ತಿರುಮಲ ತಿರುಪತಿಯಲ್ಲಿ ಸ್ಫೋಟ, ಚಂದ್ರಬಾಬುನಾಯ್ಡುಗೆ ಗಾಯ
ತಿರುಮಲ
ತಿರುಪತಿಯಲ್ಲಿ
ಸ್ಫೋಟ,
ಚಂದ್ರಬಾಬುನಾಯ್ಡುಗೆ
ಗಾಯ
ಬ್ರಹ್ಮ
ರಥೋತ್ಸವದ
ಮುನ್ನಾದಿನ
ಸ್ಫೋಟ,
ಗಾಯಗೊಂಡ
ಇಬ್ಬರು
ಶಾಸಕರು,
ಓರ್ವ
ಸಚಿವ
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿರುಮಲ ಬೆಟ್ಟಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಸ್ಫೋಟ ಸಂಭವಿಸಿದೆ. ಚಂದ್ರಬಾಬು ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಆದರೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಂದ್ರಬಾಬು ಅವರ ಜೊತೆಗಿದ್ದ ಮಾಹಿತಿ ತಂತ್ರಜ್ಞಾನ ಸಚಿವ ಬಿ. ಗೋಪಾಲಕೃಷ್ಣ ರೆಡ್ಡಿ ಕೂಡ ಗಾಯಗೊಂಡಿದ್ದಾರೆ ಎಂದು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಸ್ಫೋಟದ ಹಿಂದೆ ಯಾರ ಕೈವಾಡ ಇದೆ ಎನ್ನುವುದು ತಕ್ಷಣಕ್ಕೆ ಗೊತ್ತಾಗಿಲ್ಲ.
ತಿರುಪತಿ ವೆಂಕಟೇಶ್ವರ ದೇವರ ಸನ್ನಿಧಿಯಲ್ಲಿ ನಡೆಯುತ್ತಿರುವ ಬ್ರಹ್ಮ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬುಧವಾರ ಮಧ್ಯಾಹ್ನ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೆರಳಿದ್ದರು. ಬ್ರಹ್ಮರಥೋತ್ಸವ ಕಾರ್ಯಕ್ರಮಗಳಿಗೆ ನಿರೀಕ್ಷೆಗೂ ಮೀರಿ ಲಕ್ಷೋಪ ಲಕ್ಷ ಭಕ್ತಾದಿಗಳು ಆಗಮಿಸುತ್ತಿದ್ದು ತಿರುಪತಿ ಪ್ರದೇಶ ಜನರಿಂದ ಕಿಕ್ಕಿರಿದು ತುಂಬಿದೆ. ಅ.2ರ ಗುರುವಾರ, ಬ್ರಹ್ಮರಥೋತ್ಸವದ ಮುನ್ನಾದಿನ ಈ ಸ್ಫೋಟ ನಡೆದಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ.
(ಏಜೆನ್ಸೀಸ್)
ಮುಖಪುಟ / ವಾರ್ತೆಗಳು