7 ವರ್ಷಗಳ ಹಿಂದಿನ ಬೀಸುದೊಣ್ಣೆಯಿಂದ ಬಂಗಾರಪ್ಪ ಪಾರು
7 ವರ್ಷಗಳ ಹಿಂದಿನ ಬೀಸುದೊಣ್ಣೆಯಿಂದ ಬಂಗಾರಪ್ಪ ಪಾರು
ಪಿ.ಸಿ.ದಂತ ಕಾಲೇಜು ಹಗರಣ ; ಸಾಕ್ಷ್ಯದ ಪುಷ್ಟಿ ಸಿಗದ ಕಾರಣ ಬಂಗಾರಪ್ಪ ಬಚಾವ್. ಇದಲ್ಲದೆ ಇನ್ನೂ ಎರಡು ಆರೋಪ ಇವರ ಮೇಲೆ ಹಾಗೇ ಇದೆ.
ಬಂಗಾರಪ್ಪನವರ ಮೇಲೆ ಹೊರಿಸಲಾಗಿದ್ದ ಆರೋಪಗಳನ್ನು ಸಾಬೀತು ಪಡಿಸಲು ಸಾಕಷ್ಟು ಪುರಾವೆ ಒದಗಿಸುವಲ್ಲಿ ಅರ್ಜಿದಾರರು ವಿಫಲವಾದ ಕಾರಣ ಬಂಗಾರಪ್ಪನವರನ್ನು ದೋಷ ಮುಕ್ತ ಎಂದು ಪರಿಗಣಿಸಲಾಗಿರುವುದಾಗಿ ಸಿಬಿಐ ಕೋರ್ಟಿನ ವಿಶೇಷ ಮುಖ್ಯ ನ್ಯಾಯಮೂರ್ತಿ ಎಸ್.ವಿ.ಪಾಟೀಲ್ ತೀರ್ಪಿನಲ್ಲಿ ಘೋಷಿಸಿದರು.
ಹಗ-ರ-ಣ-ಕ್ಕೆ ಸಂಬಂ-ಧಿಸಿ-ದಂ-ತೆ ಆಗಿನ ಆರೋಗ್ಯ ಸಚಿವರಾಗಿದ್ದ ಜಿ.ಪುಟ್ಟಸ್ವಾಮಿ ಗೌಡ, ಬಂಗಾರಪ್ಪ ಸೇರಿದಂತೆ ಆರು ಮಂ-ದಿ ಆರೋಪಿಗಳ ಸ್ಥಾನದಲ್ಲಿ ನಿಂತಿದ್ದರು. ಪಿ.ಸಿ. ದಂತ ಮತ್ತು ನರ್ಸಿಂಗ್ ಕಾಲೇಜಿಗೆ ಬೆಂಗಳೂರು ವಿಶ್ವವಿದ್ಯಾಲಯದ ಮಾನ್ಯತೆ ಕೊಡಿಸಿ, ಪ್ರವೇಶಾತಿಯನ್ನು 1991- 93ರಲ್ಲಿ ಸಮರ್ಪಕಗೊಳಿಸಲಾಗಿತ್ತು. ‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯ್ದೆ- 1976’ರ ನಿಯಮಾವಳಿಗಳನ್ನು ಉಲ್ಲಂಘಿಸಿ ಮಾನ್ಯತೆ ಕೊಡಲಾಗಿತ್ತು. ಹೀಗಾಗಿ ಇದು ಭ್ರಷ್ಟಾಚಾರ ಎಂದು ಸಿಬಿಐನ ಭ್ರಷ್ಟಾಚಾರ ನಿರ್ಮೂಲನಾ ಘಟಕ ಕೇಸು ಜಡಿದಿತ್ತು. ಸುಪ್ರಿಕೋರ್ಟಿನ ನಿರ್ದೇಶನದಂತೆ ಮೇ 10, 1996ರಲ್ಲಿ ಕೇಸು ಹಾಕಲಾಗಿತ್ತು.
ಕಾಲೇಜಿನ ಪ್ರಾಂಶುಪಾಲ ಆರ್.ಡಿ.ಪೆನ್ನತೂರ್, ಕಾಲೇಜು ಟ್ರಸ್ಟಿನ ಅಧ್ಯಕ್ಷ ಆರ್.ಬಿ.ಚೌಧುರಿ, ಬೆಂಗಳೂರು ವಿಶ್ವವಿದ್ಯಾಲಯದ ಆಗಿನ ಸಮಿತಿಯಾಂದರ ಅಧ್ಯಕ್ಷ ಎ.ಮಂಜು ಮತ್ತು ಬಂಗಾರಪ್ಪನವರ ಆಪ್ತ ಕಾರ್ಯದರ್ಶಿ ಎ.ಸೂರಿ ಬಾಬು ಪ್ರಕರಣದ ಇತರೆ ಆರೋಪಿಗಳಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 51 ಸಾಕ್ಷಿಗಳ ವಿಚಾರಣೆ ನಡೆಸಲಾಯಿತು. ಆರೋಪಕ್ಕೆ ಪುಷ್ಟಿ ಕೊಡುವಷ್ಟು ಸಾಕ್ಷ್ಯಗಳು ದೊರಕದ ಕಾರಣ ಬಂಗಾರಪ್ಪ ಆರೋಪ ಮುಕ್ತರಾದರು.
ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಬಂಗಾರಪ್ಪ ಕ್ಲಾಸಿಕ್ ಕಂಪ್ಯೂಟರ್ ಹಗರಣ ಮತ್ತು ಅಕ್ರಮ ಆಸ್ತಿ ಹೊಂದಿದ್ದಾರೆಂಬ ಆರೋಪಗಳನ್ನೂ ಹೊತ್ತಿದ್ದಾರೆ. ಈ ಪ್ರಕರಣಗಳ ಕೇಸುಗಳು ಇವತ್ತಿಗೂ ಕೋರ್ಟಿನಲ್ಲಿವೆ.
(ಪಿಟಿಐ)
ಮುಖಪುಟ / ವಾರ್ತೆಗಳು
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications