ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಭಕ್ತರಿಗೆ ತಿರುಪತಿಯಲ್ಲಿ ಸೌಕರ್ಯ

By Staff
|
Google Oneindia Kannada News

ಬೆಂಗಳೂರು : ತಿರುಪತಿಯಲ್ಲಿರುವ ತುಂಡು ಭೂಮಿಯ ವಿಷಯವಾಗಿ ಆಂಧ್ರಪ್ರದೇಶದ ಜೊತೆ ಇರುವ ತಕರಾರನ್ನು ಬಗೆಹರಿಸಿ, ಅಲ್ಲಿ ಪ್ರವಾಸಿಗರಿಗೆ ತಂಗುದಾಣ ನಿರ್ಮಾಣದ ಕಾಮಗಾರಿಯನ್ನು ಕೈಗೆತ್ತುಕೊಳ್ಳುವುದಾಗಿ ಕರ್ನಾಟಕ ಹೇಳಿದೆ.

ಸೋಮವಾರ (ಮಾ.3) ವಿಧಾನಸಭೆಯ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಮುಜರಾಯಿ ಸಚಿವ ಸುಮಾ ವಸಂತ್‌ ಎನ್‌.ಸಂಪಂಗಿ ಅವರ ಪ್ರಶ್ನೆಗೆ ಉತ್ತರಿಸುತ್ತಾ ಈ ವಿಷಯ ಹೇಳಿದರು. ಕರ್ನಾಟಕದ ಭಕ್ತಾದಿಗಳಿಗೆ ಸೌಲಭ್ಯ ಕಲ್ಪಿಸಲು ತಿರುಪತಿಯಲ್ಲಿ ಈಗಾಗಲೇ 43 ಲಕ್ಷ ರುಪಾಯಿಯನ್ನು ಕರ್ನಾಟಕ ಸರ್ಕಾರ ವಿನಿಯೋಗಿಸಿರುವುದಾಗಿ ಸುಮಾ ವಸಂತ್‌ ಹೇಳಿದರು.

ಆಟಗಾರರಿಗೆ ಪಿಂಚಣಿ : ಮುಂದಿನ ವಿತ್ತ ವರ್ಷದಿಂದ 50 ವರ್ಷ ತುಂಬಿದ ಎಲ್ಲಾ ಕ್ರೀಡಾಪಟುಗಳಿಗೆ ಪಿಂಚಣಿ ನೀಡುವ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚಿಸುತ್ತಿದೆ ಎಂದು ಕ್ರೀಡಾ ಮತ್ತು ಯುವಜನ ಖಾತೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ, ಎಚ್‌.ಎಸ್‌.ಶಂಕರಲಿಂಗೇಗೌಡರ ಪ್ರಶ್ನೆಗೆ ಉತ್ತರಿಸಿದರು. ಪ್ರಸ್ತುತ 557 ಕ್ರೀಡಾಪಟುಗಳಿಗೆ ಪಿಂಚಣಿ ಮಂಜೂರಾಗಿದ್ದು, ಇದಕ್ಕಾಗಿ ಸರ್ಕಾರ ವಾರ್ಷಿಕ 17 ಲಕ್ಷ ರುಪಾಯಿ ಖರ್ಚು ಮಾಡುತ್ತಿದೆ ಎಂದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X