ಆನೆ ಬಂತು ಆನೆ, ದೊಡ್ಡದೊಡ್ಡ ಆನೆ ಬೆಂಗಳೂರಿಗ್ಯಾಕೆ ಬಂತು?
ಬೆಂಗಳೂರು : ಮೃಗಾಲಯದ ಬೀಡು ಮೈಸೂರಿಗೆ ಚಿರತೆ ಬಂದಿದ್ದು, ಚರಂಡಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು ಈಗ ಮರೆತ ಸುದ್ದಿ. ತಾಜಾ ಸುದ್ದಿ ಏನು ಗೊತ್ತೆ? ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಕೆರೆ ಹಳ್ಳಿಯಲ್ಲಿ ಹತ್ತಿಪ್ಪತ್ತು ಕಾಡಾನೆಗಳು ಹಿಂಡಿಂಡಾಗಿ ಪ್ರತ್ಯಕ್ಷವಾಗಿದ್ದು.
ಏನು ಬೆಂಗಳೂರಿನಲ್ಲಿ ಕಾಡೇ ಇಲ್ಲ. ಕಾಡಾನೆಗಳ ಹಿಂಡು ಹೇಗೆ ಬಂತು ಅಂತೀರಾ? ಈ ಆನೆಗಳು ಬೆಂಗಳೂರು ಬಳಿಯ ಆನೆಕಲ್, ಬನ್ನೇರುಘಟ್ಟ ಕಾಡಿನಿಂದ ಇಲ್ಲಿಗೆ ಬಂದಿದ್ದವು. ಈ ಆನೆಗಳ ಹಿಂಡನ್ನು ಮತ್ತೆ ಕಾಡಿಗೆ ಓಡಿಸಲು ಸುಮಾರು 4 ಗಂಟೆಗಳ ಕಾಲ ಶ್ರಮಪಟ್ಟ ಸ್ಥಳೀಯ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ 4 ಗಂಟೆ ಸುಮಾರಿಗೆ ಆನೆಗಳನ್ನು ಬನ್ನೇರುಘಟ್ಟದತ್ತ ಪಾದಬೆಳೆಸುವಂತೆ ಮಾಡುವಲ್ಲಿ ಯಶಸ್ವಿಯಾದರು.
ಶುಕ್ರವಾರ ಬೆಳಗ್ಗೆ 11.30ರ ಸಮಯ ಬೆಂಗಳೂರಿನಲ್ಲಿ ಮೋಡ ಮುಸುಕಿತ್ತು. ಸಣ್ಣಗೆ ಮಳೆ ಜಿನುಗುತ್ತಿತ್ತು. ಕೆಲವರು ಬೆಚ್ಚಗೆ ಕಂಬಳಿಹೊದ್ದು, ಬಿಸಿ ಕಾಫಿ ಕುಡಿಯುತ್ತಾ ಮನೆಯಲ್ಲಿ ಮೂಲೆ ಸೇರಿದ್ದರು. ಆ ಹೊತ್ತಿನಲ್ಲಿ ಮೂರು ಪುಟ್ಟ ಮರಿಗಳ ಸಹಿತ ಪ್ರತ್ಯಕ್ಷವಾದ 17 ಆನೆಗಳ ಹಿಂಡುನ್ನು ನೋಡಿದ ಕೆಲವರು, ಕೊರೆಯುವ ಚಳಿಯಲ್ಲೂ ಬೆವರಿದರು. ಗಾಬರಿಗೊಂಡು - ದಿಕ್ಕೆಟ್ಟು ಓಡಿದರು.
ಹೊಸಕೆರೆ ಹಳ್ಳಿಯ ತೋಟದಲ್ಲಿ ಅಡ್ಡಾಡಿದ ಆನೆಗಳು ಕೊನೆಗೆ ಗುಡ್ಡದ ಬಳಿ ಹೋಗಿ ಬೀಡುಬಿಟ್ಟವು. ಈ ಕಾಡಾನೆಗಳ ಹಾವಳಿಯಿಂದ ಯಾವುದೇ ರೀತಿಯ ಹಾನಿ ಆದ ವರದಿಗಳು ಬಂದಿಲ್ಲ. ಆದರೆ, ಬೆಂಗಳೂರಿಗರಿಗೆ ಬಲು ಅಪರೂಪವಾಗಿ ದೊರಕಬಹುದಾದ ಈ ದೃಶ್ಯವನ್ನು ಕಾಣಲೆಂದು ತಂಡೊಪತಂಡವಾಗಿ ಜನರು ಬಂದಿದ್ದರಿಂದ, ಹೊಸಕೆರೆಹಳ್ಳಿಯಲ್ಲಿ ಜಾತ್ರೆಯ ಸಡಗರವಿತ್ತು.
ಜನರ ಕೇಕೆ ಕೂಗಿನಿಂದ ಗಲಿಬಿಲಿಗೊಂಡು ಆನೆಗಳು ಊರಿಗೆ ನುಗ್ಗಬಹುದೆಂಬ ಭೀತಿಯಿಂದ ಅರಣ್ಯ ಇಲಾಖೆ ಸಿಬ್ಬಂದಿ ತೀವ್ರ ಕಟ್ಟೆಚ್ಚರ ವಹಿಸಿದರು. ಗುಡ್ಡದ ಬಳಿಗೆ ಸಾರ್ವಜನಿಕರು ಹೋಗದಂತೆ ತಡೆದರು. ಈ ಎಲ್ಲ ಆನೆಗಳು ಆಹಾರ ಹಾಗೂ ನೀರು ಹುಡುಕಿಕೊಂಡು ಆನೇಕಲ್ ಹಾಗೂ ಬನ್ನೇರುಘಟ್ಟ ಕಾಡಿನಿಂದ ಇಲ್ಲಿಗೆ ಗುರುವಾರ ರಾತ್ರಿ ಬಂದಿರಬಹುದೆಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. ಆದರೂ, ಜನನಿಬಿಜವಾದ ಈ ಸ್ಥಳಕ್ಕೆ ಅದೂ ಇಷ್ಟು ದೂರ ಈ ಆನೆಗಳು ಹೇಗೆ ಬಂತು ಎಂಬುದು ಅವರಿಗೂ ಆಶ್ಚರ್ಯ ತಂದಿದೆ.
ಅಂದಹಾಗೆ 17 ಆನೆಗಳ ಹಿಂಡಿನಲ್ಲಿ 4 ದೊಡ್ಡ ದಂತದ ಗಂಡಾನೆಗಳು ಹಾಗೂ 3 ಮರಿಗಳಿದ್ದವು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications