ಕರೀಂಲಾಲಾ ವಿರುದ್ಧ ಚಾರ್ಜ್ ಷೀಟ್,ಚುರುಕಾದ ವಿಶೇಷ ದಳದ ತನಿಖೆ
ಬೆಂಗಳೂರು: ಬಹು ಕೋಟಿ ನಕಲಿ ಸ್ಟಾಂಪ್ ಪೇಪರ್ ಹಗರಣದ ಪ್ರಮುಖ ಆರೋಪಿಯ ವಿರುದ್ಧ ವಿಶೇಷ ತನಿಖಾ ತಂಡ ಹೆಚ್ಚುವರಿ ಚಾರ್ಜ್ ಷೀಟ್ ಸಲ್ಲಿಸಿದೆ.
ಫೆ.2 ರ ಶನಿವಾರ ಹಗರಣದ ಪ್ರಮುಖ ಆರೋಪಿ ಕರೀಂ ಲಾಲಾ ವಿರುದ್ಧ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ ಚಾರ್ಜ್ ಷೀಟ್ ಸಲ್ಲಿಸಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ ಅಡಿಷನಲ್ ಡಿಜಿಪಿ ಆರ್.ಶ್ರೀಕುಮಾರ್ ನೇತೃತ್ವದ ಸ್ಟಾಂಪ್ ತನಿಖಾ (STAMPIT) ದಳದ ತನಿಖೆ ಚುರುಕಾಗಿದೆ.
ಕಳೆದ ವರ್ಷದ ನವಂಬರ್ 7 ರಂದು ರಾಜಸ್ತಾನದ ಅಜ್ಮೀರ್ನಲ್ಲಿ ಕರೀಂಲಾಲಾನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಲಾಲಾ ಜಾಮೀನು ಪಡೆಯಲು ಪ್ರಯತ್ನ ನಡೆಸಿದ್ದರೂ, ವಿವಿಧ ಆಕ್ಷೇಪಗಳ ಹಿನ್ನೆಲೆಯಲ್ಲಿ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ.
10 ಸಾವಿರ ಕೋಟಿ ರುಪಾಯಿ ಮೌಲ್ಯದ ಈ ಹಗರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುವಂತೆ ವಿರೋಧ ಪಕ್ಷಗಳು ಕಳೆದ ವಾರ ವಿಧಾನ ಮಂಡಲದಲ್ಲಿ ಭಾರೀ ಕೋಲಾಹಲ ಉಂಟು ಮಾಡಿದ್ದ ಹಿನ್ನೆಲೆಯಲ್ಲಿ , ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಸರ್ಕಾರ ಮುಂದೂಡಿತ್ತು . ಹಗರಣದ ಆರೋಪಿ ಕರೀಂಲಾಲಾ ಅವರ ಸಹೋದರ ಪ್ರವಾಸೋದ್ಯಮ ಸಚಿವ ರೋಷನ್ಬೇಗ್ ಅವರ ರಾಜಿನಾಮೆಗೂ ವಿರೋಧ ಪಕ್ಷಗಳು ಒತ್ತಾಯಿಸಿದ್ದವು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...