Get Updates
Get notified of breaking news, exclusive insights, and must-see stories!

ಮಲ್ಲಿಗೆ ಕವಿ ನರಸಿಂಹಸ್ವಾಮಿ ತೊಡೆಗೆ ಪೆಟ್ಟು , ಆಸ್ಪತ್ರೆಗೆ ದಾಖಲು

ಮಲ್ಲಿಗೆ ಕವಿ ನರಸಿಂಹಸ್ವಾಮಿ ತೊಡೆಗೆ ಪೆಟ್ಟು , ಆಸ್ಪತ್ರೆಗೆ ದಾಖಲು
ಕನ್ನಡದ ಹಿರಿಯ ಲೇಖಕರಿಗಿದು ಅನಾರೋಗ್ಯದ ಕಾಲ

ಬೆಂಗಳೂರು : ಮಂಚದ ಮೇಲಿನಿಂದ ಬಿದ್ದು ತೊಡೆಗೆ ಪೆಟ್ಟು ಮಾಡಿಕೊಂಡಿರುವ ಮೈಸೂರು ಮಲ್ಲಿಗೆ ಕವಿ ಡಾ.ಕೆ.ಎಸ್‌.ನರಸಿಂಹಸ್ವಾಮಿ ಅಸ್ವಸ್ಥರಾಗಿದ್ದು , ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಚದ ಮೇಲೆ ಕುಳಿತುಕೊಳ್ಳಲು ಹೋಗಿ ಆಯತಪ್ಪಿ ಕೆಳಗೆ ಬಿದ್ದಿರುವ ನರಸಿಂಹಸ್ವಾಮಿ ಅವರ ತೊಡೆಯ ಮೂಳೆಗೆ ಪೆಟ್ಟಾಗಿದೆ. 88 ರ ವಯಸ್ಸಿನ ನರಸಿಂಹಸ್ವಾಮಿ ಅವರಿಗೆ ದೃಷ್ಟಿ ಮಂಜಾಗಿದ್ದು , ನಿಶ್ಶಕ್ತಿಯಿಂದ ಬಳಲುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಪಂಪ ಪ್ರಶಸ್ತಿ ವಿಜೇತ ಸಾಹಿತಿ ಹಾಗೂ ಶತಾಯುಷಿ ಎ.ಎನ್‌.ಮೂರ್ತಿರಾವ್‌ ಅವರು ಕೂಡ ಮೂಳೆಗೆ ಪೆಟ್ಟು ಮಾಡಿಕೊಂಡು ಗಾಯಗೊಂಡಿದ್ದರು. ಪ್ರಸ್ತುತ ಮೂರ್ತಿರಾವ್‌ ಚೇತರಿಸಿಕೊಂಡು ಆರೋಗ್ಯವಾಗಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+