ದೊಡ್ಡಬಳ್ಳಾಪುರ ಯುವತಿ ಪ್ರಾಣ ರಕ್ಷಿಸಿದ ಕೆನಡಾ ಪ್ರವಾಸಿಗರು
ದೊಡ್ಡಬಳ್ಳಾಪುರ ಯುವತಿ ಪ್ರಾಣ ರಕ್ಷಿಸಿದ ಕೆನಡಾ ಪ್ರವಾಸಿಗರು
ಒಡನಾಡಿ ಆಶ್ರಯದಲ್ಲಿ ಆತ್ಮಹತ್ಯೆ ಸುಳಿಯಿಂದ ಹೊರಬಂದ ದೀಪಾಂಜಲಿ
ಕೌಟುಂಬಿಕ ದುರಂತದಿಂದ ಕಂಗಾಲಾದ ದೊಡ್ಡಬಳ್ಳಾಪುರದ ದೀಪಾಂಜಲಿ ಎನ್ನುವ ಬಾಲಕಿ ಕಾವೇರಿ ನದಿಯಲ್ಲಿ ಮುಳುಗಿ ಸಾಯಲು ಹೋಗುತ್ತಿದ್ದಾಗ, ಕೆನಡಾದ ಪ್ರವಾಸಿಗರು ಆಕೆಯನ್ನು ರಕ್ಷಿಸಿದ್ದಾರೆ. ದಕ್ಷಿಣಭಾರತದ ಪ್ರವಾಸ ಕೈಗೊಂಡಿರುವ ಕೆನಡಾದ ವಾಟರ್ಲೂ ವಿವಿ ಪದವೀಧರರಾದ ಜಾನೆಟ್ ಹಾಗೂ ಎಲಿಸನ್ ಎನ್ನುವ ಮಹಿಳೆಯರು- ಕುಶಾಲನಗರದ ಬಳಿ ಆತ್ಮಹತ್ಯೆ ಮಾಡಿಕೊಳ್ಳಲು ಕಾವೇರಿ ನದಿಯತ್ತ ಧಾವಿಸುತ್ತಿದ್ದ ದೀಪಾಂಜಲಿಯನ್ನು ತಡೆದು, ಆಕೆಗೆ ಸಾಂತ್ವನ ಹೇಳಿದ್ದಾರೆ.
ಸಾಲಗಾರರ ಕಾಟದಿಂದ ಮನೆ ಬಿಟ್ಟು ಓಡಿ ಹೋಗಿರುವ ತಂದೆ, ದುರಂತಮಯ ರೀತಿಯಲ್ಲಿ ಅಂತ್ಯಕಂಡ ತಾಯಿಯ ಬದುಕು ಹಾಗೂ ಕುಡುಕ ಸಹೋದರನ ವರ್ತನೆಯಿಂದ ಬೇಸತ್ತು ದೀಪಾಂಜಲಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದಾಳೆ. ಪ್ರತಿಭಾವಂತ ವಿದ್ಯಾರ್ಥಿನಿಯಾದ ದೀಪಾಂಜಲಿ ದ್ವಿತೀಯ ಪಿಯುಸಿ ಕಲಿಯುತ್ತಿದ್ದಾಳೆ.
ಪ್ರಸ್ತುತ ಮೈಸೂರಿನ ಒಡನಾಡಿ ಸಂಸ್ಥೆ ದೀಪಾಂಜಲಿಗೆ ಆಶ್ರಯ ನೀಡಿದೆ. ವಾಪಸ್ಸು ಊರಿಗೆ ಹೋಗಲು ಇಷ್ಟವಿಲ್ಲದಿರುವ ದೀಪಾಂಜಲಿಯ ಕಲಿಕೆಗೆ ಸವಲತ್ತು ಕಲ್ಪಿಸುವುದಾಗಿ ಒಡನಾಡಿಯ ನಿರ್ದೇಶಕ ಸ್ಟ್ಯಾನ್ಲಿ ತಿಳಿಸಿದ್ದಾರೆ.
ದೀಪಾಂಜಲಿ ಸಹಜ ಸ್ಥಿತಿಗೆ ಮರಳುವವರೆಗೂ ಆಕೆಯಾಂದಿಗೆ ಮೈಸೂರಿನಲ್ಲಿಯೇ ಇರುವುದಾಗಿ ಕೆನಡಾ ಮಹಿಳೆಯರಾದ ಎಲಿಸನ್ ಹಾಗೂ ಜಾನೆಟ್ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications