ಆಯುಧಪೂಜೆ ದಿನ ಪ್ರಾಣಿ ಬಲಿ ಬೇಡ -ಡಿಜಿಪಿ ಮಡಿಯಾಳ್‌

ಆಯುಧಪೂಜೆ ದಿನ ಪ್ರಾಣಿ ಬಲಿ ಬೇಡ -ಡಿಜಿಪಿ ಮಡಿಯಾಳ್‌
ಪ್ರಾಣಿ ಬಲಿ ತಡೆಯುವಂತೆ ಪೊಲೀಸ್‌ ಅಧಿಕಾರಿಗಳಿಗೆ ಆದೇಶ

ಬೆಂಗಳೂರು: ಆಯುಧ ಪೂಜೆ ದಿನ ವಾಹನಗಳಿಗೆ, ದೇವರಿಗೆ ಪ್ರಾಣಿ ಬಲಿ ನೀಡಬಾರದು. ಅಂತಹ ಘಟನೆಗಳನ್ನು ತಪ್ಪಿಸಲು ಪ್ರಯತ್ನಿಸಬೇಕು ಎಂದು ಜಿಲ್ಲಾ ಪೊಲೀಸ್‌ ಅಧಿಕಾರಿಗಳಿಗೆ ರಾಜ್ಯಪೊಲೀಸ್‌ ಮಹಾ ನಿರ್ದೇಶಕ ತಿಮ್ಮಪ್ಪ ಮಡಿಯಾಳ್‌ ಆದೇಶ ನೀಡಿದ್ದಾರೆ.

ಸಂಪ್ರದಾಯದ ನೆಪದಲ್ಲಿ ಹಲವು ವರ್ಷಗಳಿಂದ ಆಯುಧ ಪೂಜೆಯಂದು ವಾಹನಗಳಿಗೆ ಕುರಿ ಕೋಳಿ ಮುಂತಾದ ಪ್ರಾಣಿಗಳನ್ನು ಬಲಿ ಕೊಡುವುದು ವಾಡಿಕೆಯಲ್ಲಿದೆ. ಪೊಲೀಸ್‌ ಇಲಾಖೆ ಸೇರಿದಂತೆ ಕೆಲವು ಇಲಾಖೆಗಳಲ್ಲಿಯೂ ಈ ಬಲಿ ಪದ್ಧತಿ ನಡೆಯುತ್ತದೆ. ಆದರೆ ಈ ಕಾನೂನು ಬಾಹಿರ ಪದ್ಧತಿಯನ್ನು ತಪ್ಪಿಸಲು ರಾಜ್ಯ ಪೊಲೀಸರು ಪ್ರಯತ್ನಿಸಬೇಕು ಎಂದು ಮಡಿಯಾಳ್‌ ಕರೆ ನೀಡಿದ್ದಾರೆ.

ಪ್ರಾಣಿಗಳನ್ನು ಬಲಿ ಕೊಡುವುದು, ಹಾಗೂ ಬಲಿಗಾಗಿ ಪ್ರಾಣಿಗಳನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ 6 ತಿಂಗಳ ಸಜೆ ಹಾಗೂ 1 ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ. ಬಲಿ ಕೊಡುವ ಬದಲಾಗಿ ಸಾತ್ವಿಕ ಪದಾರ್ಥ ಬಳಸಿ ಸಂಪ್ರದಾಯಗಳನ್ನು ಆಚರಿಸಬೇಕು ಎಂದು ಮಡಿಯಾಳ್‌ ಸಲಹೆ ಮಾಡಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+