ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಳವತ್ತಿಯಲ್ಲಿ ರಾಷ್ಟ್ರೀಯ ಕಬ್ಬಡ್ಡಿ ಪಂದ್ಯಾವಳಿ

By Staff
|
Google Oneindia Kannada News

ಯಳವತ್ತಿ : ಶಿರಹಟ್ಟಿ ತಾಲ್ಲೂಕಿನ ಯಳವತ್ತಿಯ ಶ್ರೀ ಗುಂಡೇಶ್ವರ ಯುವಕ ಸಂಘ ರಾಷ್ಟ್ರ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಯನ್ನು ನಡೆಸಲು ನಿರ್ಧರಿಸಿದೆ.

ಕಳೆದ 18 ವರ್ಷಗಳಿಂದ ಗುಂಡೇಶ್ವರ ಯುವಕ ಸಂಘ ಕ್ರೀಡಾ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಈ ಬಾರಿ ಮೇ 29ರಿಂದ ಜೂನ್‌ 1ರವರೆಗೆ ಕಬ್ಬಡ್ಡಿ ಪಂದ್ಯಾವಳಿಗಳು ನಡೆಸುತ್ತಿದ್ದು , ಈ ಪಂದ್ಯಾವಳಿಗೆ ಕೆ. ಎಚ್‌. ಪಾಟೀಲ ಸ್ಮಾರಕ ಟ್ರೋಫಿ ಅಖಿಲ ಭಾರತ ಪುರುಷರ ಆಹ್ವಾನಿತ ಕಬ್ಬಡ್ಡಿ ಟೂರ್ನಿ ಎಂದು ಹೆಸರಿಡಲಾಗಿದೆ.

ಗುಂಡೇಶ್ವರ ಯುವಕ ಸಂಘ, ಗದಗ ಜಿಲ್ಲಾ ಕಬಡ್ಡಿ ಸಂಸ್ಥೆ ಸಹಯೋಗದೊಂದಿಗೆ ಈ ಟೂರ್ನಿ ನಡೆಸುತ್ತಿದ್ದು ರಾಷ್ಟ್ರದ 24 ಅಗ್ರಮಾನ್ಯ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸವೆ. ಬಿ. ಸಿ. ರಮೇಶ್‌, ಕೇರಳದ ಜಗದೀಶ್‌ ಕುಂಬ್ಳೆ, ಏಕಲವ್ಯ ಪ್ರಶಸ್ತಿ ವಿಜೇತ ದಿನೇಶ ಪ್ರಭು ಮುಂತಾದ ಪ್ರಸಿದ್ಧ ಆಟಗಾರರು ಈ ಟೂರ್ನಿಯಲ್ಲಿ ಭಾಗವಹಿಸುವರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X