ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕ್ಷುಲ್ಲಕ ಕಾರಣಕ್ಕೆ ಹಾವೇರಿಯಲ್ಲಿ ಕೋಮು ಘರ್ಷಣೆ :9 ಮಂದಿ ಬಂಧನ
ಹಾವೇರಿ : ಪ್ರಾರ್ಥನೆ ಮಾಡುವಾಗ ವಿದ್ಯುತ್ ಬಲ್ಬ್ ಹಾಕಬೇಕೋ ಬೇಡವೋ ಎಂಬ ಚರ್ಚೆ ಎರಡು ಅಲ್ಪಸಂಖ್ಯಾಕ ಕೋಮುಗಳ ನಡುವೆ ವ್ಯಾಜ್ಯಕ್ಕೆ ತಿರುಗಿ, ಇಬ್ಬರು ಗಾಯಗೊಂಡಿದ್ದು, 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬುಧವಾರ ಮಧ್ಯಾಹ್ನ ಪ್ರಾರ್ಥನಾ ಸಮಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಬಿಸಿಬಿಸಿ ಚರ್ಚೆ ನಡೆದು, ನಂತರ ಎರಡು ಅಲ್ಪಸಂಖ್ಯಾಕ ಕೋಮುಗಳ ನಡುವೆ ಮಾರಕಾಸ್ತ್ರಗಳಿಂದ ಹೊಡೆದಾಟ ಶುರುವಾಯಿತು. ಶಹರ ಠಾಣೆ ಪೊಲೀಸರು ಗಲಭೆ ಹತ್ತಿಕ್ಕಿದರು. ಪೊಲೀಸರು ಸಮಯಪ್ರಜ್ಞೆಯಿಂದ ಕೆಲಸ ಮಾಡಿ, 9 ಮಂದಿಯನ್ನು ತಕ್ಷಣವೇ ಬಂಧಿಸದೇ ಹೋಗಿದ್ದಲ್ಲಿ ಪರಿಸ್ಥಿತಿ ಇನ್ನಷ್ಟು ಪ್ರಕೋಪಕ್ಕೆ ತಿರುಗುವ ನಿರೀಕ್ಷೆಯಿತ್ತು.
(ಇನ್ಪೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Monday, December 24, 2001, 5:30 [IST]