ಪುನರೂರು ಅಧ್ಯಕ್ಷಗಿರಿಗೆ ಎರಡು ವರ್ಷ
ಪುನರೂರು ಅಧ್ಯಕ್ಷಗಿರಿಗೆ ಎರಡು ವರ್ಷ
ಕನ್ನಡ ಸಾಹಿತ್ಯ ಪರಿಷತ್ ಎದುರಿನಲ್ಲಿ ಹೊಸ ಯೋಜನೆಗಳು ಸಾಲು ಸಾಲು
ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಸರಕಾರದ ಅನುದಾನದೊಂದಿಗೆ 100 ಗ್ರಂಥಗಳ ಪ್ರಕಟಣೆ ಕಾರ್ಯವನ್ನು ಹಮ್ಮಿಕೊಂಡಿದೆ. ಈ ಮಾಲಿಕೆಯಲ್ಲಿ 50 ಹಳೆಗನ್ನಡ ಗ್ರಂಥ ಕಾವ್ಯಗಳು, 50 ಶಾಸ್ತ್ರ ಗ್ರಂಥಗಳನ್ನು ಪ್ರಕಟಿಸಲಾಗುವುದು. ಇದಲ್ಲದೆಯೇ 100 ಉತ್ತಮ ಪುಸ್ತಕಗಳನ್ನು ಪ್ರಕಟಿಸಲಾಗುವುದು ಎಂದು ಹರಿಕೃಷ್ಣ ಪುನರೂರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಸಾಪ ಮುಂದಿರುವ ಯೋಜನೆಗಳು :
- ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣ ರಾಜ ಪರಿಷನ್ಮಂದಿರದ ನವೀಕರಣದ ಬದಲು ನವ ಕಟ್ಟಡದ ನಿರ್ಮಾಣ.
- ಕನ್ನಡ ಸಾಹಿತ್ಯ ಪರಿಷತ್ತಿನ ವೆಬ್ಸೈಟ್ ನಿರ್ಮಾಣ.
- ಅಮೂಲ್ಯ ಗ್ರಂಥಗಳನ್ನು ಸಿ.ಡಿ.ಗೆ ಅಳವಡಿಸುವುದು.
- ಪರಿಷ್ಕೃತ ಕನ್ನಡ- ಕನ್ನಡ- ಇಂಗ್ಲಿಷ್ ನಿಘಂಟು ರಚನೆ.
ಮುಖಪುಟ / ವಾರ್ತೆಗಳು












Click it and Unblock the Notifications