ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಡಿಕೇರಿ ಕಾಡಿನಲ್ಲಿ ಎರಡು ಪುಣ್ಯಕೋಟಿಗಳ ಕೊಂದ ಚಿರತೆ

By Staff
|
Google Oneindia Kannada News

ಮಡಿಕೇರಿ : ಸಂಪಜೆ ಅರಣ್ಯ ಪ್ರದೇಶದ ಹತ್ತಿರದ ಹಳ್ಳಿಯಾಂದರ ಎರಡು ಹಸುಗಳನ್ನು ಇತ್ತೀಚೆಗೆ ಚಿರತೆ ಕೊಂದು ಹಾಕಿರುವುದು ಪತ್ತೆಯಾಗಿದೆ.

ಹುಲ್ಲು ಮೇಯುತ್ತಿದ್ದಾಗ ಚಿರತೆ ಎರಡು ಹಸುಗಳ ಮೇಲೆ ಎರಗಿ ಕೊಂದಿದೆ ಎಂದು ಅವುಗಳ ಮಾಲೀಕ ಅರಣ್ಯಾಧಿಕಾರಿಗಳಿಗೆ ದೂರಿತ್ತಿದ್ದಾರೆ. ಈ ಘಟನೆ ಸಂಭವಿಸಿರುವ ಸುತ್ತಮುತ್ತಲ ಹಳ್ಳಿಯ ಜನರು ಈಗ ಆತಂಕದಲ್ಲಿದ್ದು, ಈ ಸಮಸ್ಯೆಗೆ ಸೂಕ್ತ ಪರಿಹಾರ ಕೊಡುವಂತೆ ಅರಣ್ಯಾಧಿಕಾರಿಗಳಿಗೆ ಮೊರೆಯಿಡುತ್ತಿದ್ದಾರೆ. ಒಮ್ಮೆ ಮಾಂಸದ ರುಚಿ ಕಂಡಿರುವ ಚಿರತೆ ಪದೇ ಪದೇ ಈ ಕೆಲಸ ಮಾಡಬಹುದು ಎಂದು ಹಸುಗಳನ್ನು ಕಳೆದುಕೊಂಡಿರುವ ವ್ಯಕ್ತಿ ಹೇಳಿದ್ದಾರೆ.

ಅರಣ್ಯಾಧಿಕಾರಿಗಳು ಮೃತ ಹಸುಗಳ ಮಾಂಸದ ತುಣುಕನ್ನು ಪರಿಶೀಲಿಸಿ, ಈ ಕೆಲಸವನ್ನು ಚಿರತೆಯೇ ಎಸಗಿದೆ ಎಂಬುದನ್ನು ದೃಢ ಪಡಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X