ತೆಹಲ್ಕಾ ತರುಣ್ ತೇಜ್ಪಾಲ್ರ 2ನೇ ಇನ್ನಿಂಗ್ಸ್- ವಾರಪತ್ರಿಕೆ
ತೆಹಲ್ಕಾ
ತರುಣ್
ತೇಜ್ಪಾಲ್ರ
2ನೇ
ಇನ್ನಿಂಗ್ಸ್-
ವಾರಪತ್ರಿಕೆ
ಬೆಂಗಳೂರಲ್ಲಿ
ತೆಹಲ್ಕಾ.ಕಾಂ
ಪತ್ರಕರ್ತ
ಶನಿವಾರ(ಆ. 30) ನಗರದ ಸುದ್ದಿಗೋಷ್ಠಿಯಲ್ಲಿ ತರುಣ್ ತೇಜಪಾಲ್ ಮಾತಾಡಿದರು. ಪಾರದರ್ಶಕ ಹಾಗೂ ವಸ್ತುನಿಷ್ಠ ಪತ್ರಿಕೋದ್ಯಮ ಮಾಡುವುದು ನಮ್ಮ ಉಮೇದಿ. ವಾರಪತ್ರಿಕೆಯ ಹೆಸರೂ ‘ತೆಹಲ್ಕಾ’. ಪತ್ರಿಕೆ ಹೆಸರಿಗೆ ತಕ್ಕಂತೆ ಮೈನವಿರೇಳಿಸುವ ಸುದ್ದಿಗಳನ್ನು ಸ್ಫೋಟಿಸಲಿದೆ. ಖಚಿತ ಹಾಗೂ ಸಾಮಾಜಿಕ ಬದ್ಧತೆ ಇರುವ ಪತ್ರಿಕೆ ಇದಾಗಲಿದ್ದು, ದೇಶಾದ್ಯಂತ 2 ಲಕ್ಷಕ್ಕೂ ಹೆಚ್ಚು ಪ್ರಸಾರದ ನಿರೀಕ್ಷೆಯಿದೆ ಎಂದು ತೇಜ್ಪಾಲ್ ಹೇಳಿದರು.
ಭದ್ರತಾ ಇಲಾಖೆಯ ಭ್ರಷ್ಟಾಚಾರದ ಸಂಚಲನೆಯ ನಂತರ ಸರ್ಕಾರ ತಲೆ ಮೇಲೆ ಮೊಟಕಿತು. ಆ ಕಾರಣ ವೆಬ್ಸೈಟಿನಲ್ಲಿ ಹೆಚ್ಚು ಕೆಲಸ ಮಾಡಲಾಗುತ್ತಿಲ್ಲ. ಆ ಘಟನೆಯಿಂದ ನಾವು ಕಿಂಚಿತ್ತೂ ಧೃತಿಗೆಟ್ಟಿಲ್ಲ. ಪತ್ರಿಕೆಯಲ್ಲೂ ‘ಹಾರ್ಡ್ ಸ್ಟೋರೀಸ್’ ಬಂದೇ ಬರುತ್ತದೆ ಎಂದ ತೇಜಪಾಲ್, ಅಗ್ನಿ ಮೀಡಿಯಾ ಎಂಬ ಕಂಪನಿಯನ್ನೂ ತೇಲಿಬಿಟ್ಟಿದ್ದಾರೆ. 150ರಿಂದ 200 ವ್ಯವಸ್ಥಾಪಕ ಚಂದಾದಾರರು ಈಗಾಗಲೇ ಸಿಕ್ಕಿದ್ದಾರೆ. ತಲಾ 1 ಲಕ್ಷ ರುಪಾಯಿಗಳ 81 ಚೆಕ್ಕುಗಳು ತೇಜ್ಪಾಲ್ ಸಾಹಸ ಪ್ರೋತ್ಸಾಹಿಸಲು ಬಂದಿವೆ.
ಸಚಿನ್ ತೆಂಡೂಲ್ಕರ್ ಮೊದಲ ಬಾಲಿಗೇ ಔಟಾದರೆ, ಕ್ರೀಸ್ ಬಿಟ್ಟು ಹೋಗೋದಿಲ್ಲವೇ ಹಾಗೆ ರಾಜಕಾರಣಿಗಳೂ ಸಿಕ್ಕಿಹಾಕಿಕೊಂಡರೆ ಹೊಣೆ ಹೊತ್ತು ಹೊರ ನಡೆಯಬೇಕು ಎಂದು ಪ್ರಶ್ನೆಯಾಂದಕ್ಕೆ ತೇಜ್ಪಾಲ್ ಉತ್ತರ ಕೊಟ್ಟರು.
(ಪಿಟಿಐ)
ಮುಖಪುಟ / ವಾರ್ತೆಗಳು