ಇಂಗ್ಲಿಷ್ ಟೀಚರ್ ಕೊಟ್ಟ ಪಂಚ್, ಇಬ್ಬರು ವಿದ್ಯಾರ್ಥಿನಿಯರು ಆಸ್ಪತ್ರೆಗೆ
ಮೈಸೂರು : ಆಟದಲ್ಲಿ ಗೆದ್ದ ಖುಷಿಯಲ್ಲಿ ಪರಸ್ಪರ ನೀರೆರೆಚಿಕೊಂಡು ಕುಣಿದಾಡುತ್ತಿದ್ದ ಇಬ್ಬರು ಹೆಣ್ಣು ಮಕ್ಕಳಿಗೆ ಇಂಗ್ಲಿಷ್ ಟೀಚರ್ ಕೊಟ್ಟ ಒದೆ ಆಸ್ಪತ್ರೆಗೆ ಸೇರುವಂತೆ ಮಾಡಿದೆ.
ಎನ್ಸಿಇಆರ್ಟಿ ನಡೆಸುತ್ತಿರುವ ಡೆಮಾನ್ಸ್ಟ್ರೇಷನ್ ಶಾಲೆಯ ಪಲ್ಲವಿ ಹಾಗೂ ಮೇಘನಾ ಎಂಬ ಎಂಟನೇ ಇಯತ್ತೆ ವಿದ್ಯಾರ್ಥಿನಿಯರೇ ಒದೆ ತಿಂದವರು. ಆಸ್ಪತ್ರೆಗೆ ಸೇರಿಸಿದ ನಂತರವೇ ಇಬ್ಬರಿಗೂ ಪ್ರಜ್ಞೆ ಬಂದಿದ್ದು. ಅಂಥಾ ಹೊಡೆತ ಗುರುವಾರ ಇಬ್ಬರಿಗೂ ಬಿದ್ದಿತ್ತು. ಪಲ್ಲವಿ ಈಗ ಮಾಮೂಲಿನ ಸ್ಥಿತಿಗೆ ಮರಳಿದ್ದಾಳೆ. ಮೇಘನಾ ಆಘಾತದಿಂದ ಪೂರ್ಣ ಪ್ರಮಾಣದಲ್ಲಿ ಹೊರ ಬಂದಿಲ್ಲ.
ಕಣ್ಣಲ್ಲಿ ನೀರು ತುಂಬಿಕೊಂಡ ಮೇಘನಾ ಹೇಳುತ್ತಾಳೆ- ನನಗೆ, ಪಲ್ಲವಿಗೆ ಮತ್ತು ಕಲ್ಯಾಣಿಗೆ ಇಂಗ್ಲಿಷ್ ಟೀಚರ್ ಸಿಕ್ಕಾಪಟ್ಟೆ ಹೊಡೆದರು. ಯಾಕೆ ಅಂತ ಗೊತ್ತಿಲ್ಲ. ನಾವೇನೂ ತಪ್ಪು ಮಾಡಲಿಲ್ಲ. ಆಟದಲ್ಲಿ ಗೆದ್ದೆವು. ಖುಷಿಯಿಂದ ನೀರೆರಚಾಡುತ್ತಿದ್ದೆವು, ಅಷ್ಟೆ.
ಪಲ್ಲವಿಗೆ ಪ್ರಕಾರ ಅದೊಂದು ಬಾಕ್ಸಿಂಗ್ ಪಂಚ್. ನಮಗೆ ಪಾಠ ಹೇಳುವವರೇ ಹೀಗೆ ಮಾಡುತ್ತಾರೆ ಅಂದರೆ ಬೇಸರವಾಗುತ್ತೆ ಎನ್ನುತ್ತಾಳವಳು. ಶಾಲೆಯ ಮುಖ್ಯ ಅಧ್ಯಾಪಕಿ ಶುಭಾ ಕೇಶವನ್ ಹೇಳುವಂತೆ- ಇದು ಶಾಲೆ ಮತ್ತು ಪೋಷಕರಿಗೆ ಸಂಬಂಧಪಟ್ಟ ವಿಷಯ. ಮುಂದಿನ ವಾರ ಈ ಬಗ್ಗೆ ಸಭೆ ಸೇರಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
ಮೇಘನಾ ತಾಯಿ ಗೀತಾ ಕ್ರುದ್ಧರಾಗಿದ್ದಾರೆ. ಮಕ್ಕಳನ್ನು ಹೊಡೆದದ್ದಲ್ಲದೆ, ನಂತರವೂ ಅವರ ಬಗ್ಗೆ ಸರಿಯಾದ ಕಾಳಜಿಯನ್ನು ವಹಿಸಿಲ್ಲ. ಈ ಕಾರಣಕ್ಕೆ ಶಾಲಾ ಆಡಳಿತ ಮಂಡಳಿಗೆ ಅವರು ದೂರು ಕೊಡಲಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಈ ವರದಿಯನ್ನು ಹೆಕ್ಕಿ ತೆಗೆದಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications