ದೇಶೀಯ ವೈದ್ಯ ಪದ್ಧತಿಗೆ ಉತ್ತೇಜನ, ಕೃಷಿ - ಆರ್ಥಿಕ ವಲಯಕ್ಕೆ ಒತ್ತು
ನವದೆಹಲಿ : ಕೇಂದ್ರ ಅರ್ಥ ಸಚಿವ ಯಶವಂತಸಿನ್ಹ ಅವರು ಗುರುವಾರ ಮಂಡಿಸಿದ 2002-03 ಕೇಂದ್ರ ಆಯವ್ಯಯ ಸಾಮಾನ್ಯನಿಗೆ ಹೊರೆಯಾದ ಬಜೆಟ್ ಎಂದು ಪ್ರತಿಪಕ್ಷಗಳು ಬಣ್ಣಿಸಿದ್ದರೆ, ಇದೊಂದು ಶ್ರೀಸಾಮಾನ್ಯನಿಗೆ ಹೊರೆಯಾಗದ ಅಭಿವೃದ್ಧಿ ಬಜೆಟ್ ಎಂದು ಸ್ವತಃ ಸಿನ್ಹ ಅವರೇ ಘೋಷಿಸಿದ್ದಾರೆ.
ಈ ಬಾರಿಯ ಬಜೆಟ್ನಲ್ಲಿ ಕೃಷಿ ಹಾಗೂ ಆರ್ಥಿಕ ವಲಯಕ್ಕೆ ಆದ್ಯತೆ ನೀಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ದೇಶೀಯ ವೈದ್ಯ ಪದ್ಧತಿಗೆ ಉತ್ತೇಜನ ನೀಡಲಾಗಿದೆ. ಬಜೆಟ್ ಮುಖ್ಯಾಂಶಗಳು :
- ಸಾಂಸ್ಥಿಕ ಆದಾಯ ತೆರಿಗೆಯಲ್ಲೂ ಬದಲಾವಣೆ ಇಲ್ಲ
- ಅನಿವಾಸಿ ಭಾರತೀಯರಿಗೆ ವಿದೇಶೀ ಕರೆನ್ಸಿ ರೂಪದಲ್ಲೇ ಹಣವನ್ನು ಸ್ವದೇಶಕ್ಕೆ ಕಳುಹಿಸಲು ಅವಕಾಶ.
- ಅನಿವಾಸಿ ಭಾರತೀಯರ ಠೇವಣಿ ಯೋಜನೆಗಳಿಗೆ ಸಂಪೂರ್ಣ ಪರಿವರ್ತನೆಯ ಅವಕಾಶ.
- ಮ್ಯುಚುಯಲ್ ಫಂಡ್ಗಳಿಗೆ ನೀಡುತ್ತಿರುವ ತೆರಿಗೆ ವಿನಾಯಿತಿ ಮುಂದುವರಿಕೆ
- ದೇಶೀಯ ವೈದ್ಯ ಪದ್ಧತಿಗೆ ಉತ್ತೇಜನ
- ಕೃಷಿ ಸಂಶೋಧನೆಗೆ ಹೆಚ್ಚಿನ ಅನುದಾನ
- ಕಿಸಾನ್ಕಾರ್ಡ್ ಯೋಜನೆಗೆ ಮತ್ತುಷ್ಟು ಪ್ರೋತ್ಸಾಹ
- ರಸ್ತೆ, ರೈಲು, ವಿದ್ಯುತ್ ಅಭಿವೃದ್ಧಿ ಯೋಜನೆ ಗಾತ್ರ 37919 ಕೋಟಿ ರುಪಾಯಿ
- ಶ್ರೀಸಾಮಾನ್ಯನ ಪಾಲಿಗೆ ಹೊರೆಯಾದ ಬಜೆಟ್ - ಪ್ರತಿಪಕ್ಷಗಳ ಟೀಕೆ
- ಕೃಷಿ ಹಾಗೂ ಹಣಕಾಸು ವಲಯಕ್ಕೆ ಹೆಚ್ಚಿನ ಒತ್ತು
- ಜನಸಾಮಾನ್ಯರಿಗೆ ಹೊರೆಯಾಗದ ಅಭಿವೃದ್ಧಿ ಪರ ಬಜೆಟ್ - ಸಿನ್ಹ ಘೋಷಣೆ
- ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣಕ್ಕೆ 1650 ಕೋಟಿ ರುಪಾಯಿ
- ಯಂತ್ರೋಪಕರಣಗಳ ಮೇಲಿನ ಅಬ್ಕಾರಿ ಸುಂಕ ಇಳಿಕೆ
- ಮುಂದಿನ ಆರ್ಥಿಕ ವರ್ಷದಲ್ಲಿ ಬಂಡವಾಳ ವಾಪಸಾತಿ ಗುರಿ - 12 ಸಾವಿರ ಕೋಟಿ ರುಪಾಯಿ
- ಪಡಿತರ ಸಕ್ಕರೆ ಬೆಲೆ 13.50 ರು.
- ಆರು ಪ್ರವಾಸೋದ್ಯಮ ನಿಗಮಗಳ ಆರಂಭ
- ಬಂಡವಾಳ ಹೂಡಿಕೆದಾರರ ರಕ್ಷಣೆಗೆ ಕ್ರಮ
- ಯುಟಿಐ ಕಾಯಿದೆಯಲ್ಲಿ ಶಾಸನಾತ್ಮಕ ಬದಲಾವಣೆ
- ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಚತುರ್ಭುಜ ಯೋಜನೆ
- ಸೇವಾ ತೆರಿಗೆ ವ್ಯಾಪ್ತಿಗೆ ಕೇಬಲ್ ಆಪರೇಟರ್ಗಳು
- ಭೂಕಂಪದ ಶೇ.2ರಷ್ಟು ಉಪಕರ ರದ್ದು
- ಜೀವವಿಮಾ ಕಂಪನಿಗಳು ಸೇವಾ ತೆರಿಗೆ ಪಾವತಿಸಬೇಕು
- ನೇರ ತೆರಿಗೆಯ ಗುರಿ 91,585 ಕೋಟಿ ರುಪಾಯಿ
- ಐದು ಲಕ್ಷ ರುಪಾಯಿ ಮೇಲ್ಪಟ್ಟ ಆದಾಯದ ಮೇಲೆ ಯಾವುದೇ ತೆರಿಗೆ ರಿಯಾಯಿತಿ ಇಲ್ಲ
- ತೆರಿಗೆ ವಲಯದಿಂದ ಒಟ್ಟು 172,965 ಕೋಟಿ ರುಪಾಯಿ ಆದಾಯ ನಿರೀಕ್ಷೆ












Click it and Unblock the Notifications