‘ಅಕ್ಷರ ಸಂಸ್ಕೃತಿಯ ಹುಟ್ಟಿಗೆ ಮುನ್ನ ರಂಗೋಲಿ ಲಿಪಿಯಾಗಿ ಬಳಕೆಯಲ್ಲಿತ್ತು’
ಮೈಸೂರು : ಅಕ್ಷರ ಸಂಸ್ಕೃತಿಯ ಹುಟ್ಟಿಗೂ ಮುನ್ನ ರಂಗೋಲಿ ಚಿತ್ರಲಿಪಿಯಾಗಿ ಬಳಕೆಯಲ್ಲಿತ್ತು ಎಂದು ಸಂಶೋಧಕಿ ಎನ್.ಎಸ್. ದೇವಿಕಾ ಹೇಳಿದ್ದಾರೆ. ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಭಾಂಗಣದಲ್ಲಿ ರಂಗೋಲಿ ಒಂದು ವಿಶ್ಲೇಷಣೆ ಕುರಿತು ಉಪನ್ಯಾಸ ನೀಡಿದ ಅವರು, ರಂಗೊಲಿ ಹಂತ ಹಂತವಾಗಿ ಬೆಳೆದು ಸ್ವಯತ್ತ ಕಲೆಯಾದ ಪ್ರಕ್ರಿಯೆಯನ್ನು ವಿವರಿಸಿದರು.
ರಂಗೋಲಿ ಆರಂಭದಲ್ಲಿ ಮಾಟ, ಮಂತ್ರ, ತಂತ್ರದ ಕಲೆಯಾಗಿ ಬಳಕೆಯಲ್ಲಿತ್ತು. ಜ್ಯೋತಿಷ್ಯಶಾಸ್ತ್ರದಲ್ಲೂ ರಂಗೋಲಿಗೆ ಪ್ರಾಧಾನ್ಯತೆ ಇತ್ತು. ರಂಗೋಲಿಗೆ ಸುದೀರ್ಘವಾದ ಇತಿಹಾಸವಿದೆ. ಇದು ಒಂದು ಜನಪದ ಕಲೆಯೂ ಹೌದು, ಸಾಂಪ್ರದಾಯಿಕ ಕಲೆಯೂ ಹೌದು. ನಮ್ಮ ಜನಪದ, ಒಗಟು ಹಾಗೂ ಗೀತೆಗಳಲ್ಲಿ ರಂಗೋಲಿಯ ವಿಶ್ಲೇಷಣೆ ಇದೆ ಎಂದರು.
ರಂಗವಲ್ಲಿ ಅಥವಾ ರಂಗೋಲಿ ಕಲೆಗೆ ಐತಿಹಾಸಿಕ ಮತ್ತು ಪ್ರಾಗೈತಿಹಾಸಿಕ ನೆಲೆಯೂ ಇದೆ. ಈಜಿಪ್ಟ್, ಸಿಂಧೂ ಕಣಿವೆ ನಾಗರಿಕತೆಯ ಕುರುಹಾಗಿ ದೊರೆತಿರುವ ಮಡಿಕೆಗಳ ಮೇಲೂ ರಂಗವಲ್ಲಿಯ ಚಿತ್ತಾರಗಳಿವೆ ಎಂದು ಅವರು ತಿಳಿಸಿದರು. ಮನೆಯ ಮುಂದೆ ಸಗಣಿಯಿಂದ ಸಾರಿಸಿ, ಅದರ ಮೇಲೆ ಬಿಳಿಯ ರಂಗೋಲಿ ಬಿಡುವುದು ನಮ್ಮ ಸಂಪ್ರದಾಯ.
ಹಬ್ಬ ಹರಿದಿನಗಳಲ್ಲಿ ರಂಗೋಲಿಯ ಎಳೆಗಳ ನಡುವೆ ಬಣ್ಣ ತುಂಬುತ್ತಾರೆ. ಚಿತ್ತಚಿತ್ತಾರದ ಸಂಭ್ರಮದ ಸ್ವಾಗತವನ್ನು ಈ ರಂಗೋಲಿಗಳು ನೀಡುತ್ತವೆ. ರಂಗೋಲಿ ಶುಭ ಸಂಕೇತವಾಗಿ ರೂಢಿಯಲ್ಲಿದೆ ಎಂದರು. ಡಾ. ಜಯಲಕ್ಷ್ಮೀ ಸೀತಾಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.(ಮೈಸೂರು ಪ್ರತಿನಿಧಿಯಿಂದ)
-
Vasudhendra: ಬರಹಗಾರ ವಸುಧೇಂದ್ರಗೆ ಹಿಂಗೇ ಮಾಡಿದ್ರೆ ನಿಮ್ ಪುಸ್ತಕ ಓದೋಕು ಯಾರು ಸಿಗಲ್ಲ ಎಂದ ನೆಟ್ಟಿಗರು -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ












Click it and Unblock the Notifications