ಮೋಡ ಬಿತ್ತನೆ ಮಳೆಯಿಂದ ಹುಬ್ಬಳ್ಳಿ ರೈತನಿಗೆ ಪ್ರಯೋಜನವಿಲ್ಲ
ಮೋಡ ಬಿತ್ತನೆ ಮಳೆಯಿಂದ ಹುಬ್ಬಳ್ಳಿ ರೈತನಿಗೆ ಪ್ರಯೋಜನವಿಲ್ಲ
ಒಣಗಿದ ಬೆಳೆಯನ್ನು ಬದುಕಿಸಲಾರದ ಕೃತಕ ಮಳೆ
ಈ ವರ್ಷ ಒಳ್ಳೆ ಮಳೆಯಾಗುತ್ತದೆ ಎಂಬ ಹವಾಮಾನ ಇಲಾಖೆಯ ಭವಿಷ್ಯಗಳನ್ನು, ರಾಜಕಾರಣಿಗಳ ಭರವಸೆಗಳನ್ನು ಕೇಳಿ ಖಾರಿಫ್ ಬೆಳೆಗೆ ಕೈ ಹಾಕಿದ ಹುಬ್ಬಳ್ಳಿಯ ರೈತನ ಬೆಳೆ ಸುಟ್ಟು ಹೋಗಿವೆ. ಜೂನ್ ಆರಂಭದಲ್ಲಿ ಕಾಣಿಸಿಕೊಂಡ ಮಳೆಯಿಂದಾಗಿ ಖಾರಿಫ್ ಬೆಳೆ ಚಿಗುರಿಕೊಂಡಿತು. ಆದರೆ ಆಗಸ್ಟ್ ಹೊತ್ತಿಗೆ ಸೋಯಾ, ಜೋಳ, ಶೇಂಗಾ, ಭತ್ತ , ಹೆಸರುಕಾಳು ಬೆಳೆಗಳೆಲ್ಲಾ ಒಣಗಿ ಹೋಗಿವೆ.
ಜೂನ್ ತಿಂಗಳಲ್ಲಿ ಧಾರವಾಡಕ್ಕೆ ಚೆಂದಾದ ಮಳೆ ಬಂತು. ಆದರೆ ಜುಲೈಯಲ್ಲಿ ಬೆಳೆ ತಣಿಯುವಷ್ಟು ಮಳೆ ಸುರಿಯುವುದು ನಿಂತು ಹೋಯಿತು. ಧಾರವಾಡ ತಾಲ್ಲೂಕಿನಲ್ಲಿ ಜುಲೈ ತಿಂಗಳಲ್ಲಿ ಸುರಿದ ಮಳೆ ಕೇವಲ 44. 3 ಮಿ.ಮೀ. ಮಾತ್ರ. ಸಾಮಾನ್ಯವಾಗಿ ಜುಲೈ ತಿಂಗಳಲ್ಲಿ ದಾಖಲಾಗಬೇಕಾದ ಮಳೆಯ ಪ್ರಮಾಣ 183 ಮಿಮೀ.
ಪ್ರತಿ ತಿಂಗಳೂ ಮಳೆ ಸುರಿದಿರುವ ಮಳೆಯ ಲೆಕ್ಕಾಚಾರವಿಟ್ಟು ಕೊಂಡು ಜಿಲ್ಲೆಯ ಕೃಷಿ ಅಧಿಕಾರಿಗಳು ಈ ಬಾರಿ ಶೇ. 100ರಷ್ಟು ಬೆಳೆ ನಾಶವಾಗಿದೆ ಎಂದು ವರದಿ ತಯಾರಿಸಿದ್ದಾರೆ. ಅಲ್ಲಿನ ರೈತರಿಗೆ ಮೋಡ ಬಿತ್ತನೆಯ ಬಗ್ಗೆಯೂ ಭರವಸೆ ಇಲ್ಲ. ವಿಮಾನಗಳು ಅತ್ತಿಂದಿತ್ತ ಹಾರಾಡುವ ಮೂಲಕ ಜಿಲ್ಲೆಯಲ್ಲಿ ತಮ್ಮ ಬೆಳೆಯನ್ನು ಪೊರೆಯುವಂತಹ ಮಳೆಯಾಗಬಹುದು ಎಂಬ ಬಗ್ಗೆ ರೈತರಿಗೆ ನಂಬಿಕೆ ಇಲ್ಲ. ಈಗ ಮಳೆ ಬಂದರೂ, ಬಂದ ಮಳೆ ಒಣಗಿ ಮಲಗಿದ ಬೆಳೆಯನ್ನು ಮತ್ತೆ ಬದುಕಿಸಲಾರದು ಎಂಬುದು ರೈತರ ಅಳಲು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications