ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರಿನಿಂದ ಶಬರಿಮಲೆಗೆ ವಿಶೇಷ ಬಸ್ ಸೌಲಭ್ಯ
ಬೆಂಗಳೂರು : ಶಬರಿಮಲೆಯ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ತೆರಳುವ ಬೆಂಗಳೂರಿನ ಭಕ್ತರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ. ಈ ವಿಶೇಷ ಬಸ್ ಬೆಂಗಳೂರು ಹಾಗೂ ಪಂಪಾ ನಡುವೆ ಸಂಚರಿಸಲಿದೆ.
ಪ್ರತಿದಿನ ಬೆಳಗ್ಗೆ 11ಗಂಟೆ, ಮಧ್ಯಾಹ್ನ 1, 3 ಗಂಟೆಗೆ, ಸಂಜೆ 7 ಹಾಗೂ ರಾತ್ರಿ 9 ಮತ್ತು 10.30ಕ್ಕೆ ಈ ವಿಶೇಷ ಬಸ್ಗಳು ಕೆಂಪೇಗೌಡ ಬಸ್ ನಿಲ್ದಾಣದಿಂದ ಶಬರಿಮಲೆಯತ್ತ ಪ್ರಯಾಣ ಬೆಳೆಸಲಿವೆ. ಅದೇ ರೀತಿ ಪಂಪಾ ಬಸ್ ನಿಲ್ದಾಣದಿಂದ ಬೆಂಗಳೂರಿಗೂ ಇದೇ ಬಸ್ಗಳು ಹಿಂತಿರುಗುತ್ತವೆ.
ಬೆಂಗಳೂರು - ಪಂಪಾ ನಡುವಿನ 7 ಗಂಟೆಗಳ ಪ್ರಯಾಣದ ದರ ವಯಸ್ಕರಿಗೆ 375ರುಪಾಯಿ ಹಾಗೂ ಮಕ್ಕಳಿಗೆ 188 ರುಪಾಯಿ. ಕೆಂಪೇಗೌಡ ಬಸ್ ನಿಲ್ದಾಣ ಸೇರಿದಂತೆ, ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿರುವ ಬುಕಿಂಗ್ ಕೌಂಟರ್ಗಳಿಂದ ಮುಂಗಡ ಟಿಕೆಟ್ ಕಾಯ್ದಿರಿಸುವ ಸೌಲಭ್ಯವನ್ನೂ ನೀಡಲಾಗಿದೆ ಎಂದು ಸಾರಿಗೆ ಸಂಸ್ಥೆ ಪ್ರಕಟಣೆ ತಿಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Story first published: Friday, December 7, 2001, 5:30 [IST]