ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯವೇ ರಾಜೂಗೌಡ ವಿರುದ್ಧ ರಾಜಕೀಯಕ್ಕೆ ಪರಿಮಳಾ ನಾಗಪ್ಪ

By Staff
|
Google Oneindia Kannada News

ಸದ್ಯವೇ ರಾಜೂಗೌಡ ವಿರುದ್ಧ ರಾಜಕೀಯಕ್ಕೆ ಪರಿಮಳಾ ನಾಗಪ್ಪ
ಪೊನ್ನಾಚಿ ಮಹಾದೇವ ಸ್ವಾಮಿ ಘೋಷಣೆ

ಹನೂರು: ನರಹಂತಕ ವೀರಪ್ಪನ್‌ ಸೆರೆಯಲ್ಲಿ ಹತರಾದ ಜನತಾ ದಳ ಮುಖಂಡ ಎಚ್‌. ನಾಗಪ್ಪನವರ ಪತ್ನಿ ಪರಿಮಳಾ ನಾಗಪ್ಪ ಸದ್ಯದಲ್ಲೇ ಸೂಕ್ತ ವೇದಿಕೆಯ ಮೂಲಕ ರಾಜಕೀಯ ಪ್ರವೇಶಿಸಲಿದ್ದಾರೆ.

ಜನತಾ ದಳದ ಮುಖಂಡ ಪೊನ್ನಾಚಿ ಮಹದೇವ ಸ್ವಾಮಿ ಪರಿಮಳಾ ನಾಗಪ್ಪನವರ ರಾಜಕೀಯ ಪ್ರವೇಶ ಕುರಿತಾದ ವಿಷಯವನ್ನು ಭಾನುವಾರ ಘೋಷಿಸಿದ್ದಾರೆ. ಕಾಮಗೆರೆ ಗ್ರಾಮದಲ್ಲಿರುವ ದಿವಂಗತ ಎಚ್‌. ನಾಗಪ್ಪ ನಿವಾಸದಲ್ಲಿ ನಡೆದ ಜನತಾ ದಳದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಹಾಲಿ ಸಚಿವರಾಗಿರುವ ಹಾಗೂ ವೀರಪ್ಪನ್‌ ಜೊತೆ ಸಂಬಂಧವಿರಿಸಿಕೊಂಡಿದ್ದಾರೆ ಎಂಬ ಆಪಾದನೆಯನ್ನೂ ಹೊತ್ತಿರುವ ರಾಜೂ ಗೌಡ ಅವರಿಗೆ ಪರ್ಯಾಯವಾಗಿ ಪರಿಮಳಾ ನಾಗಪ್ಪ ಅವರನ್ನು ಒಂದು ಶಕ್ತಿಯನ್ನಾಗಿ ರೂಪಿಸಲು ಜನತಾ ದಳದ ಸಭೆ ತೀರ್ಮಾನಿಸಬೇಕು ಎಂಬ ಆಗ್ರಹ ಸಭೆಯಲ್ಲಿ ವ್ಯಕ್ತವಾಯಿತು. ಇದಕ್ಕಾಗಿ ಶೀಘ್ರವೇ ವೇದಿಕೆ ಸಿದ್ಧ ವಾಗಲಿರುವುದಾಗಿ ಮಹದೇವಸ್ವಾಮಿ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X