ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಡಿಕೇರಿ ಕಾಡಿನಲ್ಲಿ ಎರಡು ಪುಣ್ಯಕೋಟಿಗಳ ಕೊಂದ ಚಿರತೆ
ಮಡಿಕೇರಿ : ಸಂಪಜೆ ಅರಣ್ಯ ಪ್ರದೇಶದ ಹತ್ತಿರದ ಹಳ್ಳಿಯಾಂದರ ಎರಡು ಹಸುಗಳನ್ನು ಇತ್ತೀಚೆಗೆ ಚಿರತೆ ಕೊಂದು ಹಾಕಿರುವುದು ಪತ್ತೆಯಾಗಿದೆ.
ಹುಲ್ಲು ಮೇಯುತ್ತಿದ್ದಾಗ ಚಿರತೆ ಎರಡು ಹಸುಗಳ ಮೇಲೆ ಎರಗಿ ಕೊಂದಿದೆ ಎಂದು ಅವುಗಳ ಮಾಲೀಕ ಅರಣ್ಯಾಧಿಕಾರಿಗಳಿಗೆ ದೂರಿತ್ತಿದ್ದಾರೆ. ಈ ಘಟನೆ ಸಂಭವಿಸಿರುವ ಸುತ್ತಮುತ್ತಲ ಹಳ್ಳಿಯ ಜನರು ಈಗ ಆತಂಕದಲ್ಲಿದ್ದು, ಈ ಸಮಸ್ಯೆಗೆ ಸೂಕ್ತ ಪರಿಹಾರ ಕೊಡುವಂತೆ ಅರಣ್ಯಾಧಿಕಾರಿಗಳಿಗೆ ಮೊರೆಯಿಡುತ್ತಿದ್ದಾರೆ. ಒಮ್ಮೆ ಮಾಂಸದ ರುಚಿ ಕಂಡಿರುವ ಚಿರತೆ ಪದೇ ಪದೇ ಈ ಕೆಲಸ ಮಾಡಬಹುದು ಎಂದು ಹಸುಗಳನ್ನು ಕಳೆದುಕೊಂಡಿರುವ ವ್ಯಕ್ತಿ ಹೇಳಿದ್ದಾರೆ.
ಅರಣ್ಯಾಧಿಕಾರಿಗಳು ಮೃತ ಹಸುಗಳ ಮಾಂಸದ ತುಣುಕನ್ನು ಪರಿಶೀಲಿಸಿ, ಈ ಕೆಲಸವನ್ನು ಚಿರತೆಯೇ ಎಸಗಿದೆ ಎಂಬುದನ್ನು ದೃಢ ಪಡಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Friday, December 7, 2001, 5:30 [IST]