ಎಲ್ಲಾ ಸರ್ಕಾರಿ ವೆಬ್ಸೈಟುಗಳು ಕನ್ನಡದಲ್ಲೇ ಇರಬೇಕು-ಇದಿನಬ್ಬ
ಎಲ್ಲಾ ಸರ್ಕಾರಿ ವೆಬ್ಸೈಟುಗಳು ಕನ್ನಡದಲ್ಲೇ ಇರಬೇಕು-ಇದಿನಬ್ಬ
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರದ್ದೂ ಇದೇ ಆಗ್ರಹ
ರಾಜ್ಯ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್ ಅವರಿಗೆ ಇದಿನಬ್ಬ ಪತ್ರ ಬರೆದಿದ್ದು, ವಿದ್ಯುನ್ಮಾನ ಆಡಳಿತದಿಂದ ಆಡಳಿತದಲ್ಲಿ ಕನ್ನಡ ಬಳಕೆಗೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದ್ದಾರೆ. ಪ್ರಾಧಿಕಾರದ ಸರ್ವ ಸದಸ್ಯರ ಸಭೆ ನಡೆಸಿದ ನಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸುವ ನಿರ್ಣಯ ಕೈಗೊಳ್ಳಲಾಯಿತು ಎಂದು ಇದಿನಬ್ಬ ತಿಳಿಸಿದರು.
ಹರಿಕೃಷ್ಣ ಪುನರೂರು ನೇರವಾಗಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಪತ್ರ ಬರೆದಿದ್ದು, ವೆಬ್ಸೈಟುಗಳನ್ನು ಕನ್ನಡದಲ್ಲೇ ರೂಪಿಸುವಂತೆ ಆಯಾ ಇಲಾಖೆಗಳ ಮುಖ್ಯಸ್ಥರಿಗೆ ಆದೇಶ ಕೊಡಬೇಕೆಂದು ಆಗ್ರಹಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications