ಬೆಂಗಳೂರಲ್ಲಿ ಡೆಂಗ್ಯೂ ಪೀಡಿತರ ಸಂಖ್ಯೆ 50 ಅಲ್ಲ , 2000 !
ಬೆಂಗಳೂರಲ್ಲಿ ಡೆಂಗ್ಯೂ ಪೀಡಿತರ ಸಂಖ್ಯೆ 50 ಅಲ್ಲ , 2000 !
ಇದು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳ ಅಂದಾಜು
ಮಹಾನಗರ ಪಾಲಿಕೆ ಆಯುಕ್ತ ಎಂ.ಆರ್.ಶ್ರೀನಿವಾಸ ಮೂರ್ತಿ ನಾಲ್ಕು ದಿನಗಳ ಹಿಂದೆ ಮಾಧ್ಯಮಗಳಿಗೆ ಡೆಂಗ್ಯೂ ಪೀಡಿತರ ಬಗ್ಗೆ ಮಾಹಿತಿ ಕೊಡುವಾಗ, ಈ ಸಂಖ್ಯೆ ಇನ್ನು ಕೆಲವು ದಿನಗಳಲ್ಲಿ ಗಣನೀಯವಾಗಿ ಹೆಚ್ಚಲಿದೆ ಎಂದು ಹೇಳಿದ್ದರು. ‘ಸೆಂಟರ್ ಫಾರ್ ರಿಸರ್ಚ್ ಇನ್ ಮೆಡಿಕಲ್ ಎಂಟಮಾಲಜಿ’ ಈಗಾಗಲೇ ಡೆಂಗ್ಯೂ ಪೀಡಿತರಾಗಿರುವ 50 ಮಂದಿಯನ್ನು ಪರೀಕ್ಷಿಸಿ, ಸಮಗ್ರ ವರದಿ ಕೊಡುತ್ತದೆ. ಈವರೆಗೆ ಕೇವಲ 30 ಜನರ ವರದಿ ಹೊರಬಿದ್ದಿದೆ. ಮಿಕ್ಕ 20 ಮಂದಿಯ ಅನಾರೋಗ್ಯದ ಕುರಿತು ವರದಿ ಹೊರಬಿದ್ದು, ಡೆಂಗ್ಯೂ ನಿಯಂತ್ರಣ ಕ್ರಮ ತೆಗೆದುಕೊಳ್ಳುವಷ್ಟರಲ್ಲಿ ಇನ್ನೆಷ್ಟು ಮಂದಿ ರೋಗಕ್ಕೆ ಸಿಕ್ಕಿರುತ್ತಾರೋ?
ಮಹಾನಗರ ಪಾಲಿಕೆ ಮಾಧ್ಯಮಗಳಿಗೆ ಕೊಡುವ ಡೆಂಗ್ಯೂ ವರದಿ ಕೇವಲ ಮುಖ್ಯ ಆಸ್ಪತ್ರೆಗಳಲ್ಲಿ ದಾಖಲಾದ ಪ್ರಕರಣಗಳನ್ನು ಆಧರಿಸಿರುತ್ತದೆ. ಆದರೆ, ಉಪ ಕ್ಲಿನಿಕ್ಗಳು ಮತ್ತಿತರ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಡೆಂಗ್ಯೂ ಪ್ರಕರಣಗಳ ಬಗ್ಗೆ ಪಾಲಿಕೆ ಗಮನ ಹರಿಸಿರುವುದಿಲ್ಲ. ಈ ಬಗ್ಗೆ ಆರೋಗ್ಯಾಧಿಕಾರಿಗಳಲ್ಲೇ ಗೊಂದಲವಿರುವುದು ಸ್ಪಷ್ಟವಾಗಿದೆ.
ಈ ಗೊಂದಲ ಹೋಗಲಾಡಿಸಿ, ಡೆಂಗ್ಯೂ ಮಾರಿಯಿಂದ ನಾಗರಿಕರು ಬಚಾವಾಗುವಂತೆ ಮಾಡುವುದು ಹೇಗೆ? ಇದರ ಬಗ್ಗೆ ಚರ್ಚಿಸಲೆಂದೇ ಬುಧವಾರ (ಜು.16) ನಗರದ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳು ಸಭೆ ಸೇರಲಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ರಾಜ್ಯದಲ್ಲಿ ಡೆಂಗ್ಯೂ : 192 ಮಂದಿಗೆ ಸೋಂಕು, ಇಬ್ಬರ ಸಾವು
ಹನಿ ಮಳೆಗೇ ಬೆಂಗಳೂರಿಗೆ ಬಂತು ಡೆಂಗ್ಯೂ ಮಹಾಮಾರಿ
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications