ರೈತರ ಸಾವಿಗೆ ಆನ್ಲೈನ್ ಲಾಟರಿ, ಕುಡಿತವೇ ಕಾರಣ-ಷರೀಫ್
ರೈತರ
ಸಾವಿಗೆ
ಆನ್ಲೈನ್
ಲಾಟರಿ,
ಕುಡಿತವೇ
ಕಾರಣ-ಷರೀಫ್
ಕೃಷ್ಣ
ಸರ್ಕಾರದ
ವಿರುದ್ಧ
ಜಾಫರ್
ಷರೀಫ್
ಸುದರ್ಶನ
ಚಕ್ರ
ಒಂದು ಕಡೆ ಆನ್ಲೈನ್ ಲಾಟರಿ ಆಡಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಕುಡಿತದ ಅಂಗಡಿಗಳನ್ನು ತೆರೆಯಲಾಗುತ್ತದೆ. ಇದರಿಂದ ರೈತ ಆತ್ಮಹತ್ಯೆ ಮಾಡಿಕೊಂಡರೆ, ಆತ್ಮಹತ್ಯೆಗೆ ಬೇರೆ ಬೇರೆ ಕಾರಣಗಳನ್ನು ಹುಡುಕಲಾಗುತ್ತದೆ ಎಂದು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಸರ್ಕಾರವನ್ನು ಜಾಫರ್ ಷರೀಫ್ ತೀವ್ರ ತರಾಟೆಗೆ ತೆಗೆದುಕೊಂಡರು. ಕರ್ನಾಟಕ ಪಶು ವೈದ್ಯ ಪರಿಷತ್ತಿನ ಕಟ್ಟಡದ ಪ್ರಾರಂಭೋತ್ಸವ ಸಮಾರಂಭದಲ್ಲಿ (ಮಂಗಳವಾರ, ಸೆ.30) ಅವರು ಮಾತನಾಡುತ್ತಿದ್ದರು.
ಮೆಡಿಕಲ್ ಮತ್ತು ಇಂಜಿನಿಯರಿಂಗ್ ಸೀಟುಗಳನ್ನು ಹಂಚುವುದೇ ಸರ್ಕಾರದ ಕೆಲಸವಾಗಿದೆ. ಇದರಿಂದಾಗಿ ಜನಸಂಖ್ಯೆ ನಿಯಂತ್ರಣದ ಪ್ರಚಾರ ಕಡಿಮೆಯಾಗಿದೆ ಎಂದು ಷರೀಫ್ ವಿಷಾದಿಸಿದರು.
ಮೂರು ವರ್ಷದಿಂದ ಕಾಡುತ್ತಿರುವ ತೀವ್ರ ಬರದಿಂದಾಗಿ ರೈತರು ಪಡಬಾರದ ಕಷ್ಟಪಡುತ್ತಿದ್ದಾರೆ. ಈ ಕಷ್ಟಗಳನ್ನು ಮರೆಯಲು ಆನ್ಲೈನ್ ಲಾಟರಿಯ ನಶೆ ಹಾಗೂ ಸಾರಾಯಿಯ ಅಮಲನ್ನು ಸರ್ಕಾರ ಒದಗಿಸಿಕೊಟ್ಟಿದೆ ಎಂದು ಷರೀಫ್ ಮಾರ್ಮಿಕವಾಗಿ ನುಡಿದರು. ಎಸ್ಸೆಂ.ಕೃಷ್ಣ ಅವರ ತೀವ್ರ ಟೀಕಾಕಾರರೆಂದು ಹೆಸರಾದ ಜಾಫರ್ ಷರೀಫ್ ಕೆಂಡದುಂಡೆಗಳನ್ನು ಉದುರಿಸುತ್ತಿದ್ದರೆ, ಪಶು ಸಂಗೋಪನೆ ಮತ್ತು ಸಕ್ಕರೆ ಖಾತೆ ಸಚಿವ ಎಂ.ಮಹಾದೇವ್ ಮೌನದಿಂದ ಕೂತಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು