ಶಿವಮೊಗ್ಗೆಯ ಶಿರೂರಲ್ಲಿ ಮಾರಕ ರೋಗಕ್ಕೆ 9 ಹಸುಗಳ ಸಾವು
ಶಿವಮೊಗ್ಗೆಯ
ಶಿರೂರಲ್ಲಿ
ಮಾರಕ
ರೋಗಕ್ಕೆ
9
ಹಸುಗಳ
ಸಾವು
ಬರವಿಲ್ಲದ
ಮಳೆಯೂರಿಗೆ
ವಿಚಿತ್ರ
ಹಸು
ರೋಗ
ಪಶು ಸಂಗೋಪನಾ ಇಲಾಖೆಯ ಕೆಲವು ಪಶುವೈದ್ಯರ ಪ್ರಕಾರ ಇದಕ್ಕೆ ಕಾರಣ ರೇಬಿಸ್. ಆದರೆ, ಗೊತ್ತೇ ಆಗದ ಭಯಂಕರ ರೋಗಕ್ಕೆ ಹಸುಗಳು ತುತ್ತಾಗಿವೆ ಅಂತ ಇನ್ನು ಕೆಲವು ಪಶು ವೈದ್ಯರು ವಾದಿಸುತ್ತಿದ್ದಾರೆ. ಸಂಶೋಧನೆ ಮುಂದುವರೆದಿದ್ದು, ಹಸುಗಳ ಸಾವಿಗೆ ನಿಜವಾದ ಕಾರಣವನ್ನು ಕಂಡುಹಿಡಿಯುವ ಯತ್ನ ನಡೆಯುತ್ತಿದೆ.
ವಿಪರೀತ ಜೊಲ್ಲು ಸುರಿಸುವುದು, ಮನೋವೈಕಲ್ಯಕ್ಕೆ ಸಿಲುಕಿದಂತೆ ಗೋಡೆಗೋ ಮರಕ್ಕೋ ಜೋರಾಗಿ ಗುದ್ದಿ ಗುದ್ದಿ ಘಾಸಿ ಮಾಡಿಕೊಳ್ಳುವುದು ಈ ರೋಗದ ಲಕ್ಷಣವಾಗಿದೆ. ರೇಬಿಸ್ ರೋಗ ಬಂದಾಗ ಕೂಡ ಹಸುಗಳು ಹೀಗೇ ವರ್ತಿಸುತ್ತವೆ ಎಂದು ಪಶು ಸಂಗೋಪನೆ ಮತ್ತು ಪ್ರಾಣಿ ವಿಜ್ಞಾನ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವಿ.ಎನ್.ಮಂಜುನಾಥ್ ಅಭಿಪ್ರಾಯ ಪಟ್ಟಿದ್ದಾರೆ.
ರೇಬಿಸ್ ದಾಳಿಯಿಟ್ಟರೆ, 7 ಸುತ್ತಿನ ಲಸಿಕೆ ಹಾಕಿಸಬೇಕಾಗುತ್ತದೆ. ಇದಕ್ಕೆ 350 ರುಪಾಯಿ ಹಣ ಬೇಕಾಗುತ್ತದೆ. ಅನೇಕ ರೈತರು ಇಷ್ಟೊಂದು ಹಣ ಖರ್ಚು ಮಾಡಿ, ಹಸುಗಳಿಗೆ ಲಸಿಕೆ ಕೊಡಿಸುವ ಸ್ಥಿತಿಯಲ್ಲಿ ಇಲ್ಲ. ಇನ್ನಷ್ಟು ಹಸುಗಳು ರೋಗದ ಲಕ್ಷಣ ತೋರುತ್ತಿದ್ದು ಇಡೀ ಶಿರೂರು ಗ್ರಾಮ ಆತಂಕದಲ್ಲಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು