ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಸಾವಿಗೆ ಆನ್‌ಲೈನ್‌ ಲಾಟರಿ, ಕುಡಿತವೇ ಕಾರಣ-ಷರೀಫ್‌

By Staff
|
Google Oneindia Kannada News

ರೈತರ ಸಾವಿಗೆ ಆನ್‌ಲೈನ್‌ ಲಾಟರಿ, ಕುಡಿತವೇ ಕಾರಣ-ಷರೀಫ್‌
ಕೃಷ್ಣ ಸರ್ಕಾರದ ವಿರುದ್ಧ ಜಾಫರ್‌ ಷರೀಫ್‌ ಸುದರ್ಶನ ಚಕ್ರ

ಬೆಂಗಳೂರು : ರಾಜ್ಯದಲ್ಲಿ ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗಳಿಗೆ ಆನ್‌ಲೈನ್‌ ಲಾಟರಿ ಹಾಗೂ ಕುಡಿತವೇ ಪ್ರಮುಖ ಕಾರಣ ಎಂದು ಸಂಸದ ಸಿ.ಕೆ.ಜಾಫರ್‌ ಷರೀಫ್‌ ಅಭಿಪ್ರಾಯಪಟ್ಟಿದ್ದಾರೆ.

ಒಂದು ಕಡೆ ಆನ್‌ಲೈನ್‌ ಲಾಟರಿ ಆಡಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಕುಡಿತದ ಅಂಗಡಿಗಳನ್ನು ತೆರೆಯಲಾಗುತ್ತದೆ. ಇದರಿಂದ ರೈತ ಆತ್ಮಹತ್ಯೆ ಮಾಡಿಕೊಂಡರೆ, ಆತ್ಮಹತ್ಯೆಗೆ ಬೇರೆ ಬೇರೆ ಕಾರಣಗಳನ್ನು ಹುಡುಕಲಾಗುತ್ತದೆ ಎಂದು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಸರ್ಕಾರವನ್ನು ಜಾಫರ್‌ ಷರೀಫ್‌ ತೀವ್ರ ತರಾಟೆಗೆ ತೆಗೆದುಕೊಂಡರು. ಕರ್ನಾಟಕ ಪಶು ವೈದ್ಯ ಪರಿಷತ್ತಿನ ಕಟ್ಟಡದ ಪ್ರಾರಂಭೋತ್ಸವ ಸಮಾರಂಭದಲ್ಲಿ (ಮಂಗಳವಾರ, ಸೆ.30) ಅವರು ಮಾತನಾಡುತ್ತಿದ್ದರು.

ಮೆಡಿಕಲ್‌ ಮತ್ತು ಇಂಜಿನಿಯರಿಂಗ್‌ ಸೀಟುಗಳನ್ನು ಹಂಚುವುದೇ ಸರ್ಕಾರದ ಕೆಲಸವಾಗಿದೆ. ಇದರಿಂದಾಗಿ ಜನಸಂಖ್ಯೆ ನಿಯಂತ್ರಣದ ಪ್ರಚಾರ ಕಡಿಮೆಯಾಗಿದೆ ಎಂದು ಷರೀಫ್‌ ವಿಷಾದಿಸಿದರು.

ಮೂರು ವರ್ಷದಿಂದ ಕಾಡುತ್ತಿರುವ ತೀವ್ರ ಬರದಿಂದಾಗಿ ರೈತರು ಪಡಬಾರದ ಕಷ್ಟಪಡುತ್ತಿದ್ದಾರೆ. ಈ ಕಷ್ಟಗಳನ್ನು ಮರೆಯಲು ಆನ್‌ಲೈನ್‌ ಲಾಟರಿಯ ನಶೆ ಹಾಗೂ ಸಾರಾಯಿಯ ಅಮಲನ್ನು ಸರ್ಕಾರ ಒದಗಿಸಿಕೊಟ್ಟಿದೆ ಎಂದು ಷರೀಫ್‌ ಮಾರ್ಮಿಕವಾಗಿ ನುಡಿದರು. ಎಸ್ಸೆಂ.ಕೃಷ್ಣ ಅವರ ತೀವ್ರ ಟೀಕಾಕಾರರೆಂದು ಹೆಸರಾದ ಜಾಫರ್‌ ಷರೀಫ್‌ ಕೆಂಡದುಂಡೆಗಳನ್ನು ಉದುರಿಸುತ್ತಿದ್ದರೆ, ಪಶು ಸಂಗೋಪನೆ ಮತ್ತು ಸಕ್ಕರೆ ಖಾತೆ ಸಚಿವ ಎಂ.ಮಹಾದೇವ್‌ ಮೌನದಿಂದ ಕೂತಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X