ಹುಬ್ಬಳ್ಳಿಯಲ್ಲಿ ರಾಜೀವ್ ದೀಕ್ಷಿತ್; ಸ್ವದೇಶಿ ಉದ್ದಿಮೆ ಉಳಿಸಲು ಕರೆ
ಹುಬ್ಬಳ್ಳಿ : ವಿದೇಶಿ ಉತ್ಪನ್ನಗಳ ಮೋಹಕ್ಕೆ ಒಳಗಾಗದೆ ಸ್ವದೇಶಿ ಉತ್ಪನ್ನಗಳನ್ನು ಬಳಸುವ ಮೂಲಕ ದೇಶದಲ್ಲಿನ ಉದ್ದಿಮೆಗಳನ್ನು ಉಳಿಸುವಂತೆ ಆಜಾದಿ ಬಚಾವೋ ಆಂದೋಲನದ ನಾಯಕ ರಾಜೀವ್ ದೀಕ್ಷಿತ ಜನತೆಗೆ ಕರೆ ನೀಡಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಬುಧವಾರ ನಡೆದ ಸ್ವದೇಶಿ ಸಣ್ಣ ಉದ್ದಿಮೆದಾರರ ಸಭೆ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ದೇಶದಲ್ಲಿನ ಉದ್ದಿಮೆಗಳ ಇಂದಿನ ದುಸ್ಥಿತಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ಕಾರಣ ಎಂದು ಆಪಾದಿಸಿದರು.
ಜಾಗತೀಕರಣ, ಉದಾರೀಕರಣ, ಖಾಸಗೀಕರಣ, ಗ್ಯಾಟ್ ಹಾಗೂ ವಿಶ್ವ ವ್ಯಾಪಾರ ಒಪ್ಪಂದಗಳಿಂದಾಗಿ ದೇಶದ ಬಹುತೇಕ ಉದ್ದಿಮೆಗಳು ದಿವಾಳಿಯಾಗಿದ್ದು , 2003 ರ ನಂತರ ಬಹುತೇಕ ಉದ್ದಿಮೆಗಳು ಕೊನೆಯುಸಿರು ಎಳೆಯಲಿವೆ. ಇಂಥ ಸಂದರ್ಭದಲ್ಲಿ ಸ್ವದೇಶಿ ಆಂದೋಲನವನ್ನು ಚುರುಕುಗೊಳಿಸುವುದು ಅನಿವಾರ್ಯವಾಗಿದೆ. ದೇಶದಲ್ಲಿನ ಕಚ್ಚಾ ವಸ್ತುಗಳ ಬೆಲೆಗೆ ಕೆಲವು ದೇಶಗಳು ಸಿದ್ಧ ವಸ್ತುಗಳನ್ನು ಮಾರುತ್ತಿವೆ. ಪರಿಸ್ಥಿತಿ ಹೀಗಿರುವಾಗ ಸ್ವದೇಶಿ ಉದ್ದಿಮೆಗಳಿಗೆ ಉಳಿಗಾಲವೆಲ್ಲಿ ಎಂದು ದೀಕ್ಷಿತ್ ಆತಂಕ ವ್ಯಕ್ತಪಡಿಸಿದರು.
ಭಾರತಕ್ಕೆ ಚೀನಾ, ಜಪಾನ್ ಮಾದರಿ
ಚೀನಾ, ಜಪಾನ್ ದೇಶಗಳು ಅಲ್ಲಿನ ಉದ್ದಿಮೆದಾರರಿಗೆ ಹಲವಾರು ಸವಲತ್ತುಗಳನ್ನು ಒದಗಿಸುತ್ತಿವೆ. 24 ಗಂಟೆಗಳ ಕಾಲ ವಿದ್ಯುತ್, ಏಕ ಹಂತದ ತೆರಿಗೆ, ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ, ರಸ್ತೆ , ನೀರು ಮುಂತಾಗಿ ಎಲ್ಲ ಸೌಲಭ್ಯಗಳನ್ನು ಆ ಸರ್ಕಾರಗಳು ಒದಗಿಸುತ್ತಿದ್ದು ರಫ್ತನ್ನು ಉತ್ತೇಜಿಸುತ್ತಿವೆ. ಭಾರತ ಸರ್ಕಾರಕ್ಕೆ ಚೀನಾ ಹಾಗೂ ಜಪಾನ್ ಮಾದರಿಯಾಗಿವೆ ಎಂದು ರಾಜೀವ್ ದೀಕ್ಷಿತ್ ಹೇಳಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಮದನ ದೇಸಾಯಿ, ಕೆ.ಬಿ.ದೇಸಾಯಿ, ಹುಬ್ಬಳ್ಳಿ ಗ್ರಾಹಕರ ವೇದಿಕೆಯ ಅಧ್ಯಕ್ಷ ಡಾ। ಅನಂತ ಹುಯಿಲಗೋಳ, ಜಸಬೀರ ಸಿಂಗ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications