ಸಿಇಟಿ ಸೆಲ್ ವಾಸ್ತು ಸರಿಯಿಲ್ಲ, ಅದಕ್ಕೇ ತೊಂದರೆಗಳು- ಡಿಕೇಶಿ
ಸಿಇಟಿ ಸೆಲ್ ವಾಸ್ತು ಸರಿಯಿಲ್ಲ, ಅದಕ್ಕೇ ತೊಂದರೆಗಳು- ಡಿಕೇಶಿ
‘ವಿಧಾನಸೌಧದ ಸೌತ್ಬ್ಲಾಕ್ ಕಟ್ಟಲು ಹಳ್ಳ ತೋಡಿದ್ದೇ ರಾಜ್ ಅಪಹರಣವಾಯಿತು’
ಈಗ ನಿರ್ಮಾಣ ಹಂತದಲ್ಲಿರುವ ವಿಧಾನಸೌಧದ ಸೌತ್ ಬ್ಲಾಕ್ ಕಟ್ಟಡ ಕಟ್ಟುವಿಕೆ ಪ್ರಾರಂಭವಾದಾಗ, 30 ಅಡಿ ಆಳದ ಒಂದು ಗುಂಡಿ ತೋಡಬೇಕಾಗಿತ್ತು. ಅದನ್ನು ತೋಡಿದ ಸಂದರ್ಭದಲ್ಲಿ ಸರ್ಕಾರ ತೊಂದರೆ ಎದುರಿಸಬೇಕಾಗುತ್ತೆ ಎಂದು ಪ್ರಕೃತಿ ವಾಸ್ತುನಿಧಿ ಪ್ರತಿಷ್ಠಾನದ ಅಧ್ಯಕ್ಷ ನಿಧೀಶ್ ಎಚ್ಚರಿಸಿದರು. ಅದು ನಿಜವಾಯಿತು. ಗುಂಡಿ ತೋಡಿದ ಸಂದರ್ಭದಲ್ಲಿ ವೀರಪ್ಪನ್ ವರನಟ ರಾಜ್ಕುಮಾರ್ ಅವರನ್ನು ಅಪಹರಿಸಿದ. ಕಾವೇರಿ ಸಮಸ್ಯೆಯೂ ಬಿಗಡಾಯಿಸಿತು. ಆಮೇಲೆ ನಿಧೀಶ್ ಎಚ್ಚರಿಕೆಯ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡೆವು. ಸರ್ಕಾರ ಬಂದ ಸಮಸ್ಯೆಗಳನ್ನು ನಿರಾತಂಕವಾಗಿ ಎದುರಿಸಿತು. ವಾಸ್ತು ನಮ್ಮ ಸಂಸ್ಕೃತಿ. ಅದನ್ನು ಉಳಿಸಿಕೊಂಡು ಹೋಗಬೇಕು.
ಈಗ ಸಿಇಟಿ ಸಮಸ್ಯೆ ಶುರುವಾಗಿದೆ. ಇದಕ್ಕೆ ಕಾರಣ ಮಲ್ಲೇಶ್ವರದಲ್ಲಿರುವ ಸಿಇಟಿ ಘಟಕದ ವಾಸ್ತು ಸರಿಯಿಲ್ಲ. ಕಟ್ಟಡದ ಮುಖ್ಯ ದ್ವಾರ ಸರಿಯಾದ ದಿಕ್ಕಿಗೆ ಇಲ್ಲ. ಹಿಂದೆ ಕಾಳಿದಾಸ ರಸ್ತೆಯಲ್ಲಿ ಸಿಇಟಿ ಘಟಕ ಇದ್ದಾಗ ಯಾವುದೇ ಸಮಸ್ಯೆ ಇರಲಿಲ್ಲ. ಈಗ ಕಿರಿಕ್ಕುಗಳು ಶುರುವಾಗುತ್ತಿವೆ. ಇದು ನಂಬಲೇಬೇಕಾದ ಸಂಗತಿ.
ಪ್ರಕೃತಿ ವಾಸ್ತು ನಿಧಿ ಪ್ರತಿಷ್ಠಾನ ಭಾರತೀಯ ವಿದ್ಯಾ ಭವನದಲ್ಲಿ ಏರ್ಪಡಿಸಿದ್ದ ವಾಸ್ತುವಿನ ಪ್ರಸ್ತುತತೆ ಎಂಬ ಒಂದು ದಿನದ ಕಾರ್ಯಾಗಾರವನ್ನು ಶುಕ್ರವಾರ (ಅ.03) ಉದ್ಘಾಟಿಸಿ ಡಿಕೇಶಿ ಮಾತಾಡಿದ ಪರಿಯಿದು. ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅಲ್ಲದೆ ಅನೇಕ ಮಂತ್ರಿಮಹೋದರೂ ಇವತ್ಪ ನಿಧೀಶ್ ವಾಸ್ತು ಸಲಹೆಗಳನ್ನು ಕಣ್ಣಿಗೊತ್ತಿಕೊಳ್ಳುತ್ತಿದ್ದಾರೆ ಎಂಬ ಸತ್ಯವನ್ನು ಡಿಕೇಶಿ ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ। ಎಂ.ಎಸ್.ತಿಮ್ಮಪ್ಪನವರಂಥ ಬುದ್ಧಿ ಜೀವಿ ಡಿಕೇಶಿ ಮಾತನ್ನು ಮೌನವಾಗಿ ಕೇಳಿಸಿಕೊಳ್ಳುತ್ತಿದ್ದರು. ಇವತ್ತು ಸರ್ಕಾರದ ಅನಧಿಕೃತ ವಾಸ್ತು ಸಲಹೆಗಾರರಾಗಿರುವ , ಪ್ರಕೃತಿ ವಾಸ್ತು ನಿಧಿ ಪ್ರತಿಷ್ಠಾನದ ಅಧ್ಯಕ್ಷ ಎಸ್.ಎನ್.ನಿಧೀಶ್ ಸಮಾರಂಭದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಸಿ.ಇ.ಟಿ. ಸಮಸ್ಯೆ ಸರಿ ಹೋಗಬೇಕಾದರೆ ಎಲ್ಲಿ ಹಳ್ಳ ತೋಡಬೇಕು, ಇನ್ನೆಲ್ಲಿ ಹಳ್ಳ ತೋಡಿದರೆ ವೀರಪ್ಪನ್ ಸಿಗುತ್ತಾನೆ ಅನ್ನುವುದನ್ನು ವಾಸ್ತು ಶಾಸ್ತ್ರಜ್ಞರು ಹೇಳುವಂತಿದ್ದರೆ ಚೆನ್ನಾಗಿತ್ತು, ಅಲ್ಲವೇ?
ಮುಖಪುಟ / ವಾರ್ತೆಗಳು
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications