ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಳವತ್ತಿಯಲ್ಲಿ ರಾಷ್ಟ್ರೀಯ ಕಬ್ಬಡ್ಡಿ ಪಂದ್ಯಾವಳಿ
ಯಳವತ್ತಿ : ಶಿರಹಟ್ಟಿ ತಾಲ್ಲೂಕಿನ ಯಳವತ್ತಿಯ ಶ್ರೀ ಗುಂಡೇಶ್ವರ ಯುವಕ ಸಂಘ ರಾಷ್ಟ್ರ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಯನ್ನು ನಡೆಸಲು ನಿರ್ಧರಿಸಿದೆ.
ಕಳೆದ 18 ವರ್ಷಗಳಿಂದ ಗುಂಡೇಶ್ವರ ಯುವಕ ಸಂಘ ಕ್ರೀಡಾ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಈ ಬಾರಿ ಮೇ 29ರಿಂದ ಜೂನ್ 1ರವರೆಗೆ ಕಬ್ಬಡ್ಡಿ ಪಂದ್ಯಾವಳಿಗಳು ನಡೆಸುತ್ತಿದ್ದು , ಈ ಪಂದ್ಯಾವಳಿಗೆ ಕೆ. ಎಚ್. ಪಾಟೀಲ ಸ್ಮಾರಕ ಟ್ರೋಫಿ ಅಖಿಲ ಭಾರತ ಪುರುಷರ ಆಹ್ವಾನಿತ ಕಬ್ಬಡ್ಡಿ ಟೂರ್ನಿ ಎಂದು ಹೆಸರಿಡಲಾಗಿದೆ.
ಗುಂಡೇಶ್ವರ ಯುವಕ ಸಂಘ, ಗದಗ ಜಿಲ್ಲಾ ಕಬಡ್ಡಿ ಸಂಸ್ಥೆ ಸಹಯೋಗದೊಂದಿಗೆ ಈ ಟೂರ್ನಿ ನಡೆಸುತ್ತಿದ್ದು ರಾಷ್ಟ್ರದ 24 ಅಗ್ರಮಾನ್ಯ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸವೆ. ಬಿ. ಸಿ. ರಮೇಶ್, ಕೇರಳದ ಜಗದೀಶ್ ಕುಂಬ್ಳೆ, ಏಕಲವ್ಯ ಪ್ರಶಸ್ತಿ ವಿಜೇತ ದಿನೇಶ ಪ್ರಭು ಮುಂತಾದ ಪ್ರಸಿದ್ಧ ಆಟಗಾರರು ಈ ಟೂರ್ನಿಯಲ್ಲಿ ಭಾಗವಹಿಸುವರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Friday, May 23, 2003, 5:30 [IST]