ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ರೈತರಿಂದ ಲೇವಾದೇವಿದಾರರು ಸಾಲ ವಸೂಲುಮಾಡಕೂಡದು’

By Staff
|
Google Oneindia Kannada News

‘ರೈತರಿಂದ ಲೇವಾದೇವಿದಾರರು ಸಾಲ ವಸೂಲುಮಾಡಕೂಡದು’
ಸದ್ಯದಲ್ಲೇ ಖಾಸಗಿ ಲೇವಾದೇವಿದಾರರ ಸಾಲ ವಸೂಲಾತಿ ನಿಷೇಧಿಸಿ ಸುಗ್ರೀವಾಜ್ಞೆ

ಬೆಂಗಳೂರು : ಖಾಸಗಿ ಲೇವಾದೇವಿದಾರರು ರೈತರಿಗೆ ನೀಡಿರುವ ಸಾಲವನ್ನು ಈ ವರ್ಷ ವಸೂಲು ಮಾಡುವುದನ್ನು ನಿಷೇಧಿಸಿ ಸುಗ್ರೀವಾಜ್ಞೆ ಹೊರಡಿಸುವುದಾಗಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಹೇಳಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ (ಆ.28) ನಡೆದ ‘ಬ್ಯಾಂಕರುಗಳ ಸಮಾವೇಶ’ದಲ್ಲಿ ಕೃಷ್ಣ ಈ ವಿಷಯ ಹೇಳಿದರು. ಕೃಷ್ಣ ಆಡಿದ ಮಾತುಗಳಲ್ಲಿ ಮುಖ್ಯವಾದವು-

  • ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಬ್ಯಾಂಕು ಅಥವಾ ಸಹಕಾರಿ ಸಂಸ್ಥೆಗಳ ಸಾಲದ ಒತ್ತಡಕ್ಕಲ್ಲ. ಖಾಸಗಿ ಸಾಲ ತೀರಿಸಲಾರದೆ, ಬಡ್ಡಿಯ ಹೊರೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರೇ ಹೆಚ್ಚು. ಹೀಗಾಗಿ ಖಾಸಗಿ ಲೇವಾದೇವಿದಾರರು ಈ ವರ್ಷ ರೈತರಿಂದ ಸಾಲ ವಸೂಲು ಮಾಡದಂತೆ ಸುಗ್ರೀವಾಜ್ಞೆ ಹೊರಡಿಸಲಾಗುವುದು.
  • ಎಲ್ಲಾ ವಾಣಿಜ್ಯ ಬ್ಯಾಂಕುಗಳು ರೈತರ ನೆರವಿಗೆ ಧಾವಿಸುವ ಜರೂರತ್ತಿದೆ. ಮನೆ ಕಟ್ಟಲು ಕೇವಲ 8 ಪ್ರತಿಶತ ಬಡ್ಡಿಗೆ ಸಾಲ ನೀಡುವ ಬ್ಯಾಂಕುಗಳು ಕೃಷಿ ಸಾಲಕ್ಕೆ ಶೇ.11ರಷ್ಟು ಬಡ್ಡಿ ವಸೂಲು ಮಾಡುತ್ತಿರುವುದು ದುರದೃಷ್ಟಕರ.
  • ಸಾಲದ ಬಾಕಿ ಉಳಿಸಿಕೊಂಡಿರುವ ರೈತರಿಗೂ ಹೊಸದಾಗಿ ಸಾಲ ಕೊಟ್ಟು, ಬ್ಯಾಂಕುಗಳು ಅವರನ್ನು ಕಾಪಾಡಬೇಕು.
  • 1970ನೇ ಇಸವಿಗಿಂತ ಈಗ ಇರುವ ಬರ ತೀವ್ರವಾಗಿದೆ.
  • ಸರ್ಕಾರಿ ಸಂಸ್ಥೆಗಳು ರೈತರಿಗೆ ಕೊಟ್ಟಿರುವ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿವೆ. ಅಲ್ಪಾವಧಿ ಸಾಲವನ್ನು ದೀರ್ಘಾವಧಿ ಸಾಲಗಳನ್ನಾಗಿ ಪರಿವರ್ತಿಸುವ ಕುರಿತು ಮಾತುಕತೆ ನಡೆಯುತ್ತಿದೆ.
ಕೃಷ್ಣ ಅವರ ಮನವಿಗೆ ಸ್ಪಂದಿಸಿದ ಬ್ಯಾಂಕರ್‌ಗಳು, ಒಂದೆರಡು ದಿನಗಳಲ್ಲಿ ಆಡಳಿತ ಮಂಡಳಿ ಸಭೆ ನಡೆಸಿ ರೈತರ ಸಾಲದ ಬಡ್ಡಿ ದರವನ್ನು ಶೇ.11 ರಿಂದ ಶೇ.9ಕ್ಕೆ ಇಳಿಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಸಾಲದ ಅವಧಿಯನ್ನು ವಿಸ್ತರಿಸುವ ಪ್ರಸ್ತಾವನೆಗೂ ಬ್ಯಾಂಕರ್‌ಗಳು ಒಪ್ಪುವ ನಿರೀಕ್ಷೆಯಿದೆ.(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X