ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಂಎ ಪಠ್ಯದಲ್ಲಿ ಕೌಟಿಲ್ಯನ ಅರ್ಥಶಾಸ್ತ್ರ ಅಳವಡಿಸಬೇಕು -ಬನ್ನಂಜೆ
ಉಡುಪಿ: ಸ್ನಾತಕೋತ್ತರ ಕಲಾ ಪದವಿಯ ಪಠ್ಯಕ್ರಮದಲ್ಲಿ ಕೌಟಿಲ್ಯನ ಅರ್ಥಶಾಸ್ತ್ರವನ್ನು ಅಳವಡಿಸಬೇಕು ಎಂದು ಬನ್ನಂಜೆ ಗೋವಿಂದಾಚಾರ್ಯರು ಸರಕಾರಕ್ಕೆ ಸಲಹೆ ಮಾಡಿದ್ದಾರೆ.
ಅವರು ಮಂಗಳವಾರ ಕನಕಮಂಟಪದಲ್ಲಿ ‘ಪ್ರಾಚೀನ ಅರ್ಥಶಾಸ್ತ್ರಗಳು’ ಎಂಬ ವಿಷಯದ ಕುರಿತು ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದರು. ಭಾರತೀಯ ಅರ್ಥ ಶಾಸ್ತ್ರ ಅನುಸರಿಸುತ್ತಿದ್ದ ಗಾಂಧೀಜಿಯನ್ನಷ್ಟೇ ಅಲ್ಲ, ಅವರು ನಂಬಿದ್ದ ಅರ್ಥಶಾಸ್ತ್ರವನ್ನೇ ಕೊಂದು ಹಾಕಲಾಗಿದೆ. ಈಗ ಪಾಶ್ಚಾತ್ಯ ಅರ್ಥಶಾಸ್ತ್ರವನ್ನೇ ಅನುಕರಣೆ ಮಾಡಲಾಗುತ್ತಿದೆ ಎಂದು ಬನ್ನಂಜೆ ವಿಷಾದಿಸಿದರು.
ಭೀಷ್ಮ ಹಾಗೂ ಕೌಟಿಲ್ಯರ ಅರ್ಥಶಾಸ್ತ್ರವನ್ನು ಎಂ.ಎ. ಪದವಿಯಲ್ಲಿ ಅಳವಡಿಸುವಂತೆ ಸರಕಾರವನ್ನು ಆಗ್ರಹಿಸಬೇಕಾಗಿದೆ ಎಂದ ಬನ್ನಂಜೆ, ರೋಗಿಗಳು ವೈದ್ಯರ ಅಜಾಗರೂಕತೆಗೆ ಬಲಿಯಾದರೆ ವೈದ್ಯರು ದಂಡ ಕಟ್ಟುವಂತೆ ಕೌಟಿಲ್ಯ ನೀಡಿದ್ದ ಸಲಹೆ ಅಮೆರಿಕಾದಲ್ಲಿ ಆಗಲೇ ಜಾರಿಯಲ್ಲಿದೆ ಎಂದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Story first published: Wednesday, January 2, 2002, 5:30 [IST]