ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ತಾಪುರ ತಾಲ್ಲೂಕು ದಂಡಗುಂಡ ಗ್ರಾಮದ ಬಸ್ಸಿಗೆ ಭಾನುವಾರ ರಜೆ

By Staff
|
Google Oneindia Kannada News

ಚಿತ್ತಾಪುರ : ತಾಲ್ಲೂಕಿನ ದಂಡಗುಂಡ ಗ್ರಾಮಕ್ಕೆ ಓಡಿಸುವ ರೂಟ್‌ಬಸ್‌ಗೆ ಭಾನುವಾರ ರಜೆ ನೀಡುವ ಮೂಲಕ ಹೊಸ ಸಂಪ್ರದಾಯಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಾಂದಿ ಹಾಡಿದೆ.

ಭಾನುವಾರ ಬಂತೆಂದರೆ ದಂಡಗುಂಡ ಗ್ರಾಮಸ್ಥರಿಗೆ ಕಾಲೇ ಮೋಟಾರು. ಚಿತ್ತಾಪುರದಿಂದ 23 ಕಿಮೀ ದೂರದಲ್ಲಿರುವ ದಂಡಗುಂಡ ಗ್ರಾಮ ಈ ಭಾಗದ ಪ್ರಸಿದ್ಧ ಯಾತ್ರಾಸ್ಥಳವೂ ಹೌದು. ದಂಡಗುಂಡದ ಬಸವೇಶ್ವರ ಸ್ವಾಮಿಗೆ ತಾಲ್ಲೂಕಿನಲ್ಲಿ ಸಾವಿರಾರು ಭಕ್ತರಿದ್ದಾರೆ. ಗ್ರಾಮದ ಜನಸಂಖ್ಯೆ 2 ಸಾವಿರಕ್ಕೂ ಹೆಚ್ಚು .

ಸುತ್ತುಮುತ್ತಲಿನ ಅಳ್ಳಳ್ಳಿ ಹಾಗೂ ಸಾತನೂರು ಗ್ರಾಮಸ್ಥರಿಗೂ ಈ ಬಸ್ಸು ಸಂಪರ್ಕದ ಕೊಂಡಿಯಾಗಿದೆ. ವಾರಪೂರ್ತಿ ಸಂಚರಿಸುವ ಬಸ್ಸಿಗೆ ಭಾನುವಾರ ಮಾತ್ರ ರಜೆ. ಈ ರಜೆಗೆ ಸಂಸ್ಥೆ ನೀಡುವ ಕಾರಣ- ಆದಾಯದ ಕೊರತೆ. ಭಾನುವಾರ ಕೂಡ ಬಸ್‌ ಸಂಚಾರ ಆರಂಭಿಸಬೇಕು. ಇಲ್ಲದಿದ್ದರೆ ಡಿಪೊಗೆ ಮುತ್ತಿಗೆ ಹಾಕಲಾಗುವುದು ಎನ್ನುವುದು ಗ್ರಾಮಸ್ಥರ ಬೆದರಿಕೆ. ಅಂದಹಾಗೆ, ಈ ಸಂಪ್ರದಾಯ ಬೇರೆಡೆಗಳಲ್ಲೂ ಜಾರಿಯಲ್ಲಿದೆಯೋ ಅನ್ನುವುದು ತಿಳಿದುಬಂದಿಲ್ಲ .

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X