ಬರುತ್ತಿದೆ ಪುರುಷರ ಸಂತಾನ ನಿರೋಧಕ ಮಾತ್ರೆ, ಚುಚ್ಚುಮದ್ದು !
ಬರುತ್ತಿದೆ ಪುರುಷರ ಸಂತಾನ ನಿರೋಧಕ ಮಾತ್ರೆ, ಚುಚ್ಚುಮದ್ದು !
ಸ್ತ್ರೀಯರಿಗೆ ನಿಶ್ಚಿಂತೆ, ಈಗ ಪುರುಷರ ಪಾಳಿ...
ಸಿಡ್ನಿಯ ಏನ್ಜಾಕ್ ರಿಸರ್ಚ್ ಇನ್ಸ್ಟಿಟ್ಯೂಟ್ ಸಿದ್ಧಪಡಿಸಿರುವ ಮಾತ್ರೆ ಹಾಗೂ ಚುಚ್ಚುಮದ್ದುಗಳನ್ನು 55 ಪುರುಷರ ಮೇಲೆ ಪ್ರಯೋಗಿಸಿದ ನಂತರ ಸಂತಾನ ನಿರೋಧಕ ಶಕ್ತಿಯನ್ನು ಖಾತರಿ ಪಡಿಸಿಕೊಳ್ಳಲಾಗಿದೆ. ಪ್ರೊ. ಡೇವಿಡ್ ಹ್ಯಾಂಡಲ್ಸ್ಮನ್ ಈ ಗುಳಿಗೆ ಹಾಗೂ ಚುಚ್ಚುಮದ್ದುಗಳನ್ನು ಕಂಡುಹಿಡಿಯುವಲ್ಲಿ ಮಹತ್ತರ ಪಾತ್ರ ವಹಿಸಿದ ವಿಜ್ಞಾನಿ.
ಪುರುಷರ ಹಾರ್ಮೋನು ಟೆಸ್ಟೋಸ್ಟಿರಾನ್ ಮತ್ತು ಸ್ತ್ರೀಯರ ಹಾರ್ಮೋನ್ ಪ್ರಾಜೆಸ್ಟಿನ್ನನ್ನು ನಿಯತ ಪ್ರಮಾಣದಲ್ಲಿ ಸೇರಿಸಿ, ಗುಳಿಗೆ ಹಾಗೂ ಚುಚ್ಚುಮದ್ದನ್ನು ತಯಾರಿಸಲಾಗಿದೆ. ಇದನ್ನು ತೆಗೆದುಕೊಳ್ಳುವ ಪುರುಷ ಹೆಂಗಸಿನೊಟ್ಟಿಗೆ ಕೂಡಿದಾಗ, ಆಕೆಯಲ್ಲಿ ತತ್ತಿ ಉತ್ಪತ್ತಿಯಾಗುವುದಿಲ್ಲ. ಇದು ಪ್ರಯೋಗಗಳಿಂದ ದೃಢಪಟ್ಟಿದೆ. ಅಲ್ಲದೆ ಇದನ್ನು ಉಪಯೋಗಿಸಿರುವ ಪುರುಷರಿಗೆ ಯಾವುದೇ ಇತರೆ ದೈಹಿಕ ತೊಂದರೆಗಳಾಗಿಲ್ಲ. ಸಂತಾನ ನಿರೋಧಕ ಔಷಧಿ ತೆಗೆದುಕೊಳ್ಳುವುದನ್ನು ನಿಲ್ಲಿಸಿದ ಕೆಲವೇ ತಿಂಗಳುಗಳಲ್ಲಿ ಗಂಡಿಗೆ ಅಪ್ಪನಾಗುವ ಯೋಗ್ಯತೆ ಬರುತ್ತದೆ. ಇದು ಕೂಡ ಪ್ರಯೋಗದಿಂದ ಸ್ಪಷ್ಟವಾಗಿದೆ ಎನ್ನುತ್ತಾರೆ ಡೇವಿಡ್ ಹ್ಯಾಂಡಲ್ಸ್ಮನ್.
ನನ್ನ ಕೆಲಸ ಮುಗಿದಿದೆ. ಇನ್ನು ಔಷಧಿ ತಯಾರಿಸುವ ಕಂಪನಿಗಳು ವಿಸ್ತುತ ಪ್ರಯೋಗಗಳನ್ನು ನಡೆಸಿ, ಗುಳಿಗೆ ಹಾಗೂ ಚುಚ್ಚುಮದ್ದನ್ನು ಮಾರುಕಟ್ಟೆಗೆ ತರಬೇಕು. ಚುಚ್ಚುಮದ್ದನ್ನು 3- 4 ತಿಂಗಳಿಗೊಮ್ಮೆ ತೆಗೆದುಕೊಳ್ಳಬೇಕಾಗುತ್ತದೆ. ಗುಳಿಗೆಯನ್ನು ನಿತ್ಯ ನುಂಗುವ ಜರೂರತ್ತಿರುತ್ತದೆ. ಗುಳಿಗೆ ನುಂಗುವುದನ್ನು ಮರೆಯುವ ಆತಂಕವಿರುವವರು ಚುಚ್ಚುಮದ್ದನ್ನು ತೆಗೆದುಕೊಳ್ಳಬಹುದು ಎಂಬುದು ಹ್ಯಾಂಡಲ್ಸ್ಮನ್ ಸಲಹೆ.
ಈ ಹಿಂದೆ ಸಾಕಷ್ಟು ವಿಜ್ಞಾನಿಗಳು ತಯಾರಿಸಿದ ಪುರುಷ ಸಂತಾನ ನಿಯಂತ್ರಕ ತಂತ್ರಗಳು ವಿಫಲವಾಗಿವೆ. ಕೆಲವು ಇತರೆ ದೈಹಿಕ ತೊಂದರೆಗಳನ್ನು ಒಡ್ಡಿದ್ದವು. ಇನ್ನು ಕೆಲವು ಜೊಳ್ಳು ಔಷಧಿಗಳಾಗಿದ್ದವು. ಈಗ ಹ್ಯಾಂಡಲ್ಸ್ಮನ್ ಪಾಳಿ. ಮಾತ್ರೆಗಳನ್ನು ನುಂಗಿ ಬೇಸತ್ತಿರುವ ಹೆಂಗಸರು ಪುರುಷರನ್ನು ಔಷಧಿ ಅಂಗಡಿಗೆ ದೂಡುವ ಕಾಲ ಸನ್ನಿಹಿತವಾಗಿದೆ.
(ಏಜೆನ್ಸೀಸ್)
ಮುಖಪುಟ / ವಾಟ್ಸ್ ಹಾಟ್
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications