ಬೆಳ್ಳಾರೆ ಗ್ರಾಮದಲ್ಲಿ ಅಂಚೆಯಣ್ಣನ ಜೊತೆ ಮೊಬೈಲ್ ರಿಂಗಣ
ಬೆಳ್ಳಾರೆ ಗ್ರಾಮದಲ್ಲಿ ಅಂಚೆಯಣ್ಣನ ಜೊತೆ ಮೊಬೈಲ್ ರಿಂಗಣ
ಮನೆ ಬಾಗಿಲಿಗೆ ದೂರವಾಣಿ ಸೇವೆ, ಸ್ಥಳದಲ್ಲೇ ಬಿಲ್ ಪಾವತಿ ಸೌಲಭ್ಯ
ಕಣ್ಣ ಹುಬ್ಬು ಏರಿಸದಿರಿ. ಇದು ಅಂಚೆಯಣ್ಣನ ತನ್ನ ಸ್ವಂತ ಉಪಯೋಗಕ್ಕಾಗಿ ತೆಗೆದುಕೊಂಡಿರುವ ಮೊಬೈಲ್ ಅಲ್ಲ. ಜನರಿಗಾಗಿ ಸರ್ಕಾರ ಕೊಟ್ಟ ಮೊಬೈಲು. ಗ್ರಾಮಸ್ಥರಿಗೆ ತುರ್ತು ಸಂದರ್ಭಗಳಲ್ಲಿ ಪೋಸ್ಟ್ಮ್ಯಾನ್ ಕೈಲಿರುವ ಮೊಬೈಲ್ ಫೋನ್ ಬಳಸುವ ಹಾಗೂ ಸ್ಥಳದಲ್ಲಿಯೇ ಬಿಲ್ ಪಾವತಿಸುವ ಅವಕಾಶವನ್ನು ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲೀಗ ಕಲ್ಪಿಸಲಾಗಿದೆ.
ಬೆಳ್ಳಾರೆಯಲ್ಲಿ 500 ಲೈನ್ಗಳ ಸಾಮರ್ಥ್ಯದ ಗ್ರಾಮೀಣ ಡಬ್ಲ್ಯು ಡಬ್ಲ್ಯು ಎಲ್ ಎಲ್ ಸೌಲಭ್ಯವನ್ನು ಕಳೆದ ಜುಲೈ 24ರಂದು ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಮಂಗಳೂರಿನ ಟೆಲಿಕಾಂ ಜಿಲ್ಲಾ ಪ್ರಿನ್ಸಿಪಲ್ ಜನರಲ್ ಮ್ಯಾನೇಜರ್ ಕೆ. ಜೆ. ಚಾಕೋ ಅವರು ಗ್ರಾಮೀಣ ಸಂಚಾರ ಸೇವೆಯ ಮೊಬೈಲ್ ದೂರವಾಣಿ ಸೆಟ್ಗಳನ್ನು ಪೋಸ್ಟ್ಮ್ಯಾನ್ಗಳಿಗೆ ಹಸ್ತಾಂತರಿಸಿದರು.
ಅಂಚೆ ವಿತರಣೆ ಮಾಡುವಾಗ ಪೋಸ್ಟ್ ಮ್ಯಾನ್ ಬಳಿಯಿರುವ ಮೊಬೈಲ್ಗಳನ್ನು ಗ್ರಾಮಸ್ಥರು ಬಳಸಬಹುದು. ಇದರಿಂದಾಗಿ ಮೊಬೈಲ್ ಫೋನ್ ಬಳಕೆಯ ಅವಕಾಶ ಗ್ರಾಮಸ್ಥರನ್ನೂ ತಲುಪಲಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications