ಚಿತ್ರದುರ್ಗ: ವಿಧವೆ ಮತ್ತು ವಿಚ್ಛೇದಿತ ಮಹಿಳೆಗೆ ಮತ್ತೆ ಕಂಕಣಭಾಗ್ಯ
ಚಿತ್ರದುರ್ಗ: ವಿಧವೆ ಮತ್ತು ವಿಚ್ಛೇದಿತ ಮಹಿಳೆಗೆ ಮತ್ತೆ ಕಂಕಣಭಾಗ್ಯ
ಮುರುಘರಾಜೇಂದ್ರ ಶರಣರ ನೇತೃತ್ವದಲ್ಲಿ ಆದರ್ಶ ವಿವಾಹ
ವಿಚ್ಛೇದಿತ ಮಹಿಳೆ ಹಾಗೂ ಓರ್ವ ವಿಧವೆ ಆ.17ರ ಭಾನುವಾರ ದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಬಸವೇಶ್ವರ ಸಭಾಂಗಣದಲ್ಲಿ ನಡೆದ ಆದರ್ಶ ಕಲ್ಯಾಣ ಮಹೋತ್ಸವದಲ್ಲಿ ಮತ್ತೆ ಸಪ್ತಪದಿ ತುಳಿದರು. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೇವಿಹಳ್ಳಿಯ ಕಾಫಿ ಪ್ಲಾಂಟರ್ ರವಿಚಂದ್ರ ಹಾಗೂ ವಿಚ್ಛೇದಿತ ಮಹಿಳೆ ಚಿತ್ರದುರ್ಗದ ಚಂದ್ರಿಕಾ ಸತಿಪತಿಗಳಾದರು. ಅದೇ ರೀತಿ- ತುಮಕೂರು ಜಿಲ್ಲೆಯ ಡಿ.ಓ.ರಾಮಸ್ವಾಮಿ ಎನ್ನುವ ವ್ಯಕ್ತಿ ಚಿತ್ರದುರ್ಗದ ರಾಜಮ್ಮ ಎನ್ನುವ ವಿಧವೆಗೆ ಮತ್ತೆ ದಾಂಪತ್ಯ ಜೀವನ ನೀಡಿದರು.
ಆದರ್ಶ ವಿವಾಹಗಳನ್ನು ಸ್ವಾಗತಿಸಿ ಮಾತನಾಡಿದ ಮುರುಘರಾಜೇಂದ್ರ ಶರಣರು- ಆದರ್ಶದ ಹೆಜ್ಜೆಯಲ್ಲಿ ಸಂಘರ್ಷಗಳು ಸಹಜ. ಆದರೆ, ಈ ಸಂಘರ್ಷಗಳಿಗೆ ಅಂಜಬಾರದು. ಆದರ್ಶ ಎನ್ನುವುದು ಬಾಯಿ ಮಾತು ಮಾತ್ರವಾಗದೆ ಸಮಾಜ ಕಲ್ಯಾಣಕ್ಕೆ ಪೂರಕವಾಗಬೇಕು ಎಂದರು.
ಶಾಸಕ ಎ. ಚಂದ್ರಪ್ಪ ಆದರ್ಶ ಕಲ್ಯಾಣ ಮಹೋತ್ಸದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications