Get Updates
Get notified of breaking news, exclusive insights, and must-see stories!

ದಸರಾ ಸ್ಪೆಷಲ್‌: ಮಹಾರಾಜರ ಜತೆ ಊಟೋಪಚಾರ ಕೂಟ

ದಸರಾ ಸ್ಪೆಷಲ್‌: ಮಹಾರಾಜರ ಜತೆ ಊಟೋಪಚಾರ ಕೂಟ
ಒಂಬತ್ತು ದಿನಗಳ ಪಂಜಿನ ಮೆರವಣಿಗೆಯಾಂದಿಗೆ ದಸರೆಗೆ ಹೊಸ ಕಳೆ

ಬೆಂಗಳೂರು : ಸೆಪ್ಟೆಂಬರ್‌ 27ರಿಂದ ಆರಂಭವಾಗಲಿರುವ ಜಗತ್ಪ್ರಸಿದ್ಧ ಮೈಸೂರು ದಸರಾ ಉತ್ಸವ ಈ ಬಾರಿ ರಾಜಕಳೆಯಿಂದ ರಂಜಿಸಲಿದೆ. ರಾಜ್ಯ ಸರಕಾರವು ಮೈಸೂರು ‘ಮಹಾರಾಜರ ಜೊತೆಗೆ ಊಟೋಪಚಾರ ಕೂಟ’ ವನ್ನು ಆಯೋಜಿಸಿದೆ.

ಕಳೆದೆರಡು ವರ್ಷಗಳಲ್ಲಿ ದಸರಾಗೆ ಆಗಮಿಸುತ್ತಿರುವ ವಿದೇಶೀ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು ಈ ಆಕರ್ಷಣೆಯನ್ನು ದ್ವಿಗುಣಗೊಳಿಸಲು ರಾಜಕುಟುಂಬದ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ ಜೊತೆ ಊಟ- ಕೂಟವನ್ನು ಏರ್ಪಡಿಸಲಾಗಿದೆ.

ಈ ಕುರಿತು ರಾಜಕುಟುಂಬದವರೊಂದಿಗೆ ಸರಕಾರ ಮಾತುಕತೆ ನಡೆಸುತ್ತಿದೆ. ಆಯ್ದ ವಿದೇಶೀ ಪ್ರವಾಸಿಗರಿಗೂ ಈ ಊಟ- ಕೂಟದಲ್ಲಿ ಭಾಗವಹಿಸಿ ಮಹಾರಾಜರೊಂದಿಗೆ ಮಾತುಕತೆ ನಡೆಸುವ ಅವಕಾಶವನ್ನು ಕಲ್ಪಿಸಿಕೊಡಲಾಗುವುದು. ದಸರಾ ಆಚರಣೆ ಸಮಿತಿಯ ನೇತೃತ್ವವನ್ನು ವಹಿಸಿಕೊಂಡಿರುವ ಸಹಕಾರ ಸಚಿವ ಎಚ್‌. ವಿಶ್ವನಾಥ್‌ ಈ ವಿಷಯವನ್ನು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿದೇಶಿಯರಿಗೆ ಮಹಾರಾಜರ ಖಾಸಾ ದರಬಾರ್‌ನ್ನು ವೀಕ್ಷಿಸುವ ಹಾಗೂ ದಸರಾ ಸಂದರ್ಭದಲ್ಲಿ ಅಲಂಕಾರಗೊಳ್ಳುವ ಇಡೀ ಅರಮನೆಯನ್ನು ನೋಡುವ ಅವಕಾಶವನ್ನೂ ಮಾಡಿಕೊಡಲಾಗುವುದು.

ಹಿಂದೆ ಒಂದು ದಿನಕ್ಕೆ ಸೀಮಿತವಾಗಿದ್ದ ಪಂಜಿನ ಮೆರವಣಿಗೆಯನ್ನು ಈ ಬಾರಿ ಒಂಭತ್ತೂ ದಿನಗಳಿಗೆ ವಿಸ್ತರಿಸಲಾಗುವುದು. ಸಾಂಪ್ರದಾಯಿಕ ಆಚರಣೆಗಳ ಜೊತೆಗೆ ಈ ಬಾರಿ ದಸರೆಗೆ ವೈಭವದ ಕಳೆ ತಂದುಕೊಡಲು ದಸರಾ ಆಚರಣಾ ಸಮಿತಿ ಶ್ರಮಿಸುತ್ತಿದೆ. ಉತ್ಸವದ ಖರ್ಚಿಗಾಗಿ ಪ್ರಥಮ ಬಾರಿಗೆ ಖಾಸಗಿ ವಲಯದಿಂದಲೂ ಪ್ರಾಯೋಜಕರನ್ನು ಆಹ್ವಾನಿಸಲಾಗಿದೆ. ಸುಮಾರು 75 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಬಾರಿ ದಸರಾ ಉತ್ಸವ ನಡೆಯಲಿದೆ ಎಂದು ವಿಶ್ವನಾಥ್‌ ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+