ಸಿಇಟಿ : ಮರು ಕೌನ್ಸೆಲಿಂಗ್, ಸೆಪ್ಟಂಬರ್ ಒಳಗೆ ಪ್ರವೇಶ ಪೂರ್ಣ
ಸಿಇಟಿ
:
ಮರು
ಕೌನ್ಸೆಲಿಂಗ್,
ಸೆಪ್ಟಂಬರ್
ಒಳಗೆ
ಪ್ರವೇಶ
ಪೂರ್ಣ
ಸೀಟು
ಕಳೆದುಕೊಳ್ಳಲಿರುವ
ಕರ್ನಾಟಕೇತರ
ವಿದ್ಯಾರ್ಥಿಗಳು
ಕಾನೂನು ಸಚಿವ ಡಿ. ಬಿ. ಚಂದ್ರೇಗೌಡ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಜಿ. ಪರಮೇಶ್ವರ್ ಉಪಸ್ಥಿತಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮರು ಕೌನ್ಸೆಲಿಂಗ್ ಕುರಿತು ನಿರ್ಧರಿಸಲಾಯಿತು. ಕಳೆದ ವಾರ ಸಿಇಟಿ -ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕೋರ್ಟು ನೀಡಿದ ಆದೇಶದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಂದ್ರೇಗೌಡ, ಸಮಯದ ಅಭಾವ ಇರುವುದರಿಂದ ಸರಕಾರವು ಅಧಿಕಾರಿಗಳಿಗೆ ಹೊಸ ಸೀಟು ಮ್ಯಾಟ್ರಿಕ್ಸ್ ರೂಪಿಸಲು ತಿಳಿಸಿದೆ. ಇದರಿಂದ ಆದಷ್ಟು ಬೇಗನೇ ರೀಕೌನ್ಸೆಲಿಂಗ್ ನಡೆಸಲು ಅನುಕೂಲವಾಗಲಿದೆ ಎಂದರು.
ಸುಪ್ರಿಂಕೋರ್ಟು ಆದೇಶದ ಪ್ರಕಾರ ಈಗ ಕರ್ನಾಟಕೇತರ ವಿದ್ಯಾರ್ಥಿಗಳ ಹಾಗೂ ಪೇಮೆಂಟ್ ಸೀಟು ಕೋಟಾದಡಿ ಈಗಾಗಲೇ ಸೀಟು ಗಿಟ್ಟಿಸಿಕೊಂಡ ವಿದ್ಯಾರ್ಥಿಗಳು ತಮ್ಮ ಸೀಟು ಕಳೆದುಕೊಳ್ಳಲಿದ್ದಾರೆ. ಸೆಪ್ಟೆಂಬರ್ ಅಂತ್ಯದೊಳಗೆ ಪ್ರವೇಶ ಪ್ರಕ್ರಿಯೆಯನ್ನು ಮುಗಿಸಲಾಗುವುದು ಹಾಗೂ ವಿದ್ಯಾರ್ಥಿಗಳಿಗೆ ಮೊದಲನೇ ಸೆಮಿಸ್ಟರ್ ಪಾಠಕ್ಕೆ ಏನೂ ತೊಂದರೆಯಾಗುವುದಿಲ್ಲ. ಮುಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿಯೂ ಸಿಇಟಿ ಕುರಿತಂತೆ ಸುಪ್ರೀಂ ಕೋರ್ಟು ಆದೇಶದ ಬಗ್ಗೆ ಚರ್ಚಿಸಲಾಗುವುದು ಎಂದು ಚಂದ್ರೇಗೌಡ ಭರವಸೆ ನೀಡಿದರು.
ಈ ನಡುವೆ ಖಾಸಗಿ ವೃತ್ತಿ ಶಿಕ್ಷಣ ಕಾಲೇಜಿನ ನಿರ್ವಹಣಾಧಿಕಾರಿಗಳು ಸುಪ್ರಿಂ ಕೋರ್ಟು ತೀರ್ಪಿನ ಬಗ್ಗೆ ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚಿಸಲು ಆಗಸ್ಟ್ 21ರಂದು ಸಭೆ ಕರೆದಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು