ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾತು ತಪ್ಪಿದ ವಾಜಪೇಯಿಗೆ ಅಂಧ ಬಾಲಕಿಯಿಂದ ರಕ್ಷಾ ಬಂಧನ

By Staff
|
Google Oneindia Kannada News

ಮಾತು ತಪ್ಪಿದ ವಾಜಪೇಯಿಗೆ ಅಂಧ ಬಾಲಕಿಯಿಂದ ರಕ್ಷಾ ಬಂಧನ
ದೆಹಲಿಯ ಶಾಲಾ ಮಕ್ಕಳಿಂದ ಪ್ರಧಾನಿ ವಾಜಪೇಯಿಗೆ ರಾಖಿ, ಶುಭ ಹಾರೈಕೆ

‘ನೀವೊಂದು ದೊಡ್ಡ ತಪ್ಪು ಮಾಡಿದ್ದೀರಿ ?’

ಕೈಗೆ ರಕ್ಷಾಬಂಧನ ಕಟ್ಟಿದ ಬಾಲಕಿ ಹೀಗೆ ಕೇಳಿದಾಗ ಪ್ರಧಾನಿ ವಾಜಪೇಯಿ ಕ್ಷಣಕಾಲ ಕಕ್ಕಾಬಿಕ್ಕಿ. ತಾನು ಮಾಡಿದ ತಪ್ಪಿನ ಬಗ್ಗೆ ವಾಜಪೇಯಿ ಅವರಿಗೆ ನೆನಪೇ ಇರಲಿಲ್ಲ . ಆರೋಪ ಹೊರಿಸಿದ ಬಾಲಕಿಯೇ ಮರೆತದ್ದನ್ನು ನೆನಪಿಸಿದಳು.

ಕಳೆದ ವರ್ಷ ರಕ್ಷಾಬಂಧನದ ಸಂದರ್ಭದಲ್ಲಿ ಇದೇ ಬಾಲಕಿ ಪ್ರಧಾನಿ ವಾಜಪೇಯಿ ಅವರಿಗೆ ರಾಖಿ ಕಟ್ಟಿದ್ದಳು. ರಾಖಿ ಕಟ್ಟುವ ಸಂದರ್ಭದಲ್ಲಿ ತಮ್ಮ ಕವನಗಳ ಕೆಸೆಟ್ಟೊಂದನ್ನು ಕಳುಹಿಸಿಕೊಡುವುದಾಗಿ ವಾಜಪೇಯಿ ಆ ಹುಡುಗಿಗೆ ವಚನ ನೀಡಿದ್ದರು. ಆದರೆ ಕೊಟ್ಟ ಮಾತನ್ನು ಅಪಾರ ಕಾರ್ಯಭಾರಗಳ ನಡುವೆ ವಾಜಪೇಯಿ ಮರೆತಿದ್ದರು. ಆದರೆ, ಹುಡುಗಿ ಮಾತ್ರ ಅದನ್ನು ಮರೆತಿರಲಿಲ್ಲ .

ತಮ್ಮ ಮರೆವಿನ ಕುರಿತು ಪ್ರಧಾನಿಗೆ ಮುಜುಗರ. ತಪ್ಪನ್ನು ತಿದ್ದಿಕೊಳ್ಳುವುದಾಗಿ, ಕೆಸೆಟ್‌ ಮರೆಯದೇ ಕಳಿಸುವುದಾಗಿ ಹೇಳಿದಾಗ ಆ ಹುಡುಗಿಯ ಕೆನ್ನೆಗಳಲ್ಲಿ ಹೊಳಪು. ಜಾಣೆ ಹುಡುಗಿಯ ಆಸೆಯಂತೆ ವಾಜಪೇಯಿ ತಮ್ಮ ಕವಿತೆಯ ಕೆಲವು ಸಾಲುಗಳನ್ನು ವಾಚಿಸಿದರು. ಮಕ್ಕಳಿಂದ ಚಪ್ಪಾಳೆ.

ಅಂದಹಾಗೆ, ಪ್ರಧಾನಿಗೆ ನೆನಪಿನ ಪಾಠ ಹೇಳಿಕೊಟ್ಟ ಆ ಹುಡುಗಿ ಅಂಧಳು. ಈಕೆ ಓಂ ಪ್ರಕಾಶ್‌ ಪ್ರತಿಷ್ಠಾನ ಹಾಸ್ಟೆಲ್‌ ಹಾಗೂ ತರಬೇತಿ ಕೇಂದ್ರಕ್ಕೆ ಸೇರಿದ (Om Prakash Foundation hostel and Vocational Training Centre) ಹುಡುಗಿ.

ದೆಹಲಿಯ ವಿವಿಧ ಶಾಲೆಗಳ ಮಕ್ಕಳು ಪ್ರಧಾನಿ ಅವರ ನಿವಾಸಕ್ಕೆ ತೆರಳಿ (ಆ.12ರ ಮಂಗಳವಾರ) ವಾಜಪೇಯಿ ಅವರಿಗೆ ರಕ್ಷಾಬಂಧನ ಕಟ್ಟಿ ಶುಭ ಹಾರೈಸಿದರು. ಅವರಲ್ಲಿ ಕೆಲವು ಮಂದಿ ಅಂಗವಿಕಲ ಮಕ್ಕಳೂ ಇದ್ದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X