Get Updates
Get notified of breaking news, exclusive insights, and must-see stories!

‘ಕರ್ನಾಟಕ ವಿಭಜನೆ ಮಹಿಳೆಯರ ದೃಷ್ಟಿ’ ಕುರಿತು ವಿಚಾರ ಗೋಷ್ಠಿ

ಹೊಸಪೇಟೆ : 69ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತುಮಕೂರು ಇನ್ನೂ ಸಜ್ಜಾಗುತ್ತಿರುವಾಗಲೇ, ಹೊಸಪೇಟೆಯ ಮಲ್ಲಿಗೆ ಹೋಟೆಲ್‌ ಸಭಾಂಗಣ ಚುಟುಕ ಸಾಹಿತ್ಯ ಸಮ್ಮೇಳನಕ್ಕೆ ಅಣಿಯಾಗಿದೆ. ಜನವರಿ 6ರಂದು ಇಲ್ಲಿ ಚುಟುಕಗಳ ಹೊಳೆಯೇ ಹರಿಯಲಿದೆ.

ಈ ವಿಷಯವನ್ನು ಸಾಹಿತ್ಯ ಸಮ್ಮೇಳನದ ಕಾರ್ಯದರ್ಶಿ ಪ್ರೊ. ಡಿ.ಡಿ. ಮುತಾಲಿಕಾ ದೇಸಾಯರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಸಮ್ಮೇಳನವನ್ನು ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ ಉದ್ಘಾಟಿಸಲಿದ್ದಾರೆ. ಸಮ್ಮೇಳನದಲ್ಲಿ ‘ಸಾಮಾಜಿಕ ಸಮಸ್ಯೆಗಳ ಪರಿಹಾರ ’ ಹಾಗೂ ‘ಕರ್ನಾಟಕ ವಿಭಜನೆ ಮಹಿಳೆಯರ ದೃಷ್ಟಿ’ ಎಂಬ ವಿಷಯಗಳ ಬಗ್ಗೆ ವಿಚಾರಗೋಷ್ಠಿಯನ್ನೂ ಏರ್ಪಡಿಸಲಾಗಿದೆ.

ಪ್ರತ್ಯೇಕತೆಯ ಕೂಗು ಕರ್ನಾಟಕದಲ್ಲಿ ಕೇಳಿ ಬಂದಿರುವ ಸಂದರ್ಭದಲ್ಲಿ ನಡೆಯುತ್ತಿರುವ ಈ ವಿಚಾರ ಗೋಷ್ಠಿಗೆ ಮಹತ್ವ ಬಂದಿದೆ. ಸಮ್ಮೇಳನದಲ್ಲಿ ಎಳಂಜಿ ಹನುಮಂತಶೆಟ್ಟಿ, ಪ್ರೊ. ಯು. ರಾಘವೇಂದ್ರರಾವ್‌, ವಿರೂಪಾಕ್ಷ ನಾಯಕ, ಖಾಜಾ ಹುಸೇನ್‌, ಶ್ರೀಧರ ರಾಯಸಂ, ಟಿ.ಎಂ. ಉಷಾರಾಣಿ, ಎಚ್‌. ಬಾಲರಾಜ್‌, ಸುಧಾ ಭಾಸ್ಕರ್‌ ಮೊದಲಾದವರು ಪಾಲ್ಗೊಳ್ಳುವರು ಎಂದು ಅವರು ಹೇಳಿದರು.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+