‘ಅಕ್ಷರ ಸಂಸ್ಕೃತಿಯ ಹುಟ್ಟಿಗೆ ಮುನ್ನ ರಂಗೋಲಿ ಲಿಪಿಯಾಗಿ ಬಳಕೆಯಲ್ಲಿತ್ತು’
ಮೈಸೂರು : ಅಕ್ಷರ ಸಂಸ್ಕೃತಿಯ ಹುಟ್ಟಿಗೂ ಮುನ್ನ ರಂಗೋಲಿ ಚಿತ್ರಲಿಪಿಯಾಗಿ ಬಳಕೆಯಲ್ಲಿತ್ತು ಎಂದು ಸಂಶೋಧಕಿ ಎನ್.ಎಸ್. ದೇವಿಕಾ ಹೇಳಿದ್ದಾರೆ. ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಭಾಂಗಣದಲ್ಲಿ ರಂಗೋಲಿ ಒಂದು ವಿಶ್ಲೇಷಣೆ ಕುರಿತು ಉಪನ್ಯಾಸ ನೀಡಿದ ಅವರು, ರಂಗೊಲಿ ಹಂತ ಹಂತವಾಗಿ ಬೆಳೆದು ಸ್ವಯತ್ತ ಕಲೆಯಾದ ಪ್ರಕ್ರಿಯೆಯನ್ನು ವಿವರಿಸಿದರು.
ರಂಗೋಲಿ ಆರಂಭದಲ್ಲಿ ಮಾಟ, ಮಂತ್ರ, ತಂತ್ರದ ಕಲೆಯಾಗಿ ಬಳಕೆಯಲ್ಲಿತ್ತು. ಜ್ಯೋತಿಷ್ಯಶಾಸ್ತ್ರದಲ್ಲೂ ರಂಗೋಲಿಗೆ ಪ್ರಾಧಾನ್ಯತೆ ಇತ್ತು. ರಂಗೋಲಿಗೆ ಸುದೀರ್ಘವಾದ ಇತಿಹಾಸವಿದೆ. ಇದು ಒಂದು ಜನಪದ ಕಲೆಯೂ ಹೌದು, ಸಾಂಪ್ರದಾಯಿಕ ಕಲೆಯೂ ಹೌದು. ನಮ್ಮ ಜನಪದ, ಒಗಟು ಹಾಗೂ ಗೀತೆಗಳಲ್ಲಿ ರಂಗೋಲಿಯ ವಿಶ್ಲೇಷಣೆ ಇದೆ ಎಂದರು.
ರಂಗವಲ್ಲಿ ಅಥವಾ ರಂಗೋಲಿ ಕಲೆಗೆ ಐತಿಹಾಸಿಕ ಮತ್ತು ಪ್ರಾಗೈತಿಹಾಸಿಕ ನೆಲೆಯೂ ಇದೆ. ಈಜಿಪ್ಟ್, ಸಿಂಧೂ ಕಣಿವೆ ನಾಗರಿಕತೆಯ ಕುರುಹಾಗಿ ದೊರೆತಿರುವ ಮಡಿಕೆಗಳ ಮೇಲೂ ರಂಗವಲ್ಲಿಯ ಚಿತ್ತಾರಗಳಿವೆ ಎಂದು ಅವರು ತಿಳಿಸಿದರು. ಮನೆಯ ಮುಂದೆ ಸಗಣಿಯಿಂದ ಸಾರಿಸಿ, ಅದರ ಮೇಲೆ ಬಿಳಿಯ ರಂಗೋಲಿ ಬಿಡುವುದು ನಮ್ಮ ಸಂಪ್ರದಾಯ.
ಹಬ್ಬ ಹರಿದಿನಗಳಲ್ಲಿ ರಂಗೋಲಿಯ ಎಳೆಗಳ ನಡುವೆ ಬಣ್ಣ ತುಂಬುತ್ತಾರೆ. ಚಿತ್ತಚಿತ್ತಾರದ ಸಂಭ್ರಮದ ಸ್ವಾಗತವನ್ನು ಈ ರಂಗೋಲಿಗಳು ನೀಡುತ್ತವೆ. ರಂಗೋಲಿ ಶುಭ ಸಂಕೇತವಾಗಿ ರೂಢಿಯಲ್ಲಿದೆ ಎಂದರು. ಡಾ. ಜಯಲಕ್ಷ್ಮೀ ಸೀತಾಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.(ಮೈಸೂರು ಪ್ರತಿನಿಧಿಯಿಂದ)
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ












Click it and Unblock the Notifications