ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಳಂದೂರಿಗೆ ಸೆ.2ರಂದು ಸೋನಿಯಾ,ಬಿಸಿಯೂಟಕ್ಕೆ ಚಾಲನೆ

By Staff
|
Google Oneindia Kannada News

ಯಳಂದೂರಿಗೆ ಸೆ.2ರಂದು ಸೋನಿಯಾ,ಬಿಸಿಯೂಟಕ್ಕೆ ಚಾಲನೆ
ಕಾಂಗ್ರೆಸ್‌ ಅಧ್ಯಕ್ಷೆಯಿಂದ ಅಕ್ಷರ ದಾಸೋಹ ಉದ್ಘಾಟನೆ

ಚಾಮರಾಜ ನಗರ: ಜಿಲ್ಲೆಯ ಯಳಂದೂರು ಗ್ರಾಮದಲ್ಲಿ ಸೆಪ್ಟೆಂಬರ್‌ 2ರಂದು ಮಧ್ಯಾಹ್ನ ಶಾಲಾ ಮಕ್ಕಳ ಬಿಸಿಯೂಟ ಯೋಜನೆ ಅಕ್ಷರ ದಾಸೋಹಕ್ಕೆ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಚಾಲನೆ ನೀಡಲಿದ್ದಾರೆ.

ಯಳಂದೂರಿನಲ್ಲಿ ಬಿಸಿಯೂಟ ಯೋಜನೆಯ ಪೂರ್ವಭಾವಿ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಹದೇವ ಅವರು, ಸೋನಿಯಾ ಗಾಂಧಿ ಸೆಪ್ಟೆಂಬರ್‌ 2ರಂದು ಯಳಂದೂರಿಗೆ ಆಗಮಿಸುವ ಬಗ್ಗೆ ಜೆ. ಎಸ್‌. ಎಸ್‌. ಸಂಸ್ಥೆಗೆ ಭರವಸೆ ನೀಡಿದ್ದಾರೆ ಎಂದರು.

ಯಳಂದೂರು ತಾಲ್ಲೂಕನ್ನು ಸುತ್ತೂರಿನ ಶ್ರೀಗಳು ದತ್ತು ತೆಗೆದುಕೊಂಡಿದ್ದು, ಈ ತಾಲ್ಲೂಕಿನಲ್ಲಿ 1ರಿಂದ 7ನೇ ತರಗತಿಯವರೆಗೆ 33 ಗ್ರಾಮಗಳ 66 ಶಾಲೆಯ ವಿದ್ಯಾರ್ಥಿಗಳಿಗೆ ಬಿಸಿಊಟವನ್ನು ನೀಡಲು ನಿರ್ಧರಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಜೆ.ಎಸ್‌.ಎಸ್‌ ವಿದ್ಯಾಪೀಠದ ಆಡಳಿತಾಧಿಕಾರಿ ನಾಗಣ್ಣಾಚಾರ್‌ ಹೇಳಿದರು.

ಬಿಸಿಯೂಟದ ಯಶಸ್ಸಿನ ಕುರಿತು ಮಾತನಾಡಿದ ಸಚಿವ ಮಹದೇವ ಅವರು ಈ ಯೋಜನೆಗಾಗಿ ಖಾಸಗಿ ಸಂಘ ಸಂಸ್ಥೆಗಳೂ ನೆರವಾಗಬೇಕು ಎಂದು ಮನವಿ ಮಾಡಿಕೊಂಡರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X