Get Updates
Get notified of breaking news, exclusive insights, and must-see stories!

ದೇವರ ಹೆಸರಲ್ಲಿ ಕೋಮುವಾದಕ್ಕೆ ಬಲ - ಜಿಎಸ್‌ಎಸ್‌ ವಿಷಾದ

ದೇವರ ಹೆಸರಲ್ಲಿ ಕೋಮುವಾದಕ್ಕೆ ಬಲ - ಜಿಎಸ್‌ಎಸ್‌ ವಿಷಾದ
ಬೀರೇಂದ್ರ ಕೇಶವ ತಾರಕಾನಂದ ಪುರಿ ಸ್ವಾಮಿಗಳ ‘ನಾವೆಲ್ಲರೂ ಒಂದೇ’ ಕೃತಿ ಬಿಡುಗಡೆ

ಬೆಂಗಳೂರು : ದೇವರು ಹಾಗೂ ಧರ್ಮದ ಹೆಸರಿನಲ್ಲಿ ಕೋಮುಶಕ್ತಿಯನ್ನು ಬಲಗೊಳಿಸಲಾಗುತ್ತಿದೆ ಎಂದು ಹಿರಿಯ ಸಾಹಿತಿ ಡಾ.ಜಿ.ಎಸ್‌.ಶಿವರುದ್ರಪ್ಪ ವಿಷಾದಿಸಿದ್ದಾರೆ.

ದೇವರು ಹಾಗೂ ಧರ್ಮಗಳ ಹೆಸರಿನಲ್ಲಿ ಪೈಶಾಚಿಕ ಶಕ್ತಿಗಳನ್ನು ಎಚ್ಚರಗೊಳಿಸಲಾಗುತ್ತಿದೆ. ಒಂದು ಕಾಲದಲ್ಲಿ ಧರ್ಮ ಹಾಗೂ ದೇವಸ್ಥಾನಗಳು ಮನುಷ್ಯನನ್ನು ಒಗ್ಗೂಡಿಸುವ ಸಾಧನಗಳಾಗಿದ್ದವು. ಆದರೆ ಕಾಲ ಬದಲಾಗಿದ್ದು , ದೇವರ ಹೆಸರಿನಲ್ಲಿ ಅವಿವೇಕ ಹಾಗೂ ದುಂದುಗಾರಿಕೆ ನಡೆಯುತ್ತಿದೆ ಎಂದು ಜಿ.ಎಸ್‌.ಶಿವರುದ್ರಪ್ಪ ಅಭಿಪ್ರಾಯಪಟ್ಟರು. ಆ.24ರ ಭಾನುವಾರ ಕಾಗಿನೆಲೆ ಮಹಾಸಂಸ್ಥಾನ ಏರ್ಪಡಿಸಿದ್ದ- ಹಿರಿಯ ಸಾಹಿತಿ ಡಾ.ದೇ.ಜವರೇಗೌಡ ಅವರಿಗೆ ಕನಕಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿವರುದ್ರಪ್ಪ ಮಾತನಾಡುತ್ತಿದ್ದರು.

ದೇವಸ್ಥಾನಗಳು ಭಯೋತ್ಪಾದನೆಯ ತಾಣಗಳಾಗಿರುವ ಕುರಿತು ಪ್ರತಿಯಾಬ್ಬರೂ ಗಂಭೀರವಾಗಿ ಚಿಂತಿಸಬೇಕು ಎಂದ ಶಿವರುದ್ರಪ್ಪ - ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಶ್ರೇಷ್ಠ ಪ್ರತಿನಿಧಿ ಎಂದು ಕನಕದಾಸರನ್ನು ಬಣ್ಣಿಸಿದರು.

ದಾಸಸಾಹಿತ್ಯದಲ್ಲಿ ಕನಕದಾಸರದ್ದು ಅನುಪಮ ಸ್ಥಾನ. ಕನಕದಾಸರು ಕೀರ್ತನಕಾರರೂ ಹೌದು ವಿಡಂಬನಕಾರರೂ ಹೌದು ಎಂದು ಪ್ರಶಸ್ತಿ ಪಡೆದ ಜವರೇಗೌಡ (ದೇಜಗೌ) ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಶ್ರೀ ಬೀರೇಂದ್ರ ಕೇಶವ ತಾರಕಾನಂದ ಪುರಿ ಸ್ವಾಮಿಗಳ ‘ನಾವೆಲ್ಲರೂ ಒಂದೇ’ ಕೃತಿಯನ್ನು ದೇಜಗೌ ಬಿಡುಗಡೆ ಮಾಡಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+