದಿನಸಿ ಕೊಳ್ಳೆ
ಪೊಲೀಸರಿಗೆ ಚಳ್ಳೆ : ವೀರಪ್ಪನ್ನಿಂದ ವ್ಯಾಪಾರಿ ಹಾಗೂ ದಿನಸಿ ಕೊಳ್ಳೆ
ದಿನಸಿ ಜೊತೆಗೆ ವ್ಯಾಪಾರಿಯನ್ನೂ ವೀರಪ್ಪನ್ ಅಪಹರಿಸಿದ್ದಾನೆ
ವೀರಪ್ಪನ್ ಹಾಗೂ ಆತನ ಸಹಚರರು ಬುಧವಾರ (ಅ. 08) ಅರಣ್ಯ ಪ್ರದೇಶದಲ್ಲಿರುವ ಕತ್ರಿಪಟ್ಟಿ ಗ್ರಾಮದ ವ್ಯಾಪಾರಿ ಸೆಲ್ವಂ ಎಂಬಾತನನ್ನು ಅಕ್ಕಿ, ಬೇಳೆ ಮತ್ತಿತರ ದಿನಸಿ ಮೂಟೆಗಳ ಸಮೇತ ಅಪಹರಿಸಿದ್ದಾರೆಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೊಟ್ಟೆಪಾಡಿಗೆ ವೀರಪ್ಪನ್ ಅನಿವಾರ್ಯವಾಗಿ ಈ ರೀತಿ ಮಾಡಬೇಕಾಗಿ ಬಂದಿರುವುದು ಸೆಲ್ವಂ ಅಪಹರಣದಿಂದ ಸ್ಪಷ್ಟವಾಗಿದೆ. ಮೂರು ದಿನಗಳ ನಂತರ ಸೆಲ್ವಂನನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವುದಾಗಿ ಹೇಳಿರುವ ವೀರಪ್ಪನ್, ಪೊಲೀಸರಿಗೆ ಸುದ್ದಿ ಮುಟ್ಟಿಸಿದರೆ ಜೀವ ಉಳಿಯುವುದಿಲ್ಲ ಎಂಬ ಬೆದರಿಕೆಯನ್ನೂ ಹಾಕಿ ಹೋಗಿದ್ದಾನೆ.
ಈ ಘಟನೆಯ ನಂತರ ಕತ್ರಿಪಟ್ಟಿ ಗ್ರಾಮದ ಸುತ್ತಲೂ ಪೊಲೀಸರು ಜಮಾಯಿಸಿದ್ದರೂ, ವೀರಪ್ಪನ್ ಸುಳಿವು ಸಿಕ್ಕಿಲ್ಲ. ಪೊಲೀಸರ ಗಮನವನ್ನು ಬೇರೆಡೆಗೆ ಸೆಳೆದು, ಇದ್ದಕ್ಕಿದ್ದಂತೆ ದಾಳಿಯಿಡುವುದು ವೀರಪ್ಪನ್ ಜಾಯಮಾನ. ಈ ಘಟನೆಯಲ್ಲೂ ಅದು ಮುಂದುವರೆದಿದೆ. ಸುಸಜ್ಜಿತ ಶಸ್ತ್ರಾಸ್ತ್ರಗಳಿರುವ ವಿಶೇಷ ಕಾರ್ಯಾಚರಣೆ ಪಡೆ (ಎಸ್ಟಿಎಫ್) ಯ ಕಾರ್ಯವೈಖರಿ ಮತ್ತೆ ಸವಾಲಿಗೆ ಸಿಕ್ಕಿದೆ. ಕಳೆದ ಕೆಲವು ವಾರಗಳಿಂದ ವೀರಪ್ಪನ್ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಡಗಿದ್ದಾನೆ ಎಂಬ ಮಾಹಿತಿ ಆಧರಿಸಿ ಎಸ್ಟಿಫ್ನ ಬಹುತೇಕ ಪೊಲೀಸರು ಬೆಟ್ಟದಲ್ಲಿ ಜಮಾಯಿಸಿದ್ದರು. ಆದರೆ, ವೀರಪ್ಪನ್ ಸದ್ದು ಮಾಡಿದ್ದು ಇನ್ನೊಂದು ಗ್ರಾಮದಲ್ಲಿ.
ಕ್ಯಾಸೆಟ್ ರವಾನೆಯಾಗುತ್ತಿದೆ : ಎಸ್ಟಿಎಫ್ ನಡಾವಳಿಗಳ ಬಗ್ಗೆ ಮಾಹಿತಿಯನ್ನು ವೀರಪ್ಪನ್ಗೆ ಯಾರೋ ನಾಡಿನಿಂದ ಕ್ಯಾಸೆಟ್ ಮೂಲಕ ರವಾನಿಸುತ್ತಿದ್ದಾರೆ ಎಂಬ ಅನುಮಾನ ಕೂಡ ಪೊಲೀಸರಲ್ಲಿದೆ. ಕುಂಬಳಕಾಯಿ, ಸೌತೆಕಾಯಿ ಮೊದಲಾದ ತರಕಾರಿಗಳ ಒಳಗೆ ಕ್ಯಾಸೆಟ್ ಇಟ್ಟು ಜನ ವೀರಪ್ಪನ್ಗೆ ಮಾಹಿತಿ ಸಾಗಿಸುತ್ತಿದ್ದಾರೆ ಎಂಬುದು ಪೊಲೀಸರ ಅನುಮಾನ.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications